ಚಿಕ್ಕ ಮಂಡ್ಯ ಕೆರೆ ಸುತ್ತಮುತ್ತಲಿನ ನಿವಾಸಿಗಳಿಗೆ ಹಾವು, ಚೇಳು ಕಾಟ
ಮಂಡ್ಯ, ಸೆಪ್ಟೆಂಬರ್, 13: ನಗರಕ್ಕೆ ಹೊಂದಿಕೊಂಡಿರುವ ಚಿಕ್ಕ ಮಂಡ್ಯ ಕೆರೆ ಅಂಗಳದ ಖಾಲಿ ನಿವೇಶನಗಳ ಬಳಿ ಹಾಗೂ ರಸ್ತೆಯ ಬದಿಗಳಲ್ಲಿ ಮುಳ್ಳಿನ ಗಿಡಗಂಟಿಗಳು ಬೆಳೆದು ನಿಂತಿವೆ. ಹಗಲು ಹೊತ್ತಿನಲ್ಲಿಯೇ ಮಹಿಳೆಯರು ಮತ್ತು ಮಕ್ಕಳು ಕೈಯಲ್ಲಿ ಜೀವವನ್ನು ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಬರಿ ಮುಳ್ಳಿನ ಗಿಡಗಳೇ ಕಾಣುತ್ತವೆ. ಈ ಭಾಗದಲ್ಲಿ ಕಟ್ಟಿರುವ ಮನೆಗಳ ಸುತ್ತಮುತ್ತ ಮುಳ್ಳಿನ ಗಿಡಗಳು ಆವರಿಸಿಬಿಟ್ಟಿವೆ. ವಿದ್ಯುತ್ ಕಂಬಳಿಗಂತೂ ಸಹ ಸುರಳಿ ಆಕಾರದಲ್ಲಿ ಮುಳ್ಳಿನ ಗಿಡಗಳು ಸುತ್ತಿಕೊಂಡಿದ್ದು, ಲೈನ್ಗಳಿಗೆ ತಾಗುವ ಹಂತದಲ್ಲಿವೆ. ಪದೇ ಪದೇ ಮುಳ್ಳಿನ ಗಿಡಗಂಟಿಗಳು ಬೆಳೆದಂತೆಲ್ಲ ಅದನ್ನು ಕತ್ತರಿಸಲಾಗುತ್ತದೆ. ಮಾಲೀಕರು ಗಿಡಗಂಟಿಗಳನ್ನು ಜೆಸಿಬಿ ಮೂಲಕ ಸ್ವಚ್ಚಗೊಳಿಸಿದರೂ, ಮತ್ತೆ ಬೆಳೆದು ನಿಲ್ಲುತ್ತಿದೆ.

ಗಿಡಗಂಟಿಗಳಿಂದ ಬೇಸತ್ತ ಜನರು
ಗಿಡಗಳು ಬೆಳೆದ ನಂತರ ಅದನ್ನು ಮತ್ತೆ ಕಟಾವು ಮಾಡದಿರುವುದಷ್ಟೇ ಅಲ್ಲ. ಇದರಿಂದ ಇನ್ನು ಅವಾಂತರ ಹೆಚ್ಚಾಗುತ್ತದೆ ಎಂದು ಅಲ್ಲಿನ ನಿವಾಸಿಗಳ ಆರೋಪವಾಗಿದೆ. ನಾವು ಆಡು, ಕುರಿಗಳನ್ನು ಮೇಯಿಸಲು ಈ ಭಾಗಕ್ಕೆ ಬರುತ್ತೇವೆ. ಇಲ್ಲಿ ಹಗಲಿನಲ್ಲಿಯೇ ನಮಗೆ ಭಯ ಆಗುತ್ತದೆ. ಬೇರೆ ದಾರಿಯಿಲ್ಲದೇ ನಮ್ಮ ಜೀವನ ಸಾಗಿಸುವುದಕ್ಕಾಗಿ ಹಾಗೂ ಆಡು, ಕುರಿಗಳಿಗೆ ಮೇವು ಸಿಗಬೇಕು ಎನ್ನುವ ದೃಷ್ಟಿಯಿಂದ ಇಲ್ಲಿಗೆ ಬರುತ್ತೇವೆ. ಸಂಜೆ ಆಗುತ್ತಿದ್ದಂತೆ ಈ ದಾರಿಯಲ್ಲಿ ಮಹಿಳೆಯರು ಬರುವುದಕ್ಕೆ ಕಷ್ಟ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪೊದೆಗಳ ನಿರ್ಮಾಣ, ಜನರಿಗೆ ಆತಂಕ
ಗಾಡಿ ಕಾರ್ಖಾನೆ, ಶ್ರಮಿಕ ನಗರ, ಬೀಡಿ ಕಾಲೊನಿ, ಶಂಕರಪುರ ಬಡಾವಣೆಗಳನ್ನು ಒಳಗೊಂಡಂತೆ ಈ ವ್ಯಾಪ್ತಿಯಲ್ಲಿ ಗೃಹರಕ್ಷಕ ದಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಬಾಲಕರ ವಿದ್ಯಾರ್ಥಿ ನಿಲಯ ಸೇರಿದಂತೆ ಕೆಲವು ಸರ್ಕಾರಿ ಕಚೇರಿಗಳು ಇಲ್ಲಿ ಇವೆ. ಕೆಲವು ಖಾಲಿ ನಿವೇಶನಗಳು ಸೇರಿದಂತೆ ಅಲ್ಲಲ್ಲಿ ಮನೆಕಟ್ಟಿಕೊಂಡಿರುವುದು ಮತ್ತು ನಿರ್ಮಾಣ ಹಂತದ ಮನೆಗಳು ಕಂಡು ಬರುತ್ತಿವೆ. ಈ ಭಾಗದಲ್ಲಿ ಸ್ವಲ್ಪ ಸ್ವಚ್ಚತೆಗೆ ಆದ್ಯತೆ ನೀಡಿದ್ದರೂ ಸಹ ಉಳಿದ ಭಾಗದಲ್ಲಿ ಮಾತ್ರ ಕಾಡಿನೊಳಗೆ ಹೋದಂತೆ ಭಾಸವಾಗುತ್ತದೆ. ಹಗಲು ಹೊತ್ತಿನಲ್ಲಿ ನಮ್ಮ ಕಾಲೋನಿಗೆ ಹೋಗಲು ಭಯ ಆಗುತ್ತದೆ. ಮಕ್ಕಳು ಸಹ ಈ ರಸ್ತೆಯಲ್ಲಿ ಬರಲು ಭಯ ಪಡುತ್ತಾರೆ. ಮುಳ್ಳಿನ ಗಿಡಗಂಟಿಗಳು ತೋಪಿನ ರೀತಿಯಲ್ಲಿ ಕಾಣುತ್ತವೆ. ಆದರೂ ಇದರ ಬಗ್ಗೆ ನಿವೇಶನ ಮಾಲೀಕರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಆದಷ್ಟು ಬೇಗ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ನಿವಾಸಿಗಳಾದ ಮುಜಾರ್ವೀ, ಸೀಮಾ, ಸಲ್ಮಾ ಒತ್ತಾಯಿಸಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications