ಯುಪಿ: ಅಯೋಧ್ಯೆಯಿಂದ ಎಸ್ಪಿ ಅಭ್ಯರ್ಥಿಯ ಆಯ್ಕೆ
ಲಕ್ನೋ ಜನವರಿ 27: ಉತ್ತರಪ್ರದೇಶ ಚುನಾವಣೆಗೆ ಬಿಜೆಪಿ ಮತ್ತು ಎಸ್ಪಿ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಸಮಾಜವಾದಿ ಪಕ್ಷ ಅಯೋಧ್ಯೆ ಕ್ಷೇತ್ರದಿಂದ ಹಳೆಯ ಆಪ್ತ ಪವನ್ ಪಾಂಡೆ ಅವರನ್ನು ನಾಮನಿರ್ದೇಶನ ಮಾಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್ಪುರ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ಯುಪಿಯತ್ತ ನೆಟ್ಟಿದೆ. ಬಿಎಸ್ಪಿ ಮತ್ತು ಕಾಂಗ್ರೆಸ್ಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಇನ್ನೂ ಹೊರತಂದಿಲ್ಲ. ಆದರೆ ಇಲ್ಲಿನ ಜನರು ಎಸ್ಪಿ ಮತ್ತು ಬಿಜೆಪಿ ನಡುವಿನ ನೇರ ಪೈಪೋಟಿ ನೋಡಲಿದ್ದಾರೆಂದು ಸಮೀಕ್ಷೆಗಳು ಹೇಳುತ್ತಿವೆ.
ಅಖಿಲೇಶ್ ಯಾದವ್ ಅವರ ಪಕ್ಷವು ಮಂಗಳವಾರ ರಾತ್ರಿ ಮಾಜಿ ಶಾಸಕ ಪಾಂಡೆ ಅವರ ಉಮೇದುವಾರಿಕೆಯನ್ನು ಘೋಷಿಸಿತು. ಲಕ್ನೋ ವಿಶ್ವವಿದ್ಯಾನಿಲಯದ ಭರವಸೆಯ ಯುವ ನಾಯಕ, ಪವನ್ ಪಾಂಡೆ ಅವರು 2012ರ ಚುನಾವಣೆಯಲ್ಲಿ ಸ್ಥಾನವನ್ನು ಗೆದ್ದಿದ್ದರು. ಆದರೆ 2017 ರ ಚುನಾವಣೆಯಲ್ಲಿ ಸೋತರು. ಜೊತೆಗೆ ಪವನ್ ಪಾಂಡೆ ಅವರು ಅಖಿಲೇಶ್ ಯಾದವ್ ಸರ್ಕಾರದಲ್ಲಿ ಸಚಿವರಾಗಿದ್ದರು. ಸದ್ಯ ಅಯೋಧ್ಯೆಯಿಂದ ಪವನ್ ಸ್ಪರ್ಧಿಸಲಿದ್ದಾರೆ. ಎಸ್ಪಿ ತನ್ನ ಅಭ್ಯರ್ಥಿಯ ಹೆಸರನ್ನು ಹೊರತಂದಿದ್ದರೂ, ಬಿಜೆಪಿ ಇನ್ನೂ ಅಭ್ಯರ್ಥಿಯ ಆಯ್ಕೆ ಮಾಡುವಲ್ಲಿ ಚಿಂತಿಸುತ್ತಿದೆ. ಬಿಜೆಪಿಯಿಂದ ಹಾಲಿ ಶಾಸಕ ವೇದ್ ಪ್ರಕಾಶ್ ಗುಪ್ತಾ ಅಥವಾ ಬೇರೆ ಯಾರನ್ನಾದರೂ ಕಣಕ್ಕಿಳಿಸಬಹುದಾ ಎಂದು ಯೋಚಿಸುತ್ತಿದ್ದಾರೆ. ಹಿಂದಿನಂತೆ ಈ ಬಾರಿಯೂ ಚುನಾವಣಾ ಪ್ರಚಾರಕ್ಕೆ ಅಯೋಧ್ಯೆಯನ್ನು ಎಲ್ಲಾ ಪ್ರಮುಖ ಪಕ್ಷಗಳು ಪ್ರಮುಖ ಸ್ಥಳವಾಗಿ ಬಳಸಿಕೊಳ್ಳುತ್ತಿವೆ.
ಈ ಬಗ್ಗೆ ನಯಾಘಟ್ಟದ ಸ್ಥಳೀಯ ಸೂರಜ್ ಕುಮಾರ್ ಅವರು, 'ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದ ಹಾಲಿ ಶಾಸಕರ ವಿರುದ್ಧ ಅಸಮಾಧಾನವಿದೆ, ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಿದರೆ ಅನುಕೂಲ' ಎನ್ನುತ್ತಾರೆ. ಇಲ್ಲಿ ಸಾಕಷ್ಟು ಕಾಮಗಾರಿಗಳು ನಡೆದಿದ್ದು, ಅದಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಅಭಿವೃದ್ಧಿ ಕಾರ್ಯಗಳಿಗೆ ನೆಲಸಮವೂ ನಡೆದಿದೆ. ಅಭಿವೃದ್ಧಿ ಆದಾಗ ಕೆಲವು ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂದು ತಿಳಿಸಿದರು.
ಪ್ರಸ್ತಾವಿತ ಯೋಜನೆಯ ಪ್ರಕಾರ, ಐತಿಹಾಸಿಕ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಹೋಗುವ ರಸ್ತೆ ಸೇರಿದಂತೆ ಅಯೋಧ್ಯಾ ಧಾಮ್ (ಹಳೆಯ ಅಯೋಧ್ಯಾ ಪಟ್ಟಣ) ರಸ್ತೆಯ ಎರಡು ವಿಸ್ತರಣೆಗಳನ್ನು ಮಾಡಲಾಗುವುದು. ಈ ಯೋಜನೆಗಾಗಿ ಹೆಚ್ಚಿನ ಸಂಖ್ಯೆಯ ಅಂಗಡಿಗಳನ್ನು ನೆಲಸಮ ಮಾಡಲಾಗುವುದು ಎಂದು ವ್ಯಾಪಾರಿಗಳು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಹೇಳಿದರು. ನಯಾ ಘಾಟ್ನಿಂದ ಉದಯ ಕ್ರಾಸಿಂಗ್ವರೆಗಿನ 4.6-ಕಿಮೀ ವ್ಯಾಪ್ತಿಯಲ್ಲಿ ಮತ್ತೊಂದು ಪ್ರಮುಖ ರಸ್ತೆ ವಿಸ್ತರಣೆಯನ್ನು ಪ್ರಸ್ತಾಪಿಸಲಾಗಿದೆ, ಅಲ್ಲಿ ರಸ್ತೆಯು 24 ಅಡಿ ಅಗಲವಾಗಿರುತ್ತದೆ (ವಿಭಜಕದ ಎರಡೂ ಬದಿಗಳಲ್ಲಿ 12 ಅಡಿ). ಇದನ್ನು 20 ಅಡಿಗಳಿಗೆ ಮೊಟಕುಗೊಳಿಸಬೇಕು ಎಂದು ವ್ಯಾಪಾರಿಗಳು ಬಯಸುತ್ತಿದ್ದಾರೆ ಎಂದು ಸ್ಥಳೀಯ ಮತ್ತೊಬ್ಬ ವ್ಯಾಪಾರಿ ಹೇಳಿದರು.
ಆಡಳಿತ ವಿರೋಧಿತನದ ಜೊತೆಗೆ, ಸ್ಥಳೀಯ ಬಿಜೆಪಿ ಶಾಸಕರ ವಿರುದ್ಧದ ಇನ್ನೊಂದು ಅಂಶವೆಂದರೆ, ಇನ್ನೊಬ್ಬ ವ್ಯಾಪಾರಿ ಜನಾರ್ದನ್ ಪಾಂಡೆ ಪ್ರಕಾರ, ಇಲ್ಲಿ ಸ್ವತಃ ವ್ಯಾಪಾರಿ ನಾಯಕನಾಗಿದ್ದರೂ, ಸರ್ಕಾರದ ಮುಂದೆ ತನ್ನ ಸಮುದಾಯದ ಧ್ವನಿಯನ್ನು ಪರಿಣಾಮಕಾರಿಯಾಗಿ ಎತ್ತಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಮಮನೋಹರ ಲೋಹಿಯಾ ಅವಧ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರಾಕೇಶ್ ಸಿಂಗ್ ಮಾತನಾಡಿ, ಮುಂಬರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿಶ್ವ ದರ್ಜೆಯ ರೈಲು ನಿಲ್ದಾಣ ಮತ್ತು ರಾಮಾಯಣ ಸರ್ಕ್ಯೂಟ್ ಅಡಿಯಲ್ಲಿ ಹಲವಾರು ಯೋಜನೆಗಳೊಂದಿಗೆ ಅಯೋಧ್ಯೆಯನ್ನು ಹೊಸದಾಗಿ ಅಭಿವೃದ್ಧಿ ಹೊಂದಿದ ನಗರವಾಗಿ ಪ್ರದರ್ಶಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸಿದೆ. "ಇದು ಖಂಡಿತವಾಗಿಯೂ ಅಯೋಧ್ಯೆಯ ಪ್ರತಿಯೊಬ್ಬರೂ ಮೆಚ್ಚುವ ವಿಷಯವಾಗಿದೆ. ಆದರೆ ಅವರ ನಗರದ ಅಭಿವೃದ್ಧಿಯನ್ನು ಯಾರು ಇಷ್ಟಪಡುವುದಿಲ್ಲ" ಎಂದು ಕೇಳಿದರು.
ಇನ್ನೂ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಬಿಜೆಪಿ ಬೆಂಬಲಿಗ ಆಶಿಶ್ ಕುಮಾರ್ ಅವರನ್ನು ಅಯೋಧ್ಯೆಯಲ್ಲಿ ಪಕ್ಷದ ಗೆಲುವಿನ ಸಾಧ್ಯತೆಗಳ ಕುರಿತು ಕೇಳಿದಾಗ, ''ಬಿಜೆಪಿ ನಾಯಕತ್ವವು ನೆಲದ ವಾಸ್ತವತೆಯನ್ನು ಅರಿತುಕೊಳ್ಳಬೇಕು, ನಮ್ಮ (ಬಿಜೆಪಿ) ಅಭ್ಯರ್ಥಿ ಯಾರೇ ಆಗಲಿ. ವ್ಯಕ್ತಿ ಖಂಡಿತವಾಗಿಯೂ ಗೆಲ್ಲುತ್ತಾನೆ." ಅಯೋಧ್ಯೆ ವಿಧಾನಸಭಾ ಕ್ಷೇತ್ರದಲ್ಲಿ ಫೆಬ್ರವರಿ 27 ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ. 1991, 1993, 1996, 2002, 2007 ರಲ್ಲಿ ಬಿಜೆಪಿಯ ಲಲ್ಲು ಸಿಂಗ್ ಅವರು ಈಗ ಪಕ್ಷದ ಸಂಸದರಾಗಿದ್ದರು. ಆದಾಗ್ಯೂ ಅವರು 2012ರಲ್ಲಿ ಎಸ್ಪಿಯ ಪವನ್ ಪಾಂಡೆಯಿಂದ ಸೋಲಿನ ರುಚಿಯನ್ನು ಅನುಭವಿಸಿದರು. ಅಯೋಧ್ಯೆ ಕ್ಷೇತ್ರದಲ್ಲಿ ಶೇ.13-15ರಷ್ಟು ಬ್ರಾಹ್ಮಣರು ಮತ್ತು ಯಾದವರು ಮತ್ತು ಶೇ.18-20ರಷ್ಟು ಮುಸ್ಲಿಮರಿದ್ದಾರೆ.