ಉತ್ತರ ಪ್ರದೇಶದಲ್ಲಿ ಎಕ್ಸಿಟ್ ಪೋಲ್ ನಿಷೇಧಿಸಿದ ಚುನಾವಣಾ ಆಯೋಗ
ಲಕ್ನೋ,
ಜನವರಿ
29:
ಉತ್ತರ
ಪ್ರದೇಶ
ವಿಧಾನಸಭೆ
ಚುನಾವಣೆಗೆ
ಸಂಬಂಧಿಸಿದಂತೆ
ಚುನಾವಣಾ
ಆಯೋಗವು
ಎಲ್ಲ
ಸಮೀಕ್ಷೆಗಳನ್ನು
ನಿರ್ಬಂಧಿಸಿದೆ.
ಫೆಬ್ರವರಿ.10
ಬೆಳಿಗ್ಗೆ
7.00
ರಿಂದ
ಮಾರ್ಚ್
7ರ
ಸಂಜೆ
6.30ರವರೆಗೆ
ಎಲ್ಲಾ
ಎಕ್ಸಿಟ್
ಪೋಲ್
ಅನ್ನು
ಆಯೋಗ
ನಿಷೇಧಿಸಿದೆ.
ಶನಿವಾರ
ಇಲ್ಲಿ
ಬಿಡುಗಡೆ
ಮಾಡಿದ
ಹೇಳಿಕೆಯಲ್ಲಿ
ವಿಧಾನಸಭೆ
ಚುನಾವಣೆಯ
ಎಕ್ಸಿಟ್
ಪೋಲ್
ನಡೆಸುವುದು,
ಮುದ್ರಣ
ಅಥವಾ
ಎಲೆಕ್ಟ್ರಾನಿಕ್
ಮಾಧ್ಯಮಗಳಲ್ಲಿ
ಅದರ
ಪ್ರಕಟಣೆ
ಅಥವಾ
ಅವುಗಳ
ಪ್ರಚಾರವನ್ನು
ಫೆಬ್ರವರಿ
10ರಂದು
ಬೆಳಿಗ್ಗೆ
7.00
ರಿಂದ
ಮಾರ್ಚ್
7ರ
ಸಂಜೆ
6.30
ರವರೆಗೆ
ನಿಷೇಧಿಸಲಾಗಿದೆ
ಎಂದು
ಯುಪಿ
ಮುಖ್ಯ
ಚುನಾವಣಾ
ಅಧಿಕಾರಿ
ಅಜಯ್
ಕುಮಾರ್
ಶುಕ್ಲಾ
ತಿಳಿಸಿದ್ದಾರೆ.
ಸಮೀಕ್ಷೆಯೊಂದು ಮಾಫಿಯಾ ಅಭಿಪ್ರಾಯ ಸಂಗ್ರಹವಲ್ಲ: ಅಖಿಲೇಶ್ ಯಾದವ್
ರಾಜ್ಯ ಚುನಾವಣಾ ಆಯೋಗದ ಆದೇಶವನ್ನು ಯಾವುದೇ ವ್ಯಕ್ತಿಗಳು ಉಲ್ಲಂಘಿಸಿಸಿದರೆ, ಅಂಥವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಚುನಾವಣಾಪೂರ್ವ
ಸಮೀಕ್ಷೆ
ವಿರುದ್ಧ
ಎಸ್ಪಿ
ಆರೋಪ:
ಉತ್ತರ
ಪ್ರದೇಶ
ವಿಧಾನಸಭೆ
ಚುನಾವಣೆಗೆ
ಸಂಬಂಧಿಸಿದಂತೆ
ಕೆಲವು
ಸುದ್ದಿ
ವಾಹಿನಿಗಳಲ್ಲಿ
ಪ್ರಸಾರವಾಗುತ್ತಿರುವ
ಅಭಿಪ್ರಾಯ
ಸಮೀಕ್ಷೆಗಳನ್ನು
ನಿರ್ಬಂಧಿಸಬೇಕು
ಎಂದು
ಇತ್ತೀಚಿಗಷ್ಟೇ
ಸಮಾಜವಾದಿ
ಪಕ್ಷ
ಒತ್ತಾಯಿಸಿತ್ತು.
ಕೇಂದ್ರ
ಚುನಾವಣಾ
ಆಯೋಗದ
ಮುಖ್ಯಸ್ಥ
ಸುಶೀಲ್
ಚಂದ್ರರಿಗೆ
ಬರೆದ
ಪತ್ರದಲ್ಲಿ
ಸಮಾಜವಾದಿ
ಪಕ್ಷ
ಈ
ಬಗ್ಗೆ
ಉಲ್ಲೇಖಿಸಿತ್ತು.
ಈ
ವಿಧಾನಸಭೆ
ಚುನಾವಣಾಪೂರ್ವ
ಸಮೀಕ್ಷೆಗಳನ್ನು
ಪ್ರಸಾರ
ಮಾಡುವುದು
ನೀತಿ
ಸಂಹಿತೆಯ
ಉಲ್ಲಂಘನೆ
ಆಗುತ್ತದೆ.
ಇಂಥ
ಸಮೀಕ್ಷೆಗಳು
ಮತದಾರರ
ದಾರಿ
ತಪ್ಪಿಸುತ್ತಿದ್ದು,
ಚುನಾವಣೆ
ಮೇಲೆ
ಪರಿಣಾಮ
ಬೀರಲಿವೆ
ಎಂದು
ಎಸ್ಪಿ
ದೂಷಿಸಿತ್ತು.
ಉತ್ತರ
ಪ್ರದೇಶದಲ್ಲಿ
ಏಳು
ಹಂತಗಳಲ್ಲಿ
ಮತದಾನ
ಉತ್ತರ
ಪ್ರದೇಶದಲ್ಲಿ
ಫೆಬ್ರವರಿ
10,
ಫೆಬ್ರವರಿ
14,
ಫೆಬ್ರವರಿ
20,
ಫೆಬ್ರವರಿ
23,
ಫೆಬ್ರವರಿ
27,
ಮಾರ್ಚ್
3
ಮತ್ತು
ಮಾರ್ಚ್
7ರಂದು
ಒಟ್ಟು
ಏಳು
ಹಂತಗಳಲ್ಲಿ
ಮತದಾನ
ನಡೆಯಲಿದೆ.
ಅಂತಿಮವಾಗಿ
ಮಾರ್ಚ್
10ರಂದು
ಉತ್ತರ
ಪ್ರದೇಶ
ಸೇರಿದಂತೆ
ಐದು
ರಾಜ್ಯಗಳಲ್ಲಿ
ನಡೆದ
ವಿಧಾನಸಭೆ
ಚುನಾವಣೆಯ
ಫಲಿತಾಂಶ
ಪ್ರಕಟವಾಗಲಿದೆ.
ಈ
ಬಾರಿ
ವಿಧಾನಸಭೆ
ಚುನಾವಣೆಯಲ್ಲಿ
ಭಾರತೀಯ
ಜನತಾ
ಪಕ್ಷ,
ಅಖಿಲೇಶ್
ಯಾದವ್
ನೇತೃತ್ವದ
ಸಮಾಜವಾದಿ
ಪಕ್ಷ,
ಕಾಂಗ್ರೆಸ್
ಮತ್ತು
ಮಾಯಾವತಿ
ನೇತೃತ್ವದ
ಬಹುಜನ
ಸಮಾಜವಾದಿ
ಪಕ್ಷದ
ನಡುವೆ
ಜಿದ್ದಾಜಿದ್ದಿನ
ಪೈಪೋಟಿ
ನಡೆಯುತ್ತಿದೆ.
ಈ
ಹಿಂದೆ
2017ರಲ್ಲಿ
ಉತ್ತರ
ಪ್ರದೇಶದಲ್ಲಿ
403
ವಿಧಾನಸಭೆಗಳಿಗೆ
ನಡೆದ
ಚುನಾವಣೆಯಲ್ಲಿ
ಭಾರತೀಯ
ಜನತಾ
ಪಕ್ಷ
ಅತಿಹೆಚ್ಚು
ಸ್ಥಾನಗಳನ್ನು
ಗೆದ್ದು
ಅಧಿಕಾರದ
ಗದ್ದುಗೆ
ಏರಿತ್ತು.
ಒಟ್ಟು
403
ಕ್ಷೇತ್ರಗಳ
ಪೈಕಿ
ಬಿಜೆಪಿ
312
ಸ್ಥಾನಗಳನ್ನು
ಗೆದ್ದಿತ್ತು.
ಸಮಾಜವಾದಿ
ಪಕ್ಷ
47
ಸ್ಥಾನಗಳಲ್ಲಿ
ಗೆಲುವು
ಸಾಧಿಸಿದ್ದರೆ,
ಬಹುಜನ
ಸಮಾಜವಾದಿ
ಪಕ್ಷವು
19
ಕ್ಷೇತ್ರಗಳಲ್ಲಿ
ಗೆಲುವಿನ
ಬಾವುಟ
ಹಾರಿಸಿತ್ತು.
ರಾಷ್ಟ್ರೀಯ
ಪಕ್ಷ
ಕಾಂಗ್ರೆಸ್
ತೀವ್ರ
ಹಿನ್ನಡೆ
ಅನುಭವಿಸಿದ್ದು,
ಕೇವಲ
ಏಳು
ಕ್ಷೇತ್ರಗಳಲ್ಲಿ
ಮಾತ್ರ
ಗೆಲುವು
ಸಾಧಿಸುವಲ್ಲಿ
ಯಶಸ್ವಿಯಾಗಿತ್ತು.