ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?
Recommended Video

ಮಂಡ್ಯ, ಮಾರ್ಚ್ 29: ಮಂಡ್ಯದ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ಇಂದು ಚುನಾವಣಾ ಆಯೋಗವು ಚುನಾವಣಾ ಚಿಹ್ನೆ ನೀಡಿದೆ.
ಸುಮಲತಾ ಅವರು ಎತ್ತುಗಳನ್ನು ಹಿಡಿದಿರುವ ರೈತ, ಕಬ್ಬನ ತೋಟ, ಕಹಳೆ ಊದುತ್ತಿರುವ ರೈತನ ಚಿಹ್ನೆಯನ್ನು ಕೊಡಿರೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಮೊದಲಿಗೆ ಅವರಿಗೆ ತಳ್ಳುವ ಗಾಡಿಯ ಗುರುತು ನೀಡಲಾಗಿತ್ತು, ಆ ನಂತರ ಅದು ಬದಲಾಗಿ ಕಹಳೆ ಊದುವ ವ್ಯಕ್ತಿಯ ಗುರುತು ದೊರೆಯಿತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲಕ್ಕಿ ಡ್ರಾ ಮೂಲಕ ಚಿಹ್ನೆಯನ್ನು ಆಯ್ಕೆ ಮಾಡಲಾಯಿತು, ಸುಮಲತಾ ಪಾಲಿಗೆ ತಳ್ಳುವ ಗಾಡಿಯ ಗುರುತು ಸಿಕ್ಕಿತು. ಅಂತಿಮವಾಗಿ ಕಹಳೆ ಊದುವ ವ್ಯಕ್ತಿಯ ಚಿಹ್ನೆ ಯಾರಿಗೂ ಸಿಗದೇ ಇದ್ದಾಗ ಅದನ್ನು ಸುಮಲತಾ ಅವರ ಬೇಡಿಕೆಯಂತೆ ಅವರಿಗೆ ನೀಡಲಾಯಿತು.

ಸುಮಲತಾ ಅವರು ಬೇಡಿಕೆ ಇಟ್ಟಿದ್ದ ಚಿಹ್ನೆಯೇ ಅವರಿಗೆ ದೊರೆತಿದೆ. ಜೆಡಿಎಸ್ ನ ತೆನೆ ಹೊತ್ತ ರೈತ ಮಹಿಳೆಗೆ ಎದುರಾಗಿ ರೈತನನ್ನು ಬಿಂಬಿಸುವ ಚಿಹ್ನೆಗಳನ್ನೇ ಅವರು ಕೇಳಿದ್ದರು. ತಲೆಗೆ ಪೇಟ ಕಟ್ಟಿಕೊಂಡು ಕಹಳೆ ಊದುತ್ತಿರುವ ವ್ಯಕ್ತಿ ಸುಮಲತಾ ಅವರ ಚುನಾವಣಾ ಗುರುತಾಗಿದೆ.

ಮಂಡ್ಯ ಅಖಾಡದಲ್ಲಿ 22 ಅಭ್ಯರ್ಥಿಗಳು
ಮಂಡ್ಯ ಚುನಾವಣಾ ಕಣದಲ್ಲಿ 22 ಮಂದಿ ಅಭ್ಯರ್ಥಿಗಳು ಇದ್ದಾರೆ. ಇದರಲ್ಲಿ ಬಹುತೇಕರು ಪಕ್ಷೇತರ ಅಭ್ಯರ್ಥಿಗಳು, ಸುಮಲತಾ ಹೆಸರಿನ ಇನ್ನೂ ಇಬ್ಬರು ಮಹಿಳೆಯರು ಕಣದಲ್ಲಿದ್ದಾರೆ.

ಬಿ-ಫಾರಂ ಪಡೆದವರ ಹೆಸರು ಮೇಲೆ
ಪಕ್ಷದ ಬಿ-ಫಾರಂ ಪಡೆದಿರುವ ಅಭ್ಯರ್ಥಿಗಳ ಹೆಸರು ಮತ್ತು ಚಿತ್ರಗಳು ಮತದಾನದ ಇವಿಎಂ ಮಷೀನ್ನಲ್ಲಿ ಮೇಲೆ ಹಾಕಲಾಗುತ್ತದೆ, ಆ ನಂತರ ಅಲ್ಫಾಬೆಟಿಕ್ ಆಧಾರದಲ್ಲಿ ಪಕ್ಷೇತರ ಅಭ್ಯರ್ಥಿಯ ಹೆಸರು ಹಾಕಲಾಗುತ್ತದೆ.

ಇವಿಎಂನಲ್ಲಿ ಅಭ್ಯರ್ಥಿ ಚಿತ್ರ ಇರಲಿದೆ
ಚುನಾವಣಾ ಚಿಹ್ನೆ ಅವರ ಆಯ್ಕೆಯದ್ದು ಸಿಗದಿದ್ದರೂ ಸಹ ಈಗ ಸಿಕ್ಕಿರುವ ಚಿಹ್ನೆಯ ಮೂಲಕ, ನಾಳೆಯಿಂದ ಚುನಾವಣಾ ಸಹಿತ ಕರಪತ್ರಗಳ ಮೂಲಕ ಸುಮಲತಾ ಅವರು ಪ್ರಚಾರ ಮಾಡುವವರಿದ್ದಾರೆ. ಇವಿಎಂನಲ್ಲಿ ಹೆಸರು, ಚಿಹ್ನೆಯ ಜೊತೆಗೆ ಅಭ್ಯರ್ಥಿಯ ಚಿತ್ರ ಸಹ ಇರುವ ಕಾರಣ ಸುಮಲತಾ ಅವರು ಹೆಚ್ಚಿನ ಆತಂಕಪಡುವ ಹಾಗಿಲ್ಲ.

ನಿಖಿಲ್-ಸುಮಲತಾ ನಡುವೆ ಭರ್ಜರಿ ಪೈಪೋಟಿ
ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ನಡುವೆ ಮಂಡ್ಯದ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪೈಪೋಟಿ ಎದುರಾಗಿದೆ. ಇಬ್ಬರೂ ಶಕ್ತಿಮೀರಿ ಚುನಾವಣಾ ಪ್ರಚಾರ ಮಾಡುತ್ತಿದ್ದು, ಮತದಾನವು ಏಪ್ರಿಲ್ 18 ರಂದು ನಡೆಯಲಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications