ಸರಕಾರದ ವಿರುದ್ಧ ಮತ್ತೆ ಬೀದಿಗಿಳಿದ ಮಂಡ್ಯದ ರೈತರು
ಮಂಡ್ಯ, ಅಕ್ಟೋಬರ್, 11 : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದೆ ಭೀಕರ ಬರಗಾಲ ಆವರಿಸಿದ್ದರೂ ತಮಿಳುನಾಡಿಗೆ ನೀರು ಹರಿಸಿರುವುದರಿಂದ ಜಿಲ್ಲೆಯ ಬೆಳೆಗಳು ಒಣಗಿದ್ದು, ಸರ್ಕಾರ ಕೂಡಲೇ ಬೆಳೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟಿಸುತ್ತಿದ್ದ 100ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಬೋರಾಪುರ ಶಂಕರೇಗೌಡ ಅವರ ನೇತೃತ್ವದಲ್ಲಿ ನಗರದ ಹೊರವಲಯ ವಿ.ಸಿ. ಫಾರಂ ಗೇಟ್ ಬಳಿ ಜಮಾಯಿಸಿದ ರೈತರು, ತಮಿಳುನಾಡಿಗೆ ನೀರು ಹರಿಸಿರುವುದರಿಂದ ಬೆಳೆಗಳು ಒಣಗಿ, ಭಾರಿ ನಷ್ಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳೆ ಪರಿಹಾರ ನೀಡುತ್ತೇನೆ ಎಂದು ಹೇಳಿ ಹಲವು ದಿನ ಕಳೆದಿವೆ. ಕೂಡಲೇ ಪ್ರತಿ ಎಕರೆಗೆ 40 ಸಾವಿರ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ನೀರು ಬಿಡುವುದಿಲ್ಲ ಎಂದು ಹೇಳುತ್ತಲೇ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ನ ಆದೇಶಕ್ಕೆ ತಲೆಬಾಗಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಕೆ.ಆರ್.ಎಸ್.ನಿಂದ ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ಜನ-ಜಾನುವಾರುಗಳ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟ ನಡೆಸುತ್ತಿದ್ದ ಸಂದರ್ಭ ಬೆಳೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇನ್ನೂ ಈಡೇರಿಲ್ಲ ಎಂದು ಕಿಡಿಕಾರಿದರು.
ಕಬ್ಬು, ಬಾಳೆ, ತೆಂಗು ಬೆಳೆಗಳಿಗೂ ನಷ್ಟದ ಮೊತ್ತ ಆಧರಿಸಿ ಪರಿಹಾರ ನೀಡಬೇಕು. ಕೂಡಲೇ ಕೆರೆ-ಕಟ್ಟೆಗಳ ಹೂಳೆತ್ತಿಸಿ ನೀರು ತುಂಬಿಸಬೇಕು, ಕಾವೇರಿ ಹಾಗೂ ಮಹದಾಯಿ ಹೋರಾಟಗಾರರ ಮೇಲೆ ಹೂಡಲಾಗಿರುವ ಎಲ್ಲಾ ರೀತಿಯ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಮೈಷುಗರ್
ಆರಂಭಿಸಿ:
ರೈತರ
ಜೀವನಾಡಿಯಾಗಿದ್ದ
ಮೈಸೂರು
ಸಕ್ಕರೆ
ಕಾರ್ಖಾನೆಯ
ಬಾಯ್ಲರ್
ದುರಸ್ತಿ
ನೆಪದಲ್ಲಿ
ಕಳೆದ
ಎರಡು
ವರ್ಷಗಳಿಂದ
ಕಾರ್ಖಾನೆಯನ್ನು
ಆರಂಭಿಸದಿರುವುದರಿಂದ
ಕಬ್ಬು
ಬೆಳೆಗಾರರು
ಸಂಕಷ್ಟಕ್ಕೆ
ಸಿಲುಕಿದ್ದಾರೆ.
ಕಾರ್ಖಾನೆ
ಆರಂಭಿಸಿ,
ರೈತರ
ಹಿತ
ಕಾಯಬೇಕು
ಎಂದು
ಆಗ್ರಹಿಸಿದರು.
ಮೈಷುಗರ್ನ ದುಸ್ಥಿತಿಗೆ ಕಾರಣರಾದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ತನಿಖೆ ನಡೆಸಬೇಕು. ಅಲ್ಲದೆ, ಕಾರ್ಖಾನೆಯಲ್ಲಿ ಇಲ್ಲಿವರೆಗೆ ನಡೆದಿರುವ ಎಲ್ಲಾ ರೀತಿಯ ಅವ್ಯವಹಾರಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಜಿಲ್ಲೆಯಲ್ಲಿ ಬರ ಮತ್ತು ಬೆಳೆ ನಷ್ಟ ಉಂಟಾಗಿರುವ ಕಾರಣ ಜೀವನ ನಿರ್ವಹಿಸಲು ಸರ್ಕಾರ ಈ ಹಿಂದೆ ನೀಡುತ್ತಿದ್ದಂತೆ ಪಡಿತರ ಅಕ್ಕಿಯನ್ನು 30 ಕೆ.ಜಿ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ರೈತರ
ಬಂಧನ:
ರೈತರ
ಪ್ರತಿಭಟನೆಯ
ವಿಷಯ
ತಿಳಿದು
ಸ್ಥಳಕ್ಕಾಗಮಿಸಿದ
ಡಿವೈಎಸ್ಪಿ
ಚಂದ್ರಶೇಖರ್,
ವೃತ್ತ
ನಿರೀಕ್ಷಕ
ಲೋಕೇಶ್
ಅವರು
ದಸರಾ
ಮಹೋತ್ಸವದ
ಹಿನ್ನೆಲೆಯಲ್ಲಿ
ಧರಣಿಯನ್ನು
ಕೈಬಿಡುವಂತೆ
ಮನವಿ
ಮಾಡಿದರು.
ಆದರೆ,
ರೈತರು
ಪರಿಹಾರ
ಘೋಷಿಸುವವರೆಗೂ
ಧರಣಿಯನ್ನು
ಕೈಬಿಡುವುದಿಲ್ಲ
ಎಂದು
ಪಟ್ಟು
ಹಿಡಿದರು.
ಇದರಿಂದಾಗಿ ಪ್ಯಾರಾ ಮಿಲಿಟರಿ ಪಡೆ ಹಾಗೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬೋರಾಪುರ ಶಂಕರೇಗೌಡ, ಸುಧೀರ್ ಕುಮಾರ್, ಚಂದ್ರಶೇಖರ್, ವಿಶ್ವನಾಥ್, ದೊಡ್ಡಪಾಳ್ಯ ದಿನೇಶ್ ಮಂಜೇಶ್ಗೌಡ, ಇಂಡುವಾಳು ಬಸವರಾಜು ಸೇರಿದಂತೆ 100ಕ್ಕೂ ಹೆಚ್ಚು ರೈತರನ್ನು ಬಂಧಿಸಿದರು. ಬಂಧಿತ ರೈತರನ್ನು ಪೊಲೀಸ್ ಪರೇಡ್ ಮೈದಾನಲ್ಲಿರಿಸಿದ್ದರು.