ಉನ್ನಾವೋ: ಎಸ್‌ಪಿ ಮಾಜಿ ಸಚಿವರ ಫ್ಲಾಟ್‌ನಲ್ಲಿ ನಾಪತ್ತೆಯಾಗಿದ್ದ ಯುವತಿಯ ಶವ ಪತ್ತೆ

ಉನ್ನಾವೋ ಫೆಬ್ರವರಿ 10: ಕಳೆದ ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಮಾಹಿತಿಯ ಪ್ರಕಾರ, ಮಾಜಿ ಎಸ್ಪಿ ಸಚಿವರ ಪುತ್ರ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಯುವತಿಯ ಶವವನ್ನು ಪೊಲೀಸರು ವಶಪಡಿಸಿಕೊಂಡರು. ಆರೋಪಿಯ ತಂದೆ ಎಸ್ಪಿ ಸರಕಾರದಲ್ಲಿ ಸಚಿವರಾಗಿದ್ದರು. ಎಸ್‌ಪಿಯ ಮಾಜಿ ಸಚಿವ ಫತೇಹ್ ಬಹದ್ದೂರ್ ಸಿಂಗ್ ಅವರ ಮಗ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಆರೋಪಿಗಳ ಮಾಹಿತಿ ಮೇರೆಗೆ ಪೊಲೀಸರು ಕಾರ್ಮಿಕರ ಸಹಾಯದಿಂದ ಭೂಮಿಯನ್ನು ಅಗೆದು ಯುವತಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಪ್ರಕರಣದಿಂದಾಗಿ ಕೆಲ ದಿನಗಳ ಹಿಂದೆ ಯುವತಿಯ ತಾಯಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಕಾರಿನ ಮುಂದೆ ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿದ್ದರು.

ಎಎಸ್ಪಿ ಶಶಿ ಶೇಖರ್ ಸಿಂಗ್ ಮಾತನಾಡಿ, ''ಡಿಸೆಂಬರ್ 8 ರಂದು ಯುವತಿ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಅದರ ಆಧಾರದ ಮೇಲೆ ನಾವು ಎಫ್‌ಐಆರ್‌ ದಾಖಲಿಸಿದ್ದೇವೆ. ನಾವು ಒಬ್ಬ ಶಂಕಿತನನ್ನು ಬಂಧಿಸಿದ್ದೇವೆ. ಆತನ ಹೇಳಿಕೆ ಆಧಾರದ ಮೇಲೆ ಇಂದು ಇಲ್ಲಿ ಮೃತದೇಹ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ. ಈ ವಿಚಾರದಲ್ಲಿ ತನಿಖೆ ನಡೆಯುತ್ತಿದೆ'' ಎಂದರು.

UP Election 2022 Phase 1 Voting : ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.35.03 ಮತದಾನ
ಡಿಸೆಂಬರ್ 8 ರಿಂದ ಬಾಲಕಿ ನಾಪತ್ತೆ

ಉನ್ನಾವೋ ಸದರ್‌ನ ಕಾನ್ಶಿರಾಮ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಯುವತಿ ಡಿಸೆಂಬರ್ 8 ರಿಂದ ಕಾಣೆಯಾಗಿದ್ದರು. ನಾಪತ್ತೆಗೆ ಮಾಜಿ ಎಸ್ಪಿ ಸಚಿವರು ಕಾರಣ ಎಂದು ಬಾಲಕಿಯ ತಾಯಿ ಆರೋಪಿಸಿದ್ದರು. ಫತೇ ಬಹದ್ದೂರ್ ಸಿಂಗ್ ಅವರ ಪುತ್ರ ರಾಜೋಲ್ ಸಿಂಗ್ ಆರೋಪಿ ಎನ್ನಲಾಗುತ್ತಿದೆ. ಈ ವಿಷಯದಲ್ಲಿ ಪೊಲೀಸರಿಂದ ಯಾವುದೇ ಕ್ರಮ ಕೈಗೊಳ್ಳದ ಕಾರಣ ತಾಯಿ ಜನವರಿ 24 ರಂದು ಲಕ್ನೋದಲ್ಲಿ ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಕಾರಿನ ಮುಂದೆ ಆತ್ಮಾಹುತಿಗೆ ಯತ್ನಿಸಿದ್ದರು. ಈ ಘಟನೆಯ ನಂತರ, ವಿಷಯ ತನಿಖೆ ಚುರುಕುಗೊಂಡಿತು. ಪೊಲೀಸರು ವಿಚಾರಣೆ ತೀವ್ರಗೊಳಿಸಿದರು.

Unnao: Missing Girl’s Body Found From Former SP Minister’s Plot

ಪ್ರಕರಣದಲ್ಲಿ ಓರ್ವ ಆರೋಪಿ ಜೈಲು ವಾಸ

ಈ ಪ್ರಕರಣದಲ್ಲಿ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜೋಲ್ ಸಿಂಗ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ನ್ಯಾಯಾಲಯದಿಂದ ರಿಮಾಂಡ್ ಆದೇಶವನ್ನು ಪಡೆದ ಪೊಲೀಸರು ರಾಜೋಲ್ ಸಿಂಗ್ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಮಹತ್ವದ ಮಾಹಿತಿ ಪಡೆದ ಪೊಲೀಸರು ಸುಳಿವು ಹುಡುಕತೊಡಗಿದರು. ಮೊಬೈಲ್ ಫೋನ್ ಕಣ್ಗಾವಲಿನ ಸಹಾಯದಿಂದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.

ಖಾಲಿ ಜಾಗದಲ್ಲಿ ಹೂತಿದ್ದ ಶವ ಪತ್ತೆ

ಕಬ್ಬಖೇಡದಲ್ಲಿ ಮಾಜಿ ಸಚಿವರು ನಿರ್ಮಿಸಿದ ದಿವ್ಯಾನಂದ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಹಂತ ಹಂತವಾಗಿ ವಿಚಾರಣೆ ಬಳಿಕ ವಶಕ್ಕೆ ಪಡೆದರು. ವಿಚಾರಣೆ ಬಳಿಕ ಸ್ಥಳದಲ್ಲಿದ್ದ ಪೊಲೀಸರು ಗುರುವಾರ ಮಾಜಿ ಸಚಿವರು ನಿರ್ಮಿಸಿರುವ ಆಶ್ರಮದ ಬಳಿಯ ಖಾಲಿ ಜಾಗದಲ್ಲಿ ಅಗೆಯಲು ಆರಂಭಿಸಿದರು. ಪ್ಲಾಟ್‌ನಲ್ಲಿ ಸುಮಾರು ಏಳು ಅಡಿ ಆಳದ ಹೊಂಡ ಅಗೆದ ಬಳಿಕ ಬಾಲಕಿಯ ಶವ ಹೂತಿರುವುದು ಪತ್ತೆಯಾಗಿದೆ.

ರಾಜಕೀಯ ಕದನಕ್ಕೆ ದಾರಿ

ಈ ಪ್ರಕರಣ ಸದ್ಯ ಆಡಳಿತ ಪಕ್ಷಗಳ ವಾಗ್ದಾಳಿಗೆ ಕಾರಣವಾಗಿದೆ. ಯುವತಿಯ ಸಾವಿಗೆ ಕಾರಣರಾದ ಎಸ್‌ಪಿ ಮಾಜಿ ಸಚಿವ ಹಾಗೂ ಅವರ ಪುತ್ರರನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಹೇರಲಾಗಿದೆ. ಇನ್ನೂ ಯುವತಿಯ ತಾಯಿ ಕೂಡ ಇದೇ ಆರೋಪವನ್ನು ಮಾಡಿದ್ದಾರೆ. ತಮ್ಮ ಮಗಳ ಸಾವಿಗೆ ಕಾರಣರಾದ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು. ತಮಗೆ ನ್ಯಾಯ ಸಿಗಬೇಕೆಂದು ಮನವಿ ಮಾಡಿದ್ದಾರೆ.

Recommended Video

      Uttar Pradesh Election 2022 : ಓವೈಸಿ ಪಡೆಯೋ ಒಂದೊಂದು ಮತವೂ ಯೋಗಿಗೆ ಲಾಭವಾಗುತ್ತೆ!! ಹೇಗೆ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+