ಜೀವನ ಮತ್ತು ಜೀವನೋಪಾಯವನ್ನು ಉಳಿಸಲು ಪ್ರಯತ್ನದಲ್ಲಿ ಬಿಜೆಪಿ
ಬುಲಂದ್ಶಹರ್ ಜನವರಿ 30: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ಬುಲಂದ್ಶಹರ್ನಲ್ಲಿ ಮತಬೇಟೆ ಶುರು ಮಾಡಿದರು. ಇಲ್ಲಿ ನಡೆದ ಮತದಾರರ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷ, ಬಿಎಸ್ಪಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳಿಗೆ ಅಭಿವೃದ್ಧಿಗೆ ಸಮಯವಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಸಾರ್ವಜನಿಕ ಸಭೆಗೂ ಮುನ್ನ ಸಿಎಂ ಯೋಗಿ ಅವರು ಸೇಠ್ ಸೂರಜ್ಮಲ್ ಜಥಿಯಾ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಈ ವೇಳೆ ಮತದಾರರ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಬುಲಂದ್ಶಹರ್ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಿಂತಿರುವ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು.

ದೇಶದ ಜನ ಜೀವನ ಉಳಿಸಲು ಪ್ರಯತ್ನ
ಕಳೆದ ಎರಡು ವರ್ಷಗಳಿಂದ ರಾಜ್ಯ ಮಾತ್ರವಲ್ಲದೆ ಇಡೀ ವಿಶ್ವವೇ ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ಕೊರೊನಾ ಮಹಾಮಾರಿಯಿಂದ ಪಾರಾಗಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಮಾಡಿದ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಏಕೆಂದರೆ ಈ ಸಂಪೂರ್ಣ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನ ಮತ್ತು ಜೀವನೋಪಾಯವನ್ನು ಉಳಿಸಲು ಪ್ರಯತ್ನ ಮಾಡಲಾಗಿದೆ ಎಂದು ಯೋಗಿ ಹೇಳಿದರು.

ಅತೀ ಹೆಚ್ಚು ಲಸಿಕೆ ಪಡೆದ ದೇಶದ ಮೊದಲ ರಾಜ್ಯ
ಎಲ್ಲರಿಗೂ ಉಚಿತ ಪರೀಕ್ಷೆ, ಉಚಿತ ಚಿಕಿತ್ಸೆ ಮತ್ತು ಉಚಿತ ಲಸಿಕೆ ಮತ್ತು ಪ್ರತಿಯೊಬ್ಬ ಬಡವರಿಗೆ ಡಬಲ್ ಡೋಸ್ ಪಡಿತರವನ್ನು ನೀಡುವ ಕೆಲಸವನ್ನು ಈ ಸರ್ಕಾರ ಮಾಡಿದೆ. ಇಂದು ಸಂಜೆಯ ವೇಳೆಗೆ ಗರಿಷ್ಠ ಲಸಿಕೆ ಅಂದರೆ 26 ಕೋಟಿ ಡೋಸ್ ನೀಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರ ಪ್ರದೇಶ ಪಾತ್ರವಾಗಲಿದೆ. 9 ಕೋಟಿ 95 ಲಕ್ಷ ಪರೀಕ್ಷೆಗಳನ್ನು ನಡೆಸಿರುವ ರಾಜ್ಯವಿದೆ. ಮೂರನೇ ಅಲೆಯ ಸಮಯದಲ್ಲಿ, ಓಮಿಕ್ರಾನ್ ಹೊಸ ರೂಪಾಂತರವನ್ನು ಗುರುತಿಸಲಾಯಿತು. ಜನರು ಏನಾಗಬಹುದು ಎಂದು ಆತಂಕಗೊಂಡಿದ್ದರು. ನಮ್ಮ ಸರ್ಕಾರ ವೃತ್ತಿಪರ ಗೂಂಡಾಗಳು ಮತ್ತು ಮಾಫಿಯಾಗಳನ್ನು ಜೈಲಿಗಟ್ಟುವುದು ಮಾತ್ರವಲ್ಲದೆ ಕೊರೊನಾವನ್ನು ಗುಣಪಡಿಸುವ ಕಾರ್ಯ ಮಾಡಿದೆ ಎಂದು ಹೇಳಿದರು.

ಸಿಎಂ ಯೋಗಿಯಿಂದಲೇ ಜನರಿಗೆ ಆಹ್ವಾನ
ಬುಲಂದ್ಶಹರ್ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿ, ಚುನಾವಣಾ ಆಯೋಗ ಬೃಹತ್ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಿಲ್ಲಿಸಿದೆ. ಆದರೆ ಸಾರ್ವಜನಿಕ ಸಭೆಗಳಿಗೆ 500 ರಿಂದ 700 ಜನರು ಬರಬಹುದು. ಇದು ಕೇವಲ ಒಂದು ಸಣ್ಣ ಸಂಖ್ಯೆ. ಆದರೆ ಉತ್ಸಾಹ ಮಾಡುವ ವೇಳೆ ಜನಸಂಖ್ಯೆ 500 ರಿಂದ 50 ಸಾವಿರವನ್ನು ಮೀರಿಸುತ್ತದೆ ಇದಕ್ಕೆ ನಿಷೇಧವಿದೆ ಎಂದರು.
Recommended Video

ಎಸ್ಪಿ ವಿರುದ್ಧ ಯೋಗಿ ವ್ಯಂಗ್ಯ
ಈ ವೇಳೆ ಸಿಎಂ ಯೋಗಿ ಮಾತನಾಡಿ, ಹಿಂದಿನ ಸರ್ಕಾರಗಳಿಗೆ ಅಭಿವೃದ್ಧಿಗೆ ಸಮಯವಿರಲಿಲ್ಲ. ಚಿಕ್ಕಪ್ಪ-ಸೋದರಳಿಯರ ಪಕ್ಷಕ್ಕೆ ಸೈಫಾಯಿ ಕುಟುಂಬದ ಅಭಿವೃದ್ಧಿಯೇ ಸರ್ವಸ್ವವಾಗಿತ್ತು. ಸೋದರಳಿಯನ ಅಭಿವೃದ್ಧಿಯೇ ತಂಗಿಗೆ ಸರ್ವಸ್ವವಾಗಿತ್ತು ಮತ್ತು ಅಕ್ಕ-ತಂಗಿಯರ ಪಕ್ಷಕ್ಕೆ ಆಪತ್ತು ಬಂದಾಗ ಭಾರತವನ್ನು ನೆನಪಿಸಿಕೊಳ್ಳುವುದಿಲ್ಲ, ನಂತರ ಅವರು ಇಟಲಿಯಲ್ಲಿ ಅಜ್ಜಿಯನ್ನು ಕಳೆದುಕೊಳ್ಳುತ್ತಾರೆ.












Click it and Unblock the Notifications