ಮಂಡ್ಯ ಜಿಲ್ಲೆಯ ಕಿಕ್ಕೇರಿ ಜನರಿಗೆ ಬೆಳಕಾದ ನಟಿ ಅಲಿಯಾ ಭಟ್
ಮಂಡ್ಯ, ಜುಲೈ 15: ಸಿನಿಮಾ ನಟ ನಟಿಯರು ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಜನರಿಗೆ ಇನ್ನಷ್ಟು ಹತ್ತಿರ ಆಗುತ್ತಾರೆ. ಈಗ ಬಾಲಿವುಡ್ ನಟಿ ಅಲಿಯಾ ಭಟ್ ಕೂಡ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದ್ದಾರೆ. ಅವರ ಕೆಲಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
ಹಿಂಚಿ ಚಿತ್ರರಂಗದ ನಟಿ ಅಲಿಯಾ ಭಟ್ ಅವರು ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮಕ್ಕೆ ಬೆಳಕು ನೀಡಿದ್ದಾರೆ. ಬೆಂಗಳೂರಿನ ಎಆರ್ ಓಎಚ್ಎ ಸಂಸ್ಥೆ ಪ್ಲಾಸ್ಟಿಕ್ ಬಾಟಲ್ಗಳನ್ನ ಮರುಬಳಕೆ ಮಾಡಿ ವಿದ್ಯುತ್ ಇಲ್ಲದ ಹಳ್ಳಿಯ ಮನೆಗಳಿಗೆ ಸೋಲಾರ್ ಲೈಟ್ ಅನ್ನು ಒದಗಿಸುತ್ತದೆ. ಈ ಸಂಸ್ಥೆ ಇತ್ತೀಚೆಗಷ್ಟೆ 'ಲಿಟರ್ ದ ಲೈಟರ್' ಎಂಬ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮಕ್ಕೆ ಅಲಿಯಾ ಜಾರಿಟಿ ನೀಡಿದ್ದರು.
ಮಂಡ್ಯ ಗ್ರಾಮದ ಜನರಿಗೆ ಬೆಳಕಾದ ನಟಿ ಅಲಿಯಾ ಭಟ್
'ಮಿ ವಾರ್ಡ್ ರೋಬ್ ಈಸ್ ಸು ವಾರ್ಡ್ ರೋಬ್' ಕಾರ್ಯಕ್ರಮದಲ್ಲಿ ಆಲಿಯಾ ಭಟ್ ತಮ್ಮ ಒಂದು ವಿಶೇಷವಾದ ಬಟ್ಟೆಯನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು ಇದರಿಂದ ಬಂದ ಹಣವನ್ನು ಜಾರಿಟಿಗೆ ನೀಡಿದ್ದಾರೆ.

ಅಲಿಯಾ ಭಟ್ ನೀಡಿದ್ದ ಹಣದಿಂದ ಎಆರ್ ಓಎಚ್ಎ ಸಂಸ್ಥೆ ಮಂಡ್ಯದ ಕಿಕ್ಕೇರಿ ಗ್ರಾಮಕ್ಕೆ ಸೋಲರ್ ದೀಪವನ್ನು ಒದಗಿಸಿದೆ. ಇದರಿಂದ ಕತ್ತಲಿನಲ್ಲಿ ಇದ್ದ 40 ಕುಟುಂಬಕ್ಕೆ ಬೆಳಕು ಸಿಕ್ಕಿದೆ.












Click it and Unblock the Notifications