Get Updates
Get notified of breaking news, exclusive insights, and must-see stories!

ಲೋಕಸಭೆಗೆ ಸ್ಪರ್ಧೆ: ಮನದ ಇಂಗಿತವನ್ನು ಹೊರಗೆಡವಿದ ಸಂಸದೆ ಸುಮಲತಾ

ಮಂಡ್ಯ, ಅಕ್ಟೋಬರ್‌ 11: ಸಂಕಷ್ಠ ಸೂತ್ರ ರಚನೆಯಿಂದ ಮಾತ್ರ ಕಾವೇರಿ ಜಲ ವಿವಾದಕ್ಕೆ ಶಾಶ್ವತ ಪರಿಹಾರ ಸಾಧ್ಯ ಎಂದು ಸಂಸದೆ ಸುಮಲತಾ ಸ್ಪಷ್ಟಪಡಿಸಿದ್ದಾರೆ.

ಪಟ್ಟಣದಲ್ಲಿರುವ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರ ನಿವಾಸದಲ್ಲಿ ಮಾಜಿ ಸಚಿವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಡಿದ ಅವರು,ಕಾವೇರಿ ವಿಚಾರದಲ್ಲಿ ಜಿಲ್ಲೆಯ ಜನ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡುತ್ತಿದ್ದಾರೆ. ಒಬ್ಬ ಸಂಸದೆಯಾಗಿ ನಾನು ಆರೀತಿ ಮಾತನಾಡಲಾಗುವುದಿಲ್ಲ ಎಂದು ಹೇಳಿದರು.

I Will Again Contest For Lok Sabha Election From Mandya - MP Sumalatha

ಜನರನ್ನು ಮೆಚ್ಚಿಸಲು ಒಂದು ಹನಿ ನೀರನ್ನು ಬಿಡುವುದಿಲ್ಲ ಎಂದು ಹೇಳುವುದು ಸುಲಭ. ಆದರೆ ಅದರ ಅನುಸರಣೆ ಕಷ್ಟ ಸಾಧ್ಯ. ಕಾವೇರಿ ವಿಚಾರದಲ್ಲಿ ಪ್ರಧಾನ ಮತ್ರಿಗಳು ಮಧ್ಯ ಪ್ರವೇಶಿಸಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಪ್ರಧಾನಿಗಳ ಮಧ್ಯ ಪ್ರವೆಶದಿಂದ ಕಾವೇರಿ ಸಮಸ್ಯೆ ಪರಿಹಾರವಾಗುವುದಿದ್ದರೆ ಅಂದು ಎಂದೂ ಸಾಧ್ಯವಾಗುತ್ತಿತ್ತು ಎಂದರು.

ಈ ಹಿಂದೆ ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಂದು ಕೇಂದ್ರ ಸಚಿವರಾಗಿದ್ದ ಅಂಬರೀಶ್ ಕಾವೇರಿಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು. ಇಂದು ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೆಶಿಸಬೇಕು ಎನ್ನುತ್ತಿರುವವರು ಅಂದು ಏಕೆ ಮಾತನಾಡಲಿಲ್ಲ? ಎಂದು ಪ್ರಶ್ನಿಸಿದ ಸುಮಲತಾ ಪ್ರಧಾನಿಗಳ ಮದ್ಯ ಪ್ರವೇಶದಿಂದ ಸಮಸ್ಯೆ ಬಗೆಹರಿಯುವಂತಿದ್ದರೆ ಅಂದಿನ ಪ್ರಧಾನಿಗಳೇ ಮಧ್ಯ ಪ್ರವೇಶಿಸುತ್ತಿದ್ದರೆಂದರು.

ನಾನು ಪ್ರಧಾನ ಮಂತ್ರಿಗಳ ಪರ ಮಾತನಾಡುತ್ತಿಲ್ಲ. ಆದರೆ ದೇಶದ ಕಾನೂನಿನ ಇತಿಮಿತಿಯಲ್ಲಿ ಮಾತನಾಡುತ್ತಿದ್ದೇನೆ. ಕಾವೇರಿ ನೀರಿನ ವಿಚಾರದಲ್ಲಿ ನಾವು ನಮ್ಮ ಜಿಲ್ಲೆಯ ರೈತರ ಹಿತ ರಕ್ಷಣೆಗೆ ಮೊದಲ ಆಧ್ಯತೆ ಎಂದ ಸಂಸದರು, ಕಾವೇರಿ ವಿಚಾರದಲ್ಲಿ ತಮಿಳು ನಾಡಿನವರಂತೆ ನಾವು ಗಟ್ಟಿ ಹೋರಾಟ ಮಾಡುವುದರಲ್ಲಿ ವಿಫಲರಾಗಿದ್ದೇವೆ. ಕರ್ನಾಟಕ ಮತ್ತು ತಮಿಳು ನಾಡಿನ ಸರ್ಕಾರಗಳು ಪರಸ್ಪರ ಕೂತು ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆಂದು ಅಭಿಪ್ರಾಯಪಟ್ಟರು.

I Will Again Contest For Lok Sabha Election From Mandya - MP Sumalatha

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರದಲ್ಲಿ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಸುಮಲತಾ, ಮೈತ್ರಿ ಎನ್ನುವುದು ಕೇವಲ ರಾಜಕೀಯ ಹೊಂದಾಣಿಕೆ. ಹೊಂದಾಣಿಕೆಯೇ ಬೇರೆ, ಟಿಕೆಟ್ ಹಂಚಿಕೆಯೇ ಬೇರೆ. ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯವನ್ನು ಕೇಳಬೇಕು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯಿಂದ ಚುನಾಯಿತರಾಗಿದ್ದ ಏಕೈಕ ಮೊದಲ ಶಾಸಕರೆಂದರೆ ಅದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು. ಜಿಲ್ಲೆಯ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಮೊದಲು ನಾರಾಯಣಗೌಡರ ಅಭಿಪ್ರಾಯ ಕೇಳಬೇಕು. ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ ಪಕ್ಷಕ್ಕೆ ಹಿನ್ನಡೆಯಾಗುವುದು ಖಚಿತ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಕರಿಯನ್ನು ಮೆಚ್ಚಿ ನಾನು ಇತ್ತೀಚೆಗೆ ಬಿಜೆಪಿಗೆ ಬೆಂಬಲ ಪ್ರಕಟಿಸಿದ್ದೇನೆ. ಮೈತ್ರಿ ವಿಚಾರದಲ್ಲಿ ನನ್ನ ತೀರ್ಮಾನ ಹೇಳಿದರೆ ಕೆಲವರಿಗೆ ಸಂಕಟವಾಗಬಹುದು. ಮೈತ್ರಿ ವಿಚಾರದಲ್ಲಿ ನನ್ನ ತೀರ್ಮಾನದ ಬಗ್ಗೆ ಕುತೂಹಲ ಕಡೆಯವರೆಗೂ ಹಾಗೆ ಇರಬೇಕು ಎಂದ ಸುಮಲತಾ ಜಿಲ್ಲೆಯ ಜನ ಸಹಕಾರ ನೀಡಿದರೆ ಮತ್ತೆ ನಾನು ಮಂಡ್ಯದಿಂದಲೇ ಲೋಕಸಭೆಗೆ ಸ್ಪರ್ಧಿಸುತ್ತೇನೆಂದರು.

ಜೆಡಿಎಸ್ ಜೊತೆ ಸೇರಿ ಕೆಲಸ ಮಾಡುವುದು ಸಾಧ್ಯವಿಲ್ಲ- ಕೆ.ಸಿ.ನಾರಾಯಣಗೌಡ

ಈ ವೇಳೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, 'ಸುಮಲತಾ ಅವರು ನಮ್ಮ ಪಕ್ಷದ ಸಂಸದರು. ಇವರಿಗೆ ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕೆಂದರು. ಜಿಲ್ಲೆಯಲ್ಲಿ ಜೆಡಿಎಸ್ ಪ್ರಭಾವ ದಟ್ಟವಾಗಿದೆ ಎನ್ನುವುದು ಸುಳ್ಳು. ಈ ಹಿಂದೆ ಜಿಲ್ಲೆಯಲ್ಲಿ ನಾನೂ ಸೇರಿದಂತೆ ಎಂಟು ಜೆಡಿಎಸ್ ಪಕ್ಷದ ಶಾಸಕರಿದ್ದರೂ ಪಕ್ಷೇತರರಾಗಿ ಸುಮಲತಾ ಆಯ್ಕೆಯಾಗಿದ್ದಾರೆ. ನಾನು ಕಳೆದ ಸಂಸತ್ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಶಾಸಕನಾಗಿದ್ದ ಕಾರಣ ಅಂದು ಸುಮಲತಾ ಪರ ಕೆಲಸ ಮಾಡಿಲ್ಲ. ಅಂಬರೀಶ್ ಅವರಿಂದ ನನಗೆ ಸಾಕಷ್ಟು ಅನುಕೂಲವಾಗಿದೆ'.

'ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದರೆ ನಾನು ಅಂಬರೀಶ್ ಅವರ ಋಣ ತೀರಿಸಲು ಒಂದು ಅವಕಾಶ ದೊರಕುತ್ತದೆ. ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ಅನುಭವಿಸಿದ ಕಾಟ ಹೇಳಿಕೊಳ್ಳುವಂತಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ನಾನು ಕೂಡ ಕಾರಣಕರ್ತ. ಎಂ.ಪಿ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ಹಂಚಿಕೆಯ ವೇಲೆ ಪಕ್ಷ ನನ್ನ ಅಭಿಪ್ರಾಯವನ್ನೂ ಕೆಳಬೇಕು. ಜೆಡಿಎಸ್ ಜೊತೆ ಮೈತ್ರಿಗೆ ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ. ಮೈತ್ರಿಯಾದರೆ ಜೆಡಿಎಸ್ ಜೊತೆ ಸೇರಿ ಕೆಲಸ ಮಾಡುವುದು ನನ್ನಿಂದ ಸಾಧ್ಯವಿಲ್ಲ 'ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+