ಅತಿವೃಷ್ಟಿ ಪರಿಸ್ಥಿತಿ ಎದುರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲ: ಮಂಡ್ಯದಲ್ಲಿ ಚಲುವರಾಯಸ್ವಾಮಿ ಆರೋಪ
ಮಂಡ್ಯ, ಸೆಪ್ಟೆಂಬರ್, 07: ಅತಿವೃಷ್ಟಿ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕನಿಷ್ಠ ಪ್ರಮಾಣದಲ್ಲೂ ಜನರಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಮಂಡ್ಯದಲ್ಲಿ ಕಿಡಿಕಾರಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ''ಕಾನೂನು ಸಚಿವ ಮಾಧುಸ್ವಾಮಿ ಹೇಳಿದಂತೆ ಈ ಸರ್ಕಾರವನ್ನು ಮ್ಯಾನೇಜ್ ಮಾಡಿಕೊಂಡು ಹೋಗುತ್ತಿದ್ದಾರೆಯೇ ವಿನಃ, ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಿಲ್ಲ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದರು. ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಅವ್ಯವಹಾರ, ಎಲ್ಲ ಕಡೆ ಭ್ರಷ್ಟಾಚಾರ ತಾಂಡವವಾಡುತ್ತಿರುವುದನ್ನು ನೋಡಿದ್ದೇವೆ. ಈಗ ಮಳೆರಾಯ ಬಿಟ್ಟುಬಿಡದೆ ರಾಜ್ಯದ ಜನರನ್ನು ಕಾಡುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಕನಿಷ್ಟ ಸೌಲಭ್ಯವನ್ನು ನೀಡಬೇಕಾದ ಸರ್ಕಾರ ಕೇವಲ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ. ಬೇರೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ'' ಎಂದು ಟೀಕಿಸಿದರು.
ಮಳೆಯಿಂದ ಮಂಡ್ಯ ಜಿಲ್ಲೆಯಲ್ಲಿ 750 ಕೋಟಿ ರೂ. ಹಾನಿ, ಹಂತ ಹಂತವಾಗಿ ಪರಿಹಾರ
ರೈತರು, ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರ್ಯಾಯ ವ್ಯವಸ್ಥೆಯೇ ಇಲ್ಲದಂತಾಗಿದೆ. ಬದಲಾವಣೆಯೊಂದೇ ಇದಕ್ಕೆ ಪರಿಹಾರ. ರಾಜ್ಯದ ಜನ ತೀರ್ಮಾನ ಮಾಡಬೇಕು ಅಷ್ಟೇ ಎಂದು ಹೇಳಿದರು.
ಉಮೇಶ್
ನಿಧನಕ್ಕೆ
ಸಂತಾಪ
ಸಚಿವ
ಉಮೇಶ್
ಕತ್ತಿ
ಅವರ
ಸಾವು
ದೈವ
ಇಚ್ಛೆ
ಆಗಿದೆ.
ನಾವೆಲ್ಲ
ಜನತಾ
ಪರಿವಾರದಲ್ಲಿ
ಜೊತೆಯಲ್ಲೇ
ಕೆಲಸ
ಮಾಡಿದ್ದೇವೆ.
ಅವರು
ತುಂಬಾ
ನೇರವಾಗಿ
ಮಾತನಾಡುತ್ತಿದ್ದರು.
ರಾಜ್ಯದ
ಅಭಿವೃದ್ಧಿ,
ಬೆಳಗಾವಿ,
ಉತ್ತರ
ಕರ್ನಾಟಕದ
ಜನರ
ಬಗ್ಗೆ
ಹೆಚ್ಚಿನ
ಕಾಳಜಿ
ಇಟ್ಟುಕೊಂಡಿದ್ದರು.
ಅವರ
ಆಕಸ್ಮಿಕ
ನಿಧನ
ದುಃಖವನ್ನು
ತಂದಿದೆ.
ದೇವರು
ಅವರ
ಕುಟುಂಬ,
ಸ್ನೇಹಿತ
ವರ್ಗಕ್ಕೆ
ದುಃಖ
ಭರಿಸುವ
ಶಕ್ತಿ
ನೀಡಲೆಂದು
ಪ್ರಾರ್ಥಿಸುತ್ತೇನೆ
ಎಂದರು.
ಈ
ಸಂದರ್ಭದಲ್ಲಿ
ಕಾಂಗ್ರೆಸ್
ಮುಖಂಡ
ಡಾ.
ಎಚ್.
ಕೃಷ್ಣ
ಸೇರಿದಂತೆ
ಮತ್ತಿತರರು
ಉಪಸ್ಥಿತರಿದ್ದರು.
ಎರಡು ಸಿಟಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಾಗಿ ಹತ್ತಾರು ಹಳ್ಳಿಗಳಿಗೆ ತೊಂದರೆ ಸಲ್ಲದು: ಸುಮಲತಾ ಆಕ್ರೋಶ
ಮಂಡ್ಯದಲ್ಲಿ
ಮಳೆ
ಅವಾಂತರ
ಎಡಬಿಡದೇ
ಸುರಿದ
ಭಾರಿ
ಮಳೆಗೆ
ನಂಜನಗೂಡು
ತಾಲೂಕಿನ
ಹಳೇಪುರ
ಕೆರೆ
ಕೋಡಿ
ಬಿದಿದ್ದು,
ಅಪಾರ
ಹಾನಿ
ಸಂಭವಿಸಿತ್ತು.
ಭಾರಿ
ಪ್ರಮಾಣದ
ನೀರು
ಹರಿದ
ಪರಿಣಾಮ
ತಾಲೂಕಿನ
ಹೆಡತಲೆ
ಗ್ರಾಮದ
78
ಮನೆಗಳು
ಸಂಪೂರ್ಣ
ಜಲಾವೃತಗೊಂಡಿದ್ದು,
ಅಲ್ಲಿನ
ನಿವಾಸಿಗಳನ್ನು
ಬೇರೆಡೆ
ಸ್ಥಳಾಂತರಗೊಳ್ಳು
ಪರದಾಡಿದ್ದರು.
ಹೆಡತಲೆ
ಗ್ರಾಮದ
ತಗ್ಗು
ಪ್ರದೇಶದಲ್ಲಿರುವ
78
ಮನೆಗಳಿಗೆ
ಹರಿದು
ನುಗ್ಗಿ
ಅವಾಂತರವೇ
ಸೃಷ್ಟಿ
ಆಗಿತ್ತು.
ಧಾರಾಕಾರ
ಮಳೆ
ಸುರಿದು
ಮತ್ತಷ್ಟು
ಪ್ರವಾಹ
ಹೆಚ್ಚಾಗಿದ್ದ
ಕಾರಣ
ಮನೆಗಳು
ಸಂಪೂರ್ಣ
ಮುಳುಗಡೆಯಾಗಿದ್ದವು.
ಮಳೆ
ನೀರು
ಹರಿದು
ಬರುವುದನ್ನು
ತಿಳಿಯುತ್ತಿದ್ದಂತೆ
ಅಲ್ಲಿನ
ಸುಮಾರು
400ಕ್ಕೂ
ಹೆಚ್ಚು
ನಿವಾಸಿಗಳು
ಜೀವ
ರಕ್ಷಣೆಗಾಗಿ
ಮನೆಯಿಂದ
ಹೊರಬಂದಿದ್ದಾರೆ.
ಇನ್ನು
ಮನೆಯಲ್ಲಿದ್ದ
ಧವಸ
ಧಾನ್ಯ,
ಗೃಹಪಯೋಗಿ
ವಸ್ತುಗಳು
ಸೇರಿದಂತೆ
ಸಾಮಾನುಗಳು
ಪ್ರವಾಹದ
ನೀರಿಗೆ
ಕೊಚ್ಚಿ
ಹೋಗಿದ್ದು,
ನಿವಾಸಿಗಳು
ಸಂಕಷ್ಟಕ್ಕೆ
ಸಿಲುಕಿದ್ದಾರೆ.
ನಿರಾಶ್ರಿತರಿಗಾಗಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆಗೆ ಊಟ, ತಿಂಡಿ ವ್ಯವಸ್ಥೆಯನ್ನು ತಾಲೂಕು ಆಡಳಿತದಿಂದ ಮಾಡಲಾಗಿದೆ. ಇನ್ನು ಪ್ರವಾಹದ ನೀರು ಹಳ್ಳದ ಕಡೆಗೆ ಹರಿದುಹೋಗುವಂತೆ ಮಾಡಲು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಶಾಸಕ ಬಿ.ಹರ್ಷವರ್ಧನ್ ಅವರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಉಪವಿಭಾಗಾಧಿಕಾರಿ ಕಮಲಾಬಾಯಿ, ತಹಶೀಲ್ದಾರ್ ಎಂ.ಶಿವಮೂರ್ತಿ ಅವರೊಂದಿಗೆ ಹೆಡತಲೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರವಾಹ ತಗ್ಗಿಸುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸುವಂತೆ ಸಣ್ಣ ಹಾಗೂ ಭಾರಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಹರ್ಷವರ್ಧನ್ ಸೂಚನೆ ನೀಡಿದರು.