Hoax Bomb Threat- ಹುಸಿ ಬಾಂಬ್ ಕರೆ: ರೈಲ್ವೆ ಗಲಿಬಿಲಿ- ಗೋರಖಪುರ್ ರೈಲು ಗಂಟೆಗಟ್ಟಲೆ ಸ್ಥಗಿತ
ಗೋರಖಪುರ್, ಮೇ 18: ದೇಶದ ಹಲವೆಡೆ ಭದ್ರತಾ ಸಂಸ್ಥೆಗಳಿಗೆ ಹುಸಿ ಬಾಂಬ್ ಕರೆಯದ್ದೇ ದೊಡ್ಡ ತಲೆನೋವಾಗಿದೆ. ಉಗ್ರಗಾಮಿಗಳಿಂದ ಯಾವಾಗ ಎಲ್ಲಿ ಬೇಕಾದರೂ ದಾಳಿಯಾಗುವ ಅಪಾಯ ಇರುವುದರಿಂದ ಯಾವ ಬೆದರಿಕೆ ಕರೆಯನ್ನೂ ಲಘುವಾಗಿ ಪರಿಗಣಿಸಲು ಆಗುವುದಿಲ್ಲ. ಇದನ್ನು ಕಿಡಿಗೇಡಿಗಳು ದುರುಪಯೋಗಿಸಿಕೊಂಡು ಹುಸಿ ಬಾಂಬ್ ಬೆದರಿಕೆ ಕರೆ ನೀಡಿ ವಿಕೃತ ಸಂತೋಷ ಪಡೆಯುವುದುಂಟು. ಇದೀಗ ಅಂಥದ್ದೊಂದು ಹುಸಿ ಬಾಂಬ್ ಬೆದರಿಕೆ ಉತ್ತರಪ್ರದೇಶದ ಹಮ್ಸಫರ್ ಎಕ್ಸ್ಪ್ರೆಸ್ ರೈಲಿಗೆ ಬಂದ ಘಟನೆ ನಡೆದಿದೆ.
ಗೋರಖಪುರ್-ಬಾಂದ್ರಾ ಹಮ್ಸಫರ್ ಎಕ್ಸ್ಪ್ರೆಸ್ ರೈಲಿನಲ್ಲಿ ಉಗ್ರರು ಬಾಂಬ್ ಇಟ್ಟಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ್ದ. ನಿನ್ನೆ ಮಂಗಳವಾರ ರಾತ್ರಿ ನಡೆದ ಈ ಬೆಳವಣಿಗೆಯಲ್ಲಿ ರೈಲನ್ನು ಸಂಪೂರ್ಣವಾಗಿ ತಪಾಸಿಸಲಾಯಿತು. ಆದರೆ, ಯಾವುದೇ ಬಾಂಬ್ ಸಿಗಲಿಲ್ಲ. ಇದರಿಂದ ರೈಲು ಹಲವು ಗಂಟೆಗಳ ಕಾಲ ವಿಳಂಬವಾಯಿತು. ಅಷ್ಟರಲ್ಲಿ ಸಾರ್ವಜನಿಕರು, ಅಧಿಕಾರಿಗಳೂ ಸೇರಿ ರೈಲ್ವೆ ನಿಲ್ದಾಣದಲ್ಲಿದ್ದ ಎಲ್ಲರಿಗೂ ಗಲಿಬಿಲಿಗೊಳ್ಳುವಂತಾಯಿತು.
ಉಗ್ರರು ಟ್ರೈನಿನಲ್ಲಿ ಬಾಂಬ್ ಇಟ್ಟಿದ್ದಾರೆಂದು ಟ್ವೀಟ್ ಮಾಡಿದ ವ್ಯಕ್ತಿ ಮಿಲನ್ ರಜಾಕ್ ಎನ್ನಲಾಗಿದೆ. ಅಥವಾ ಆ ಹೆಸರಿನ ಟ್ವಿಟ್ಟರ್ ಅಕೌಂಟ್ನಿಂದ ಹುಸಿ ಬಾಂಬ್ ಕರೆಯ ಟ್ವೀಟ್ ಆಗಿದೆ.

"ಟ್ರೈನ್ ನಂಬರ್ 19092 ಗಾಡಿಯ ಕೆಳಗೆ ಯಾರೋ ಉಗ್ರಗಾಮಿಯೊಬ್ಬ ಬಾಂಬ್ ಇಟ್ಟಿದ್ದು, ಅದು ಚಲಿಸಿದರೆ ಬಾಂಬ್ ಸ್ಫೋಟಗೊಳ್ಳುತ್ತದೆ. ಒಂದು ವಾರ ಕಾಲ ಟ್ರೈನನ್ನು ನಿಲ್ಲಿಸಿ ಸಂಪೂರ್ಣ ಪರಿಶೀಲನೆ ಮಾಡಿ ದೊಡ್ಡ ಅನಾಹುತ ತಪ್ಪಿಸಬೇಕು" ಎಂದು ಈ ವ್ಯಕ್ತಿ ಟ್ವೀಟ್ ಮಾಡಿದ್ದ. ಟ್ವಿಟ್ಟರ್, ರೈಲ್ವೆ ಇಲಾಖೆ ಮತ್ತು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರಿಗೆ ಟ್ಯಾಗ್ ಮಾಡಿ ಪ್ರತ್ಯೇಕವಾಗಿ ಇದೇ ಸಂದೇಶವನ್ನು ಈತ ಟ್ವೀಟ್ ಮಾಡಿದ್ದಾನೆ.

ಆದರೆ, ಈತ ತಪ್ಪು ಮಾಹಿತಿ ನೀಡಿರುವುದು ತಿಳಿಯುವ ಮುನ್ನ ರೈಲ್ವೆ ಇಲಾಖೆ ಅತಂಕದ ಕ್ಷಣಗಳನ್ನು ಕಳೆಯಬೇಕಾಯಿತು. ಈ ಮಿಲನ್ ರಜಾಕ್ ಎಂಬ ವ್ಯಕ್ತಿ ಮೇ ೧೧ ಮತ್ತು ೧೨ರಂದೂ ಕೂಡ ಇದೇ ಗೋರಖ್ಪುರ್-ಬಾಂದ್ರಾ ಎಕ್ಸ್ಪ್ರೆಸ್ ರೈಲಿಗೆ ಬಾಂಬ್ ಹಾಕುವ ಸಾಧ್ಯತೆ ಇದೆ ಎಂದು ಎಚ್ಚರಿಸಿ ಟ್ವೀಟ್ಗಳನ್ನು ಮಾಡಿದ್ದನೆನ್ನಲಾಗಿದೆ. ಆದರೆ, ಆತ ತಿಳಿಸಿದ ದಿನಗಳಂದು ಇಲ್ಲಿ ಆ ರೈಲು ಚಾಲನೆಯಲ್ಲಿರಲಿಲ್ಲ. ಹೀಗಾಗಿ, ಯಾವ ಕ್ರಮವನ್ನೂ ತೆಗೆದುಕೊಂಡಿರಲಿಲ್ಲ. ಇದೀಗ ಪೊಲೀಸರು ಈ ಟ್ವೀಟ್ ಮಾಡಿದ ವ್ಯಕ್ತಿ ಯಾರೆಂದು ಪತ್ತೆಹಚ್ಚುವ ಕಾರ್ಯದಲ್ಲಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications