Get Updates
Get notified of breaking news, exclusive insights, and must-see stories!

ಪ್ರಧಾನಿಯಾಗುವ ಕನಸು, ರಾಷ್ಟ್ರಪತಿಯಾಗುವುದಲ್ಲ: ಅಖಿಲೇಶ್‌ಗೆ ಮಾಯಾವತಿ ಟಾಂಗ್

ಲಕ್ನೋ, ಏಪ್ರಿಲ್ 28: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದ ಕೆಲವೇ ನಿಮಿಷಗಳಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ. "ನಾನು ಪ್ರಧಾನ ಮಂತ್ರಿಯಾಗುವ ಕನಸು ಹೊಂದಿದ್ದೇನೆ, ರಾಷ್ಟ್ರಪತಿಯಾಗುವ ಕನಸು ಹೊಂದಿರುವುದಲ್ಲ," ಎಂದು ಎಸ್‌ಪಿಯ ಅಖಿಲೇಶ್ ಯಾದವ್‌ಗೆ ಟಾಂಗ್ ನೀಡಿದ್ದಾರೆ.

"ಸಮಾಜವಾದಿ ಪಕ್ಷವು ತಾನು ಭಾರತದ ರಾಷ್ಟ್ರಪತಿಯಾಗಬೇಕೆಂದು ವದಂತಿಗಳನ್ನು ಹಬ್ಬಿಸುತ್ತಿದೆ," ಎಂದು ಆರೋಪ ಮಾಡಿದ ಮಾಯಾವತಿ, "ನಾನು ರಾಜ್ಯದ ಮುಖ್ಯಮಂತ್ರಿಯಾಗಲು ಆಕಾಂಕ್ಷಿಯಾಗಿದೆ. ಅದರಂತೆ ಮುಖ್ಯಮಂತ್ರಿಯಾದೆ ಈಗ ಅಂತಿಮವಾಗಿ ಪ್ರಧಾನ ಮಂತ್ರಿಯಾಗಬೇಕು ಎಂಬ ಕನಸಿದೆ. ನನಗೆ ನೆಮ್ಮದಿಯ ಜೀವನ ಬೇಡ ಬದಲಾಗಿ ಹೋರಾಟದ ಜೀವನ ಬೇಕು," ಎಂದು ನುಡಿದಿದ್ದಾರೆ.

ಮಾಯಾವತಿ ಆಪ್ತ ಸಹಾಯಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್‌ಸಿ ಮಿಶ್ರಾ ಮತ್ತು ಪಕ್ಷದ ಏಕೈಕ ಯುಪಿ ಶಾಸಕ ಉಮಾ ಶಂಕರ್ ಸಿಂಗ್, ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದ ನಂತರ ಬಿಎಸ್‌ಪಿ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಹಾಗೆಯೇ ತಾನು ಮುಖ್ಯಮಂತ್ರಿಯಾದ ಅವಧಿಯಲ್ಲಿ ನಿರ್ಮಿಸಲಾದ ಸ್ಮಾರಕಗಳ ನಿರ್ವಹಣೆ ಕುರಿತು ಸಭೆ ನಡೆಸಲಾಯಿತು ಎಂದು ಹೇಳಿದ್ದಾರೆ.

Dream Of Becoming PM, Not President Says Mayawati to Akhilesh Yadav

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಲಭಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಮೈನ್‌ಪುರಿಯಲ್ಲಿ ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಬಿಜೆಪಿ ಅಖಿಲೇಶ್ ಯಾದವ್‌ ಅವರನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡುತ್ತದೆಯೇ ಎಂದು ನೋಡಬೇಕು ಎಂದು ವ್ಯಂಗ್ಯವಾಡಿದರು.

ಮತ್ತೆ ಸಿಎಂ ಆಗಿ, ಬಳಿಕ ಪಿಎಂ ಆಗುತ್ತೇನೆ: ಮಾಯಾವತಿ

"ಸಮಾಜವಾದಿ ಪಕ್ಷವು ನನ್ನನ್ನು ಅಧ್ಯಕ್ಷರನ್ನಾಗಿ ಮಾಡುವ ತನ್ನ ಕನಸುಗಳನ್ನು ಮರೆತುಬಿಡಬೇಕು. ಇದರಿಂದ ಉತ್ತರ ಪ್ರದೇಶದಲ್ಲಿ ಅಧಿಕಾರದ ಹಾದಿ ಸ್ಪಷ್ಟವಾಗಿದೆ. ನಾನು ಎಂದಿಗೂ ಅಧ್ಯಕ್ಷನಾಗುವ ಕನಸು ಕಾಣುವುದಿಲ್ಲ. ಏಕೆಂದರೆ ನನಗೆ ನೆಮ್ಮದಿಯ ಜೀವನ ಬೇಡ ಆದರೆ ಹೋರಾಟದ ಜೀವನ ಬೇಕು. ನಾನು ಕನಸು ಕಾಣುತ್ತೇನೆ. ಮತ್ತೊಮ್ಮೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುತ್ತೇನೆ. ದೇಶದ ಪ್ರಧಾನಿಯಾಗುತ್ತೇನೆ," ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

"ನಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಸ್ಮಾರಕಗಳನ್ನು ಎಸ್‌ಪಿ ಮತ್ತು ಬಿಜೆಪಿ ಸರ್ಕಾರಗಳು ನಿರ್ಲಕ್ಷಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಎಸ್‌ಸಿ ಮಿಶ್ರಾ ನೇತೃತ್ವದ ಬಿಎಸ್‌ಪಿ ನಿಯೋಗ ಯೋಗಿ ಜಿ ಅವರನ್ನು ಭೇಟಿ ಮಾಡಲು ತೆರಳಿದೆ," ಎಂದು ಸ್ಪಷ್ಟಣೆ ನೀಡಿದರು.

Dream Of Becoming PM, Not President Says Mayawati to Akhilesh Yadav

ರಾಷ್ಟ್ರಪತಿ ಹುದ್ದೆ ಪ್ರಸ್ತಾಪ ಒಪ್ಪಿಕೊಳ್ಳಲ್ಲ ಎಂದಿದ್ದ ಮಾಯಾವತಿ

''ಯಾವುದೇ ಪಕ್ಷದಿಂದ ರಾಷ್ಟ್ರಪತಿ ಸ್ಥಾನದ ಆಫರ್ ಬಂದರೂ ಅದನ್ನು ಸ್ವೀಕರಿಸುವುದಿಲ್ಲ'' ಎಂದು ಬಿಎಸ್‌ಪಿ ವರಿಷ್ಠೆ ಮಾಯಾವತಿ ಈ ಹಿಂದೆ ಪ್ರತಿಪಾದನೆ ಮಾಡಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಮ್ಮನ್ನು ರಾಷ್ಟ್ರಪತಿಯನ್ನಾಗಿ ಮಾಡಲಾಗುವುದು ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಸುಳ್ಳು ಪ್ರಚಾರ ನಡೆಸಿವೆ. ಈ ಮೂಲಕ ಆಕೆಯ ಬೆಂಬಲಿಗರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

"ನಮ್ಮ ಪಕ್ಷದ ಅಂತ್ಯ ಎಂದು ನಮಗೆ ತಿಳಿದಿರುವಾಗ ನಾನು ಅಂತಹ ಹುದ್ದೆಯನ್ನು ಹೇಗೆ ಸ್ವೀಕರಿಸಲಿ," ಎಂದು ಪ್ರಶ್ನಿಸಿದ ಮಾಯಾವತಿ ಹಾಗಾಗಿ ನಮ್ಮ ಪಕ್ಷ ಮತ್ತು ಚಳವಳಿಯ ಹಿತದೃಷ್ಟಿಯಿಂದ ನಾನು ಯಾವುದೇ ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲ ಎಂದು ನಾನು ಪ್ರತಿಯೊಬ್ಬ ಬಿಎಸ್ಪಿ ಪದಾಧಿಕಾರಿಗಳಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ಬಿಜೆಪಿ ಅಥವಾ ಇತರ ಪಕ್ಷಗಳಿಂದ ಅಧ್ಯಕ್ಷ ಸ್ಥಾನ ಮತ್ತು ಭವಿಷ್ಯದಲ್ಲಿ ಅವರನ್ನು ಎಂದಿಗೂ ದಾರಿತಪ್ಪಿಸಬಾರದು ಎಂದು ಮಾಯಾವತಿ ತಿಳಿಸಿದರು.

Recommended Video

      Hardik Pandya ಪಂದ್ಯ ಮುಗಿದಾದ ನಂತರ ಹೀಗಾ ಹೇಳೋದು | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+