ಯುಪಿ: ಕೊಟ್ಟ ಮಾತು ಉಳಿಸಿಕೊಳ್ಳದ ಅಖಿಲೇಶ್: ಮೋಸ ಹೋದ ಶಿವಪಾಲ್

ಲಕ್ನೋ ಫೆಬ್ರವರಿ 8: ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ರಂಗೇರುತ್ತಿದೆ. ಬಿಜೆಪಿಯೊಂದಿಗೆ ಗೆಲುವು ಸಾಧಿಸಲು ಸಮಾಜವಾದಿ ಪಕ್ಷ ಸಣ್ಣ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಈ ಪಕ್ಷಗಳ ನಡುವೆ ಅಸಮಾಧಾನ ಹೆಚ್ಚಾಗುತ್ತಿದೆ. ಜೊತೆಗೆ ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಕೂಡ ಅಖಿಲೇಶ್ ಮೇಲೆ ಬೇಸರಗೊಂಡಿದ್ದಾರೆ. ಈ ಮಧ್ಯೆ ಪ್ರಗತಿಶೀಲ ಸಮಾಜವಾದಿ ಪಕ್ಷದ ಮುಖ್ಯಸ್ಥ ಶಿವಪಾಲ್ ಯಾದವ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಟಾವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿವಪಾಲ್ ಅವರು ಅಖಿಲೇಶ್ ಅವರನ್ನು ಕೇವಲ ಒಂದು ಸ್ಥಾನಕ್ಕೆ ಸೀಮಿತಗೊಳಿಸಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದರು. ಈ ಮಾತಿನಿಂದ ಶಿವಪಾಲ್ ಅವರು ಅಖಿಲೇಶ್ ಅವರನ್ನು ನಾಯಕ ಎಂದು ಪರಿಗಣಿಸಿದ್ದ ಭರವಸೆ ಹುಸಿಯಾಗಿದೆ. ಅಖಿಲೇಶ್ ಇಲ್ಲಿಯವರೆಗೂ ಶಿವಪಾಲ್ ಅವರ ನೆಚ್ಚಿನವರಿಗೆ ಟಿಕೆಟ್ ನೀಡಿಲ್ಲ. ಶಿವಪಾಲ್ ಅವರ ಜಸ್ವಂತ್ ನಗರವನ್ನು ಹೊರತುಪಡಿಸಿ ಅಖಿಲೇಶ್ ಅವರಿಗೆ ಯಾವುದೇ ಸ್ಥಾನವನ್ನು ನೀಡಿಲ್ಲ. ಹಾಗಾದರೆ ಶಿವಪಾಲ್ ಕೇವಲ ಒಂದು ಸೀಟಿಗಾಗಿ ತ್ಯಾಗ ಮಾಡಿದ್ದಾರಾ? ಎನ್ನುವ ಪ್ರಶ್ನೆ ಹುಟ್ಟುಕೊಂಡಿದೆ.

ಮೋಸ ಹೋದ ಭಾವನೆಯಲ್ಲಿ ಶಿವಪಾಲ್

ಮೋಸ ಹೋದ ಭಾವನೆಯಲ್ಲಿ ಶಿವಪಾಲ್

ಶಿವಪಾಲ್ ಯಾದವ್ ಅವರು ಈ ಸಮಯದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರು ಮೋಸ ಹೋದ ಭಾವನೆಯಲ್ಲಿದ್ದಾರೆ. ಬಿಜೆಪಿಯೊಂದಿಗೆ 20 ಸ್ಥಾನಗಳ ಬಗ್ಗೆ ಮಾತುಕತೆ ನಡೆಸಿದ್ದ ಶಿವಪಾಲ್‌ಗೆ ಸಮಾಜವಾದಿ ಪಕ್ಷ 15 ಸೀಟು ನೀಡುವುದಾಗಿ ಹೇಳಿ ಕೇವಲ ಒಂದು ಸ್ಥಾನಕ್ಕೆ ಇಳಿದಿರುವುದೇ ಇದಕ್ಕೆ ಕಾರಣ. ಶಿವಪಾಲ್ ಯಾದವ್ ಅವರು ಆರು ಸ್ಥಾನಗಳ ಪಟ್ಟಿಯನ್ನು ಅಖಿಲೇಶ್ ಯಾದವ್ ಅವರಿಗೆ ಸಲ್ಲಿಸಿದ್ದರು, ಅದರ ಮೇಲೆ ಅವರ ಅಂಗೀಕಾರವೂ ಸಿಕ್ಕಿತು. ಆದರೆ ಕೊನೆಗೆ ಸಿಕ್ಕಿದ್ದು ಒಂದೇ ಒಂದು ಸ್ಥಾನ. ಈ ಗೌರವಕ್ಕಾಗಿ ಶಿವಪಾಲ್ ಯಾದವ್ ತಮ್ಮ ಕನಸುಗಳನ್ನು ತ್ಯಾಗ ಮಾಡಿದ್ದಾರಾ ಎಂಬುದು ಈಗ ಪ್ರಶ್ನೆಯಾಗಿದೆ.

ಕೊನೆಗೆ ಸಿಕ್ಕಿದ್ದು ಒಂದೇ ಸೀಟು

ಕೊನೆಗೆ ಸಿಕ್ಕಿದ್ದು ಒಂದೇ ಸೀಟು

ಪಿಎಸ್‌ಪಿಯ ಉನ್ನತ ಮೂಲಗಳ ಪ್ರಕಾರ, ಶಿವಪಾಲ್ ಯಾದವ್ ಅವರು ಬಿಜೆಪಿಯೊಂದಿಗೆ 20 ಸ್ಥಾನಗಳ ಬಗ್ಗೆ ಮಾತುಕತೆ ನಡೆಸಿದ್ದರು. ಬಿಜೆಪಿಯೊಂದಿಗಿನ ಕೊನೆಯ ಸುತ್ತಿನ ಮಾತುಕತೆಯ ನಂತರ ಅಖಿಲೇಶ್ ಯಾದವ್ ಅವರು ಶಿವಪಾಲ್ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಇದಾದ ಬಳಿಕ ಬೇರೆ ಕಡೆಗೆ ಹೋಗದಂತೆ ಶಿವಪಾಲ್ ಪತ್ನಿ ಹಾಗೂ ಮಕ್ಕಳು ತಡೆದಿದ್ದಾರೆ. ಜಂಟಿ ಪತ್ರಿಕಾಗೋಷ್ಠಿಯಿಲ್ಲದೆ ಸಮಾಜವಾದಿ ಪಕ್ಷಕ್ಕೆ ಸೇರಲು ಶಿವಪಾಲ್ ಬಯಸಲಿಲ್ಲ. ಆದರೆ ಅವರ ಹೆಂಡತಿ ಮತ್ತು ಮಗುವಿನ ಮುಂದೆ ತಲೆಬಾಗಬೇಕಾಯಿತು. ಅವರ ಕುಟುಂಬದವರ ಮಾತಿಗೆ ಕಿವಿಗೊಡಬೇಕಾಯಿತು. ಈ ವೇಳೆ ಅಖಿಲೇಶ್ ಯಾದವ್ ಅವರು 15 ಸ್ಥಾನಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು.

ಶಿವಪಾಲ್ ಕೈತಪ್ಪಿದ ಬೇಡಿಕೆಯ ಸ್ಥಾನಗಳು

ಶಿವಪಾಲ್ ಕೈತಪ್ಪಿದ ಬೇಡಿಕೆಯ ಸ್ಥಾನಗಳು

ಇದಾದ ನಂತರ ಶಿವಪಾಲ್ ಯಾದವ್ ಬಿಜೆಪಿಗೆ ಹೋಗುವ ಬಗ್ಗೆ ಮಾತನಾಡಿ, ಬಿಜೆಪಿಗೆ ತಾಔಉ ಸೇರುವುದು ಊಹಾಪೋಹಗಳು ಎಂದು ಹೇಳಿದರು. ಮ್ಮ ಹೆಂಡತಿ ಮತ್ತು ಮಕ್ಕಳ ಒತ್ತಾಯಕ್ಕೆ ಸಿಲುಕಿಕೊಂಡು ತಾವು ಸಮಾಜವಾದಿ ಪಕ್ಷದಲ್ಲಿ ಉಳಿಯುವುದಾಗಿ ಹೇಳಿಕೆ ನೀಡಿದರು. ನಂತರ ಅವರು ಅಖಿಲೇಶ್ ಯಾದವ್ ಅವರೊಂದಿಗೆ ಹಲವಾರು ಬಾರಿ ಮಾತನಾಡಲು ಪ್ರಯತ್ನಿಸುತ್ತಿದ್ದರು. ಆದರೆ ಸಮಾಜವಾದಿ ಪಕ್ಷವು ಶಿವಪಾಲ್ ಅವರು ಕೇಳಿದ ಸ್ಥಾನಗಳಿಗೆ ಒಂದೊಂದಾಗಿ ಟಿಕೆಟ್ ನೀಡುತ್ತಲೇ ಇತ್ತು. ಘಾಜಿಪುರ ಜಿಲ್ಲೆಯ ಜಹುರಾಬಾದ್‌ನ ಸಾದಾಬ್ ಫಾತಿಮಾ ಅಥವಾ ಲಕ್ನೋ ಕ್ಷೇತ್ರಕ್ಕೆ ಶಾರದಾಪ್ರತಾಪ್ ಶುಕ್ಲಾ ಇರಲಿ ಅಖಿಲೇಶ್ ಇದುವರೆಗೆ ಯಾವುದೇ ನಿರ್ದಿಷ್ಟ ಟಿಕೆಟ್ ಶಿವಪಾಲ್‌ಗೆ ನೀಡಿಲ್ಲ.

ಶಿವಪಾಲ್ ಆಪ್ತರಲ್ಲೂ ಅಸಮಧಾನ

ಶಿವಪಾಲ್ ಆಪ್ತರಲ್ಲೂ ಅಸಮಧಾನ

ಶಿವಪಾಲ್ ಯಾದವ್ ನೀಡಿರುವ ಪಟ್ಟಿಯಲ್ಲಿ ಸರೋಜಿನಿನಗರ ವಿಧಾನಸಭಾ ಕ್ಷೇತ್ರದ ಶಾರದಾ ಪ್ರಸಾದ್ ಶುಕ್ಲಾ ಅವರ ಹೆಸರು ಅಗ್ರಸ್ಥಾನದಲ್ಲಿದೆ. ಸಮಾಜವಾದಿ ಪಕ್ಷ ಅಲ್ಲಿಂದ ಅಭಿಷೇಕ್ ಮಿಶ್ರಾಗೆ ಟಿಕೆಟ್ ನೀಡಿದಾಗ ಶಿವಪಾಲ್ ಯಾದವ್ ಅವರಿಗೆ ನೀಡಿದ ಭರವಸೆ ಕಳಚಿ ಬಿದ್ದಿದೆ. ಈಗ ಮೂಲಗಳ ಪ್ರಕಾರ ಶಿವಪಾಲ್ ಅವರು ಚುನಾವಣೆಯ ನಂತರ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಏಕೆಂದರೆ ಈಗ ಚುನಾವಣೆಯವರೆಗೆ ಯಾವುದೇ ನಿರ್ಧಾರದಿಂದ ಏನೂ ಮಾಡಲಾಗದು. ಅಖಿಲೇಶ್ ಮುಂದೆ ಶಿವಪಾಲ್ ಅವರ ಅಸಹಾಯಕತೆಯನ್ನು ಕಂಡು ಅವರ ಆಪ್ತರು ಬೇಸರಗೊಂಡಿದ್ದಾರೆ. ಎಸ್‌ಪಿಯ ಮಿತ್ರ ಪಕ್ಷ ಸುಭಾಸ್ಪ್‌ನ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಜಹೂರಾಬಾದ್‌ನಿಂದ ಸ್ಪರ್ಧಿಸುತ್ತಿದ್ದರೆ, ಮತ್ತೊಂದೆಡೆ, ಶಿವಪಾಲ್ ಅವರ ಆಪ್ತ ಸಾದಬ್ ಫಾತಿಮಾ ಇಲ್ಲಿ ಸ್ವತಂತ್ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ರಾಜ್‌ಭರ್ ಅವರ ಕಷ್ಟಗಳು ಹೆಚ್ಚಾಗುತ್ತಿವೆ. ಅದೇ ರೀತಿ ಲಕ್ನೋದ ಸರೋಜಿನಿನಗರ ಕ್ಷೇತ್ರದಲ್ಲಿ ಶಿವಪಾಲ್ ಅವರ ವಿಶೇಷ ಶಾರದಾ ಪ್ರತಾಪ್ ಬದಲಿಗೆ ಮಾಜಿ ಸಚಿವ ಅಭಿಷೇಕ್ ಮಿಶ್ರಾ ಅವರ ಮೇಲೆ ಅಖಿಲೇಶ್ ಬೆಟ್ಟಿಂಗ್ ನಡೆಸಿದರು. ಇದರಿಂದ ಕೋಪಗೊಂಡ ಶಾರದಾ ಮರುದಿನವೇ ಬಿಜೆಪಿ ಸೇರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+