Get Updates
Get notified of breaking news, exclusive insights, and must-see stories!

ಹೇಮಾವತಿ ನದಿಯಲ್ಲಿ ಜಲ ಸಾಹಸ ಕ್ರೀಡೆ: ಸರ್ಕಾರದಿಂದ ರಿಯಾಯಿತಿ ದರ

ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಹೇಮಾವತಿ ನದಿಯಲ್ಲಿ ಜಲ ಸಾಹಸ ಕ್ರೀಡೆ ಆಯೋಜಿಸಲಾಗಿದ್ದು, ಜಲಸಾಹಸಿಗರಿಗೆ ಸರ್ಕಾರದಿಂದ ರಿಯಾಯಿತಿ ದರ ನೀಡಲಾಗಿದೆ.

ಮಂಡ್ಯ, ಫೆಬ್ರವರಿ 2: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿಯ ಬೆಟ್ಟದ ತಪ್ಪಲಿನ ಹೇಮಾವತಿ ನದಿಯಲ್ಲಿ ಜಲಕ್ರೀಡೆಗಳನ್ನು ಆರಂಭಿಸುವ ಮೂಲಕ ಜಲಸಾಹಸ ಮಾಡಬೇಕೆಂದುಕೊಂಡಿದ್ದ ಜಲಸಾಹಸಿಗರಿಗೆ ಅವಕಾಶ ಮಾಡಿಕೊಟ್ಟಂತಾಗಿದೆ.

ಸಾಮಾನ್ಯವಾಗಿ ಹೇಮಗಿರಿ ಜಾತ್ರೆ ಸಮಯದಲ್ಲಿ ಸಾಂಪ್ರದಾಯಿಕ ದೇವರ ಕೈಂಕರ್ಯಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಇದೇ ಸಮಯದಲ್ಲಿ ಜಾತ್ರೆಗೆ ಆಗಮಿಸುವ ಯುವ ಜನತೆ ನದಿ ನೀರಲ್ಲಿ ದೋಣಿ ವಿಹಾರದೊಂದಿಗೆ ವಿವಿಧ ಜಲಕ್ರೀಡೆಗಳನ್ನು ಆಡಿ ಖುಷಿಪಡಲು ಈ ಬಾರಿ ಜಲಕ್ರೀಡೆಗಳನ್ನು ಆಯೋಜಿಸಲಾಗಿದ್ದು ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ.

ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ತೆಪ್ಪೋತ್ಸವ ಕಾರ್ಯಕ್ರಮ ನಡೆಯುತ್ತಿರುವ ಸಮಯದಲ್ಲಿಯೇ ಹೇಮಾವತಿ ನದಿಯಲ್ಲಿ ಜನರಲ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಾಹಸ ಅಕಾಡೆಮಿಯ ವತಿಯಿಂದ ಜಲ ಸಾಹಸ ಕ್ರೀಡೆಗಳನ್ನು ಆರಂಭಿಸಿರುವುದು ಜಾತ್ರೆಗೆ ಮೆರಗು ತಂದಿದೆ.

 ಮುಂಜಾಗೃತ ಕ್ರಮಗಳೊಂದಿಗೆ ಜಲಸಾಹಸ ಕ್ರೀಡೆ

ಮುಂಜಾಗೃತ ಕ್ರಮಗಳೊಂದಿಗೆ ಜಲಸಾಹಸ ಕ್ರೀಡೆ

ಈಗಾಗಲೇ ಹೇಮಗಿರಿಬೆಟ್ಟ ತಪ್ಪಲಿನ ಹೇಮಾವತಿನದಿ ಹರಿಯುವ ಸ್ಥಳವು ನಿಸರ್ಗರಮಣೀಯವಾಗಿದ್ದು, ಈ ಸುಂದರ ತಾಣವನ್ನು ನೋಡಲೆಂದು ಪ್ರವಾಸಿಗರು ಬರುತ್ತಿದ್ದರು. ಇದೀಗ ಜಾತ್ರೆಯೂ ನಡೆಯುತ್ತಿರುವುದರಿಂದ ಭಕ್ತರು ಮತ್ತು ಪ್ರವಾಸಿಗರು ಆಗಮಿಸಲಿದ್ದು, ಎಲ್ಲರ ಗಮನಸೆಳೆಯುತ್ತಿದೆ. ಈಗಾಗಲೇ ಜಲಸಾಹಸ ಕ್ರೀಡೆಗಳಿಗೆ ಕೆ.ಆರ್.ಪೇಟೆ ತಹಶೀಲ್ದಾರ್ ಎಂ.ವಿ.ರೂಪ ಅವರು ಚಾಲನೆ ನೀಡಿದ್ದು, ಅಗತ್ಯವಾಗಿ ಬೇಕಾದ ಮುಂಜಾಗರೂಕತೆಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಆಯೋಜಿಸಿರುವ ಜಲ ಸಾಹಸ ಕ್ರೀಡೆಗಳು ಯುವಜನರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದ್ದಾರೆ.

 ಎರಡು ದಿನಗಳ ಕಾಲ ಹೇಮಗಿರಿಯ ತಪ್ಪಲಿನಲ್ಲಿ ಜಲ ಸಾಹಸ ಕ್ರೀಡೆ

ಎರಡು ದಿನಗಳ ಕಾಲ ಹೇಮಗಿರಿಯ ತಪ್ಪಲಿನಲ್ಲಿ ಜಲ ಸಾಹಸ ಕ್ರೀಡೆ

ಕೆ.ಆರ್.ಪೇಟೆ ಪಟ್ಟಣದಿಂದ ಕೇವಲ 8 ಕಿ.ಮೀ ದೂರದಲ್ಲಿರುವ ಬಂಡಿಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೇಮಗಿರಿಯ ಬೆಟ್ಟದ ತಪ್ಪಲಿನಲ್ಲಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಅವರ ವಿಶೇಷ ಆಸಕ್ತಿಯ ಮೇರೆಗೆ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಎರಡು ದಿನಗಳ ಕಾಲ ಹೇಮಗಿರಿಯ ತಪ್ಪಲಿನ ಹೇಮಾವತಿ ನದಿಯಲ್ಲಿ ನಡೆಯುತ್ತಿರುವ ಜಲ ಸಾಹಸ ಕ್ರೀಡೆಗಳಲ್ಲಿ ಯುವಜನರು ಭಾಗವಹಿಸುತ್ತಿದ್ದು ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅದ್ಭುತವಾದ ರೋಮಾಂಚನಕಾರಿ ಅನುಭವವನ್ನು ಪಡೆದುಕೊಳ್ಳುತ್ತಿದ್ದಾರೆ.

ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗಿ

ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗಿ

ಬಣ್ಣ ಬಣ್ಣದ ವಿದ್ಯುತ್ ದೀಪಗಳು, ಬಾಣಬಿರುಸುಗಳು, ಹೂಕುಂದಗಳ ಸಿಡಿತದ ನಡುವೆ ಬಂಡಿಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಾಲೂಕು ಆಡಳಿತದ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಹೇಮಗಿರಿಯ ಆರಾಧ್ಯದೈವ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಯವರ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುವ ಜೊತೆಗೆ ಭಗವಂತ ಶ್ರೀರಂಗನಾಥನ ಕೃಪೆಗೆ ಪಾತ್ರರಾಗುತ್ತಿರುವುದು ವಿಶೇಷವಾಗಿದೆ.

ಸರ್ಕಾರದಿಂದ ರಿಯಾಯಿತಿ ದರ

ಸರ್ಕಾರದಿಂದ ರಿಯಾಯಿತಿ ದರ

ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ಜನರಲ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಾಹಸ ಅಕಾಡೆಮಿಯ ವತಿಯಿಂದ ನಡೆಯುತ್ತಿರುವ ಜಲ ಸಾಹಸ ಕ್ರೀಡೆಗಳಿಗೆ ಸರ್ಕಾರವು ರಿಯಾಯಿತಿ ದರವನ್ನು ಪ್ರಕಟಿಸಿದ್ದು ರಾಫ್ಟಿಂಗ್ ಗೆ 50ರೂ, ಜೆಟ್ ಸ್ಕೀ'ಗೆ 250ರೂ, ಸ್ಪೀಡ್ ಬೋಟ್'ಗೆ 150ರೂ ಹಾಗೂ ಕಯಾಕಿಂಗ್ ದೋಣಿ ವಿಹಾರಕ್ಕೆ 100ರೂ ನಂತೆ ದರ ನಿಗದಿ ಮಾಡಿದೆ.

ಕೆ.ಆರ್.ಪೇಟೆ ತಾಲೂಕು ನಿಸರ್ಗ ಸುಂದರ ತಾಣಗಳನ್ನು ಹೊಂದಿದ್ದು, ಹೇಮಾವತಿ, ಕಾವೇರಿ, ಲಕ್ಷ್ಮಣತೀರ್ಥ ನದಿ ಸಂಗಮ ಕ್ಷೇತ್ರವೂ ನಿಸರ್ಗರಮಣೀಯ ತಾಣವಾಗಿದೆ. ಈ ಸ್ಥಳಗಳಿಗೆ ಆಗಾಗ ಪ್ರವಾಸಿಗರು ಬರುತ್ತಿರುತ್ತಾರೆ. ಇದೀಗ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಜಾತ್ರೆ ನಡೆಯುತ್ತಿರುವುದರಿಂದ ಭಕ್ತರು ಮತ್ತು ಪ್ರವಾಸಿಗರು ಖುಷಿಯಿಂದ ಹೆಜ್ಜೆಹಾಕುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+