ರಾಷ್ಟ್ರಪತಿ ಹುದ್ದೆ ಪ್ರಸ್ತಾಪ ಒಪ್ಪಿಕೊಳ್ಳಲ್ಲ ಎಂದ ಮಾಯಾವತಿ
ಲಕ್ನೋ, ಮಾರ್ಚ್ 27: ''ಯಾವುದೇ ಪಕ್ಷದಿಂದ ರಾಷ್ಟ್ರಪತಿ ಸ್ಥಾನದ ಆಫರ್ ಬಂದರೂ ಅದನ್ನು ಸ್ವೀಕರಿಸುವುದಿಲ್ಲ'' ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಭಾನುವಾರ ಪ್ರತಿಪಾದಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಮ್ಮನ್ನು ರಾಷ್ಟ್ರಪತಿಯನ್ನಾಗಿ ಮಾಡಲಾಗುವುದು ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಸುಳ್ಳು ಪ್ರಚಾರ ನಡೆಸಿವೆ. ಈ ಮೂಲಕ ಆಕೆಯ ಬೆಂಬಲಿಗರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲನ್ನು ಪರಿಶೀಲನೆ ನಡೆಸಿ ನೀಡಿದ ಹೇಳಿಕೆಯೊಂದರಲ್ಲಿ, ಮಾಜಿ ಮುಖ್ಯಮಂತ್ರಿ ಕಾನ್ಶಿ ರಾಮ್ ಅವರು ನಾಲ್ಕು ಬಾರಿ ಈ ಹಿಂದೆ ಹುದ್ದೆಯನ್ನು ನಿರಾಕರಿಸಿದ್ದರು. ನಾನು ಅವರ ದೃಢವಾದ ಶಿಷ್ಯೆ ಎಂದು ಹೇಳಿದರು.
ಯುಪಿ: 'ಎಸ್ಪಿ ಬಿಟ್ಟು ಬಿಜೆಪಿಗೆ ಮುಸ್ಲೀಂ ಮತ' ಮಾಯಾವತಿ
"ನಮ್ಮ ಪಕ್ಷದ ಅಂತ್ಯ ಎಂದು ನಮಗೆ ತಿಳಿದಿರುವಾಗ ನಾನು ಅಂತಹ ಹುದ್ದೆಯನ್ನು ಹೇಗೆ ಸ್ವೀಕರಿಸಲಿ," ಎಂದು ಪ್ರಶ್ನಿಸಿದ ಮಾಯಾವತಿ ಹಾಗಾಗಿ ನಮ್ಮ ಪಕ್ಷ ಮತ್ತು ಚಳವಳಿಯ ಹಿತದೃಷ್ಟಿಯಿಂದ ನಾನು ಯಾವುದೇ ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲ ಎಂದು ನಾನು ಪ್ರತಿಯೊಬ್ಬ ಬಿಎಸ್ಪಿ ಪದಾಧಿಕಾರಿಗಳಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ಬಿಜೆಪಿ ಅಥವಾ ಇತರ ಪಕ್ಷಗಳಿಂದ ಅಧ್ಯಕ್ಷ ಸ್ಥಾನ ಮತ್ತು ಭವಿಷ್ಯದಲ್ಲಿ ಅವರನ್ನು ಎಂದಿಗೂ ದಾರಿತಪ್ಪಿಸಬಾರದು ಎಂದು ಮಾಯಾವತಿ ತಿಳಿಸಿದರು.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅವಧಿ ಜುಲೈ 24 ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ಈ ನಡುವೆ ಮಾಯಾವತಿಗೆ ರಾಷ್ಟ್ರಪತಿ ಹುದ್ದೆಯ ಬಗ್ಗೆ ವದಂತಿ ಆಗುತ್ತಿದೆ. ಈ ಬಗ್ಗೆ ಮಾಯಾವತಿ ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ದೇಶಾದ್ಯಂತ ಪಕ್ಷವನ್ನು ಬಲಪಡಿಸಲು ತನ್ನ ಜೀವನದ ಪ್ರತಿ ಕ್ಷಣವನ್ನು ಕಳೆಯುತ್ತೇನೆ ಎಂದು ಬಿಎಸ್ಪಿ ಮುಖ್ಯಸ್ಥರು ಹೇಳಿದ್ದಾರೆ.
ಬಿಎಸ್ಪಿ ಪಕ್ಷದ ಸೋಲಿಗೆ ಕಾರಣವೇನು?
"ಈ ಚುನಾವಣೆಯಲ್ಲಿ ಬಿಜೆಪಿ ತನ್ನ ಆರ್ಎಸ್ಎಸ್ ಸಂಘಟನೆಯ ಮೂಲಕ ಬಿಎಸ್ಪಿ ಸರ್ಕಾರ ರಚನೆಯಾಗದಿದ್ದರೆ ನಿಮ್ಮ 'ಬೆಹೆನ್ಜಿ'ಯನ್ನು ರಾಷ್ಟ್ರಪತಿಯನ್ನಾಗಿ ಮಾಡುತ್ತೇವೆ ಎಂಬ ಸುಳ್ಳು ಪ್ರಚಾರವನ್ನು ನಮ್ಮ ಜನರಲ್ಲಿ ತುಂಬಿದ್ದಾರೆ. ಬಿಜೆಪಿಯು ಚೆನ್ನಾಗಿ ಆಲೋಚಿಸಿ ತಂತ್ರ ಮತ್ತು ಷಡ್ಯಂತ್ರದ ಮೂಲಕ ಹಬ್ಬಿಸಿದೆ. ಆದ್ದರಿಂದಲೇ ನೀವು ಬಿಜೆಪಿಗೆ ಅಧಿಕಾರಕ್ಕೆ ಬರಲು ಅವಕಾಶ ನೀಡಬೇಕು ಎಂದು ಹಬ್ಬಿಸಿದೆ," ಎಂದು ಮಾಯಾವತಿ ತಮ್ಮ ಪಕ್ಷದ ಸೋಲಿಗೆ ಕಾರಣಗಳನ್ನು ಉಲ್ಲೇಖ ಮಾಡಿದರು.
"ರಾಷ್ಟ್ರಪತಿಯಾಗುವುದನ್ನು ಬಿಟ್ಟು, ನನ್ನ ಕನಸಿನಲ್ಲಿ ಇಂತಹದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಬಹಳ ಹಿಂದೆಯೇ ಕಾನ್ಶಿ ರಾಮ್ ಜೀ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು ಮತ್ತು ನಾನು ಅವರ ದೃಢ ಶಿಷ್ಯೆ ಎಂದು ಅವರಿಗೆ (ಬಿಜೆಪಿ) ತಿಳಿದಿದೆ," ಎಂದರು.
ಸಿಎಂ ಯೋಗಿ, ಮಾಯಾವತಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ವ್ಯಕ್ತಿ ಬಂಧನ
Recommended Video
ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ 403ರಲ್ಲಿ ಕೇವಲ ಒಂದು ಸ್ಥಾನ ಪಡೆದಿದ್ದರೆ, 2017ರಲ್ಲಿ 19 ಸ್ಥಾನಗಳನ್ನು ಗೆದ್ದಿತ್ತು. ಇಲ್ಲಿನ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ, ಬಿಜೆಪಿ ಬಡವರಿಗೆ ಉದ್ಯೋಗ ನೀಡುವ ಬದಲು ಉಚಿತ ಪಡಿತರವನ್ನು ನೀಡಿ ಅವರನ್ನು ಅಸಹಾಯಕ ಮತ್ತು 'ಗುಲಾಮ'ರನ್ನಾಗಿ ಮಾಡಿದೆ ಎಂದು ಆರೋಪ ಮಾಡಿದರು.