ಕಾವೇರಿ ವಿವಾದ : ಮಂಡ್ಯದಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ
ಮಂಡ್ಯ, ಸೆಪ್ಟೆಂಬರ್ 19 : ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ. ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಇಂದು ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಮಂಡ್ಯದಲ್ಲಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ನವದೆಹಲಿಯಲ್ಲಿ
ಕೇಂದ್ರ
ಜಲಸಂಪನ್ಮೂಲ
ಸಚಿವಾಲಯ
ಕಾರ್ಯದರ್ಶಿ
ಶಶಿಶೇಖರ್
ಅಧ್ಯಕ್ಷರಾಗಿರುವ
ಕಾವೇರಿ
ಮೇಲುಸ್ತುವಾರಿ
ಸಮಿತಿ
ಸಭೆ
ಇಂದು
ನಡೆಯಲಿದೆ.
ಸಮಿತಿ
ಸದಸ್ಯ
ಕರ್ನಾಟಕ
ಸರ್ಕಾರದ
ಮುಖ್ಯಕಾರ್ಯದರ್ಶಿ
ಅರವಿಂದ
ಜಾಧವ್
ಅವರು,
ರಾಜ್ಯದಲ್ಲಿನ
ನೀರಿನ
ಕೊರತೆ
ಬಗ್ಗೆ
ಸಮಿತಿಗೆ
ಮನವರಿಕೆ
ಮಾಡಿಕೊಡಲಿದ್ದಾರೆ.[ಕಾವೇರಿ
ವಿವಾದ
:
ಸೆ.19ರಂದು
ಹೊಸೂರು-ಕರ್ನಾಟಕ
ಗಡಿ
ಬಂದ್]
ಕರ್ನಾಟಕದ ಪರವಾಗಿ ತೀರ್ಪು ಬಾರದಿದ್ದರೆ ಮಂಡ್ಯದಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಮಂಡ್ಯ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.[ಕಾವೇರಿ ಗಲಭೆ : ಕರ್ನಾಟಕ, ತಮಿಳುನಾಡು ಕಿವಿ ಹಿಂಡಿದ ಕೋರ್ಟ್]
ಸೆಪ್ಟೆಂಬರ್ 12ರಂದು ಸಮಿತಿ ಸಭೆ ನಡೆದಿತ್ತು. ಜಲಾಶಯಗಳಲ್ಲಿನ ನೀರಿನ ಸಂಗ್ರಹ, ನೀರಿನ ಬೇಡಿಕೆ, ಮಳೆ ಪ್ರಮಾಣದ ಸಮಗ್ರ ದಾಖಲೆಯನ್ನು ಸಲ್ಲಿಸುವಂತೆ ಸಮಿತಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳಿಗೆ ಸೂಚನೆ ನೀಡಿತ್ತು ಮತ್ತು ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿತ್ತು.[ತಮಿಳುನಾಡಿಗೆ ನೀರು, ನೆಲಕಚ್ಚುತ್ತಿದೆ ಕೆಆರ್ ಎಸ್ ನೀರಿನ ಮಟ್ಟ]
ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಮಿಳುನಾಡು ಗಡಿ, ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸೆಪ್ಟೆಂಬರ್ 25ರ ತನಕ ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.[ತಮಿಳುನಾಡು ಬಂದ್, ಕರ್ನಾಟಕದ ವಿರುದ್ಧ ಜಾಥಾ]
ಸೆ.20ರಂದು ವಿಚಾರಣೆ : ಮತ್ತೊಂದು ಕಡೆ ಸುಪ್ರೀಂಕೋರ್ಟ್ ಸೆ.20ರ ತನಕ ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ನಾಳೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯಲಿರುವ ಹಿನ್ನಲೆಯಲ್ಲಿ ಇಂದಿನ ಉಸ್ತುವಾರಿ ಸಮಿತಿ ತೀರ್ಪು ಮಹತ್ವ ಪಡೆದಿದೆ.