ಗಂಗಾ ತೀರದಲ್ಲಿ ಮುಗ್ಗರಿಸಿ ಬಿದ್ದ ಮೋದಿ: ವಿಡಿಯೋ ವೈರಲ್
Recommended Video
ಕಾನ್ಪುರ, ಡಿಸೆಂಬರ್ 14: ಮೆಟ್ಟಿಲು ಹತ್ತುವಾಗ ಪ್ರಧಾನಿ ನರೇಂದ್ರ ಮೋದಿ ಎಡವಿ ಬಿದ್ದಿರುವ ಘಟನೆ ಇಂದು ನಡೆದಿದೆ. ಮೋದಿ ಮುಗ್ಗರಿಸಿ ಬಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಕಾನ್ಪುರಕ್ಕೆ ತೆರಳಿದ್ದ ಮೋದಿ 'ನಮಾಮಿ ಗಂಗಾ' ಯೋಜನೆಯ ಪರಿಶೀಲಿಸಲೆಂದು ಗಂಗಾ ಘಾಟ್ ಗೆ ಭೇಟಿ ನೀಡಿದ್ದರು. ಈ ವೇಳೆ ಮೆಟ್ಟಿಲು ಹತ್ತುವಾಗ ಎಡವಿ ನೆಲಕ್ಕೆ ಬಿದ್ದರು.
ಸ್ವಲ್ಪ ಬಿರ-ಬಿರನೇ ಹೆಜ್ಜೆ ಹಾಕುತ್ತಿದ್ದ ಮೋದಿ ಅವರಿಗೆ ಎಚ್ಚರಿಕೆಯಿಂದ ನಡೆಯುವಂತೆ ಭದ್ರತಾ ಸಿಬ್ಬಂದಿ ಹೇಳಿದರು. ಆದರೂ ಲೆಕ್ಕಿಸದೇ ವೇಗವಾಗಿ ಮೆಟ್ಟಿಲೇರುತ್ತಿದ್ದ ಮೋದಿ, ಕಾಲು ಎಡವಿ ಬಿದ್ದು ಬಿಟ್ಟರು.
ಮೋದಿ ಅವರು ಬಿದ್ದ ಕೂಡಲೇ ಹತ್ತಿರವೇ ಇದ್ದ ಭದ್ರತಾ ಸಿಬ್ಬಂದಿ ಶರವೇಗದಲ್ಲಿ ಧಾವಿಸಿಬಂದು ಮೋದಿ ಅವರನ್ನು ಎತ್ತಿ ನಿಲ್ಲಿಸಿದರು. ವಿಚಲಿತರಾಗದೆ ಮೋದಿ ಅವರು ಮಾಮೂಲಿನಂತೆ ಮುಂದೆ ಸಾಗಿದರು.
ಪ್ರಧಾನಿ ನರೇಂದ್ರ ಮೋದಿ ಮುಗ್ಗರಿಸಿ ಬಿದ್ದ ಸಂದರ್ಭ ಹೇಗಿತ್ತು ಗೊತ್ತಾ..?#NarendraModi pic.twitter.com/ktgKo7tJ4W
— Oneindia Kannada (@OneindiaKannada) December 14, 2019

ಕ್ಷಣಾರ್ಧದಲ್ಲಿ ವಿಡಿಯೋ ವೈರಲ್ ಆಗಿದೆ
ಮೋದಿ ಅವರು ಎಡವಿ ಬಿದ್ದಿರುವ ವಿಡಿಯೋ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಕೆಲವು ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಹಾಸ್ಯ, ವ್ಯಂಗ್ಯದ ಪ್ರತಿಕ್ರಿಯೆಗಳೇ ಹೆಚ್ಚಿವೆ.

ಮೋದಿ ಎಡವಿದ್ದು ಎಡಗಾಲೋ ಬಲಗಾಲೋ?
ಮೋದಿ ಎಡವಿದ್ದು ಬಲಗಾಲೋ? ಅಥವಾ ಎಡಗಾಲೋ ಎಂದೂ ಸಹ ಚರ್ಚೆ ಆರಂಭವಾಗಿದೆ. ಮೋದಿ ಅವರು ಎಡಗಾಲು ಎಡವಿದ್ದಾರೆ ದೇಶಕ್ಕೆ ಆಪತ್ತು ಕಾದಿದೆ ಎಂದೂ ಸಹ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಗಂಭಿರ ಚರ್ಚೆಯಲ್ಲೇ ತೊಡಗಿಬಿಟ್ಟಿದ್ದಾರೆ.

'ಮೋದಿಗೆ ವಯಸ್ಸಾಯಿತೆ?' ಚರ್ಚೆ ಆರಂಭ
ಗಂಗೆಗೆ ಹೀಗೂ ನಮಿಸಬಹುದೇ? ಎಂದು ಒಬ್ಬರು ಪ್ರಶ್ನೆ ಮಾಡಿದ್ದರೆ, ಮೋದಿ ಅವರಿಗೆ ವಯಸ್ಸಾಯಿತು ಎಂದು ಮತ್ತೊಬ್ಬರು ಮೂದಲಿಸಿದ್ದಾರೆ.

ಸದಾ ಎಚ್ಚರದಿಂದಿರುವ ಮೋದಿ ಎಡವಿದ್ದು ಹೇಗೆ?
ಯೋಗ, ಆಹಾರ ಪಥ್ಯ ಎಲ್ಲದರಲ್ಲೂ ನಿಗಾ ವಹಿಸುವ ಮೋದಿ ಅವರು ಸದಾ ಎಚ್ಚರದಿಂದ ಇರುತ್ತಾರೆ. ಈ ರೀತಿಯ ಸಣ್ಣ-ಪುಟ್ಟ ಎಚ್ಚರಿಕೆ ತಪ್ಪುವಿಕೆ ಅವರಿಂದ ಆಗುವುದು ಬಹಳಾ ವಿರಳ. ಆದರೆ ಅವರು ಇಂದು ಎಡವಿದ್ದಾರೆ. ಯಾವುದೇ ಗಾಯಗಳು ಮೋದಿ ಅವರಿಗೆ ಆಗಿಲ್ಲ.
-
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
ಅಪ್ಪನ ಸಕ್ಕರೆ ಚಟ ಬಿಡಿಸಲು ಮೋದಿ ಮೊರೆ ಹೋದ ಯುವಕ: ವಿಡಿಯೋ Viral, ಪ್ರಧಾನಿಯಿಂದ ಬಂತು ಅಚ್ಚರಿಯ ರಿಪ್ಲೈ -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ












Click it and Unblock the Notifications