ಲಕ್ಷಾಂತರ ರುಪಾಯಿಯ ಶ್ರೀಕೃಷ್ಣನ ವಿಗ್ರಹ ಮಾರಲು ಯತ್ನಿಸುತ್ತಿದ್ದವರ ಬಂಧನ

ಲಕ್ಷಾಂತರ ರುಪಾಯಿ ಬೆಲೆ ಬಾಳುವ ಶ್ರೀಕೃಷ್ಣನ ವಿಗ್ರಹದ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ 8 ಮಂದಿಯನ್ನು ಪ್ರಿನ್ಸ್ ಲಾಡ್ಜ್ ನಲ್ಲಿ ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ವಿಗ್ರಹ ಯಾವ ದೇಗುಲದಿಂದ ಕಳವು ಮಾಡಿದ್ದು ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ

ಮಂಡ್ಯ, ಏಪ್ರಿಲ್ 30: ಪಂಚಲೋಹದ ಶ್ರೀಕೃಷ್ಣನ ವಿಗ್ರಹವನ್ನು ಮಾರಾಟ ಮಾಡಲು ಮುಂದಾಗಿದ್ದ ಎಂಟು ಮಂದಿ ಆರೋಪಿಗಳು ಮಂಡ್ಯದಲ್ಲಿ ಸಿಕ್ಕಿಬಿದ್ದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಐನೆಕ್ಕಿದು ಗ್ರಾಮದ ಎನ್.ಎಂ.ಸುಜನ್, ದರ್ಬೆಯ ಲಕ್ಷ್ಮಿ ಲೇಔಟ್ ನ ಮಹಮದ್ ಸುನೀಪ್, ಕರಿಯಂಗಳ ಮನೆಯ ಮಹಮ್ಮದ್ ಬಸೀರ್, ಮಂಡ್ಯದ ನೆಹರು ನಗರದ ಗೋವಿಂದರಾಜು, ತಾವರೆಗೆರೆಯ ಮುಜಾಬ್, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಲ್ಕರೆ ಗ್ರಾಮದ ಬಾಲರಾಜು, ಹಾಸನದ ಹೊಯ್ಸಳ ನಗರದ ಪುಟ್ಟಸ್ವಾಮಿ, ಬೆಂಗಳೂರಿನ ಬೆನ್ಸನ್ ಟೌನ್ ನ ರಫೀವುದ್ದೀನ್ ಬಂಧಿತರಾಗಿದ್ದಾರೆ.[ಖೈದಿಗೆ ವಿಶೇಷ ಆತಿಥ್ಯ, ಮಂಡ್ಯ ಜೈಲು ಅಧೀಕ್ಷಕ ಸತೀಶ್ ಅಮಾನತು]

Mandya police arrested 8 people, who were trying to sell Srikrisha statue

ಲಕ್ಷಾಂತರ ರುಪಾಯಿ ಬೆಲೆಬಾಳುವ ಶ್ರೀಕೃಷ್ಣನ ವಿಗ್ರಹವನ್ನು ಮಾರಾಟ ಮಾಡಲು ಈ ಎಂಟು ಮಂದಿ ಮಂಡ್ಯ ನಗರಕ್ಕೆ ಬಂದು ಪ್ರಿನ್ಸ್ ಲಾಡ್ಜ್ ನ ಕೊಠಡಿಯಲ್ಲಿ ತಂಗಿದ್ದರು. ಅಲ್ಲದೆ, ಇಲ್ಲಿಯೇ ಕುಳಿತು ವಿಗ್ರಹವನ್ನು ಮಾರಾಟ ಮಾಡುವ ವ್ಯವಹಾರ ಕುದುರಿಸುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಶ್ಚಿಮ ಠಾಣೆ ಪೊಲೀಸರಿಗೆ ಸಿಕ್ಕಿದ್ದು, ತಕ್ಷಣವೇ ದಾಳಿ ನಡೆಸಿದ್ದರಿಂದ ಆರೋಪಿಗಳು ಶ್ರೀಕೃಷ್ಣನ ಪಂಚಲೋಹದ ವಿಗ್ರಹದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಏಳು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.[ಅಂಬರೀಶ್ ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಮನವಿ]

ಇದೀಗ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಅವರಿಗೆ ವಿಗ್ರಹ ಎಲ್ಲಿಂದ ಬಂತು, ಯಾವ ದೇವಾಲಯದಿಂದ ಕಳವು ಮಾಡಲಾಗಿದೆ, ಇದರ ಹಿಂದೆ ಯಾರಿದ್ದಾರೆ ಮುಂತಾದ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+