ಕಸ್ತೂರಿ ರಂಗನ್ ವರದಿ; ಕೊಡಗಿನ ಈ ಹಳ್ಳಿಗಳಿಗೆ ಸಂಕಷ್ಟ!
ಮಡಿಕೇರಿ, ಜುಲೈ 20: ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನವನ್ನು ಮಾಡಿದರೇ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ. ಬೆಳಗಾವಿ ಜಿಲ್ಲೆಯ ಯಾವ ಹಳ್ಳಿ ಈ ವ್ಯಾಪ್ತಿಗೆ ಬರಲಿದೆ ಎಂಬುದರ ವಿವರಣೆ ಇಲ್ಲಿದೆ.
ಕಸ್ತೂರಿ ರಂಗನ್ ವರದಿ; ಬೆಳಗಾವಿಯ ಈ ಹಳ್ಳಿಗಳಿಗೆ ಅನಾಹುತ!
ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಿಬಿಡುತ್ತದೆ.
ಕೇಂದ್ರ ಸರ್ಕಾರಕ್ಕೆ ಗಾಡ್ಗಿಳ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಗಾಡ್ಗಿಳ್ ವರದಿಯಲ್ಲಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆಯನ್ನು ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು. ಅದರಂತೆ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕರ್ನಾಟಕದ ವ್ಯಾಪ್ತಿಯನ್ನು ಹೇಳಿತ್ತು. ಅದರಂತೆ ರಾಜ್ಯದ 20668 ಚದರ ಕಿ.ಮೀ ಒಳಗೊಂಡಿದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವಂತಾಗುತ್ತದೆ.
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಹಳ್ಳಿಗಳು; ಕೊಡಗು ಜಿಲ್ಲೆಯ ಮಡಿಕೇರಿ ಅಥವಾ ಮರ್ಕೆರಾ ತಾಲೂಕಿನಲ್ಲಿರುವ ಹಮ್ಮಿಯಾಳ, ಕಾಲೂರು, ಮೊಣ್ಣನ್ಗೆರೆ, ಮುಕ್ಕೊಡ್ಲು, ಗಾಲಿಬೀಡು, ಸಂಪಜೆ, ಮೆಲ್ಜೆಂಬು, ಕರಿಕೆ, ಭಾಗಮಂಡಲ, ಬೆಟ್ಟತೂರು, ಮಡೆ, ಕುಂದಚೇರಿ, ಕೊಪಟ್ಟಿ, ತಣ್ಣಿಮಣಿ, ಚೆರಂಗಾಲ, ಕೊಲಗದಾಲು, ಸಣ್ಣಪುಲಿಕೊಟು, ಅಯ್ಯನ್ಗಿರಿ, ಪೆರೂರ್, ನಲಡಿ, ಯೆವಕಪಾಡಿ, ಚೆಲವಾರ, ಕರದ ಎಂಬ ಹಳ್ಳಿಗಳು ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯಗಳಾಗಿ ಗುರುತಿಸಿದೆ.
ಸೋಮವಾರಪೇಟೆಯಲ್ಲಿರುವ ಹಳ್ಳಿಗಳು; ಕುಮರಳ್ಳಿ, ಸುರಲಾಭಿ, ಮಲಂಬಿ ಫಾರೆಸ್ಟ್, ಮಾವಿನ ಹಳ್ಳ ಫಾರೆಸ್ಟ್, ನಿಡ್ತ, ಯೆದವನಾಡು ಫಾರೆಸ್ಟ್- ಲಿ, ಜೈನ್ಕಾಲ್ಬೆಟ್ಟ ಫಾರೆಸ್ಟ್, ಯೆದವನಾಡು ಫಾರೆಸ್ಟ್- ಲಿ, ಬ್ಲಾಕ್ ಕಟ್ ಫ್ರಂಮ್ ಜೈನ್ಕಾಲ್ ಬೆಟ್ಟ, ಆನೆಕಾಡ್ ಫಾರೆಸ್ಟ್, ಅಟ್ಟೂರು ಫಾರೆಸ್ಟ್ ಈ ಹಳ್ಳಿಗಳು ಪರಿಸರ ಸೂಕ್ಷ್ಮವಲಯದ ವ್ಯಾಪ್ತಿಯಲ್ಲಿವೆ.
ವಿರಾಜಪೇಟೆಯಲ್ಲಿರುವ ಹಳ್ಳಿಗಳು; ಕರಡಿಗೊಡು, ಮಲ್ದರೆ, ಚನ್ನಯನ್ ಕೋಟೆ, ದೇವಮಾಚಿ ಫಾರೆಸ್ಟ್, ಅರಕೇರಿ ಫಾರೆಸ್ಟ್ 1, ಅರಕೇರಿ ಫಾರೆಸ್ಟ್ 3, ಕೆಡಮುಲ್ಲೂರು, ಪಲಂಗಲ, ಅರಕೇರಿ ಫಾರೆಸ್ಟ್ 2, ದೇವನೂರು, ಹೆಗ್ಗಾಲ, ಹಾತುಗಟ್ಟು ಫಾರೆಸ್ಟ್ 1, ಕುಟ್ಟಂಡಿ, ಬಡಗ, ಬಡಗರ ಕೇರಿ, ಪರಕಟಗೇರಿ, ನಲ್ಕೇರಿ ಫಾರೆಸ್ಟ್, ತೆರಲು, ಕುರ್ಚಿ, ಕುಟ್ಟ, ಮಂಚಳ್ಳಿ ಮತ್ತು ಫಾರೆಸ್ಟ್ ಎಂಬ ಹಳ್ಳಿಗಳು ಕಸ್ತೂರಿ ರಂಗನ್ ವರದಿಯಂತೆ ಪಶ್ಚಿಮಘಟ್ಟದ ಸೂಕ್ಷ್ಮವಲಯ ಎಂದು ಗುತುತಿಸಿದ್ದು. ಕಸ್ತೂರಿ ರಂಗನ್ ವರದಿ ಜಾರಿಯಾದರೇ ಸಂಕಷ್ಟಕ್ಕೆ ಸಿಲುಕಲಿವೆ.