ಮಂಗಳೂರು : ರಸ್ತೆ ಅಪಘಾತ ವಿದ್ಯಾರ್ಥಿನಿ ಸಾವು
ಮಂಗಳೂರು, ಜು. 31 : ಕಾಂಕ್ರೀಟ್ ಮಿಕ್ಸರ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ಉರ್ವಸ್ಟೋರ್ ಬಳಿ ಬುಧವಾರ ಸಂಜೆ ನಡೆದಿದೆ. ಮಂಗಳೂರಿನ ಪಶ್ಚಿಮ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ
ಅಪಘಾತದಲ್ಲಿ
ಮೃತಪಟ್ಟ
ವಿದ್ಯಾರ್ಥಿನಿಯನ್ನು
ಎಂಸಿಸಿ
ಬ್ಯಾಂಕಿನ
ಉಪಾಧ್ಯಕ್ಷ
ಹಾಗೂ
ಲಯನ್ಸ್
ಸಂಸ್ಥೆಯ
ಮಾಜಿ
ಗವರ್ನರ್
ಆಲ್ವಿನ್
ಪತ್ರಾವೊ
ಅವರ
ಪುತ್ರಿ
ಆ್ಯಂಡ್ರಿಯಾ
ಪತ್ರಾವೊ
(17)
ಎಂದು
ಗುರುತಿಸಲಾಗಿದೆ.
ನಗರದ
ಖಾಸಗಿ
ಕಾಲೇಜಿನಲ್ಲಿ
ಅವರು
ಪ್ರಥಮ
ಬಿಕಾಂ
ವ್ಯಾಸಂಗ
ಮಾಡುತ್ತಿದ್ದರು.
ಬುಧವಾರ ಸಂಜೆ ಆ್ಯಂಡ್ರಿಯಾ ಅವರು ಸ್ನೇಹಿತರ ಜೊತೆ ಬೈಕ್ ನಲ್ಲಿ ಕೂಳೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಉರ್ವಸ್ಟೋರ್ ಹಂಪ್ ಬಳಿ ಹಿಂಬದಿಯಿಂದ ಬರುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ ಬೈಕ್ ಓವರ್ ಟೇಕ್ ಮಾಡಲು ಯತ್ನಿಸಿ, ಆಗ ಅದು ಬೈಕ್ ಗೆ ಡಿಕ್ಕಿ ಹೊಡೆದಿದೆ.
ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ತಕ್ಷಣ ಆ್ಯಂಡ್ರಿಯಾ ಕೆಳಗೆ ಬಿದ್ದಿದ್ದು ಲಾರಿ ಆಕೆಯ ಮೇಲೆ ಹತ್ತಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಗರದ ಪಶ್ಚಿಮ ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.