ಯುಪಿ ಚುನಾವಣೆ: ಅಪ್ನಾ ದಳ, ನಿಶಾದ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿ- ಜೆಪಿ ನಡ್ಡಾ
ಲಕ್ನೋ ಜನವರಿ 20: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪ್ರಾಥಮಿಕವಾಗಿ ಹಿಂದುಳಿದ ಜಾತಿಗಳ ವಿಭಾಗಗಳಿಂದ ತಮ್ಮ ಬೆಂಬಲವನ್ನು ಪಡೆಯುವ ಎರಡು ಪಕ್ಷಗಳಾದ ಅಪ್ನಾ ದಳ ಮತ್ತು ನಿಶಾದ್ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, ರಾಜ್ಯದಲ್ಲಿನ ಮೂರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪಾಲುದಾರರು 403 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಲಿದ್ದಾರೆ. ಹೂಡಿಕೆಯನ್ನು ಉತ್ತೇಜಿಸುವುದು ಮತ್ತು ಸಾಮಾಜಿಕ ಸೂಚಕಗಳಲ್ಲಿ ಸುಧಾರಣೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸುವುದು ಸೇರಿದಂತೆ ಹಲವಾರು ವಿಷಯಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಉತ್ತಮ ಆಡಳಿತವನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.
ಯುಪಿ
ಚುನಾವಣೆ:
ಬಿಜೆಪಿಗೆ
ಕಠಿಣವಾಗುತ್ತಾ
2ನೇ
ಹಂತದ
ಚುನಾವಣೆ
ಅಪ್ನಾ
ದಳದ
ಮುಖ್ಯಸ್ಥೆ,
ಕೇಂದ್ರ
ಸಚಿವೆ
ಅನುಪ್ರಿಯಾ
ಪಟೇಲ್
ಮತ್ತು
ನಿಶಾದ್
ಪಕ್ಷದ
ಮುಖ್ಯಸ್ಥ
ಸಂಜಯ್
ನಿಶಾದ್
ಅವರು
ಕೇಂದ್ರದ
ಪ್ರಧಾನಿ
ನರೇಂದ್ರ
ಮೋದಿ
ನೇತೃತ್ವದ
ಸರ್ಕಾರವು
ಇತರ
ಹಿಂದುಳಿದ
ವರ್ಗಗಳ
(ಒಬಿಸಿ)
ಹಿತಾಸಕ್ತಿಗಳಿಗಾಗಿ
ಕೆಲಸ
ಮಾಡುತ್ತಿದೆ
ಎಂದು
ಶ್ಲಾಘಿಸಿದರು.
ಜೊತೆಗೆ
ಬಿಜೆಪಿಯ
ಪ್ರತಿಸ್ಪರ್ಧಿಗಳ
ವಿರುದ್ಧ
ಹರಿಹಾಯ್ದರು.
ಹಿಂದುಳಿದ
ಸಮುದಾಯಗಳ
ದೊಡ್ಡ
ಇಬ್ಬಾಗ
ಮಾಡುವಲ್ಲಿ
ವಿರೋಧಪಕ್ಷಗಳು
ಪ್ರಯತ್ನಿಸುತ್ತಿವೆ
ಎಂದರು.
ಎನ್ಡಿಎ ಮತ್ತೆ ಸರ್ಕಾರ ರಚಿಸಲಿದೆ
ಉತ್ತರ ಪ್ರದೇಶದಲ್ಲಿ ಎನ್ಡಿಎ ಮತ್ತೆ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ಮಿತ್ರಪಕ್ಷಗಳೆರಡೂ ಹೇಳಿದ್ದು, ರಾಜ್ಯ ಸರ್ಕಾರವನ್ನೂ ಹೊಗಳಿವೆ. ಪ್ರತಿ ಪಕ್ಷ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.
ಯುಪಿ
ಚುನಾವಣೆ:
ಬಿಜೆಪಿ
ಕಾರ್ಯಕರ್ತರ
ಜೊತೆ
ಪ್ರಧಾನಿ
ಸಂವಾದ
ಬಿಜೆಪಿ
ಅಧಿಕಾರಕ್ಕೆ
ಬರುವ
ಮೊದಲು
ಉತ್ತರ
ಪ್ರದೇಶದಲ್ಲಿ
ಮಾಫಿಯಾ
ಸರ್ಕಾರ
ಸಕ್ರಿಯವಾಗಿತ್ತು.
ಆದರೆ
ಯೋಗಿ
ಆದಿತ್ಯನಾಥ್
ಸರ್ಕಾರವು
ರಾಜ್ಯದಲ್ಲಿ
ಕಾನೂನು
ಸುವ್ಯವಸ್ಥೆಯನ್ನು
ಪುನಃಸ್ಥಾಪಿಸಿದೆ
ಮತ್ತು
ಹೂಡಿಕೆಯ
ತಾಣವಾಗಿ
ಮಾಡಿದೆ
ಎಂದು
ನಡ್ಡಾ
ಹೇಳಿದ್ದಾರೆ.
ಈ
ಹಿಂದೆ
ಹೂಡಿಕೆದಾರರು
ತಮ್ಮ
ಹೂಡಿಕೆಯನ್ನು
ಹಿಂತೆಗೆದುಕೊಳ್ಳುತ್ತಿದ್ದಾರೆ
ಎಂದು
ಆರೋಪಿಸಿದರು.
ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ 'ಡಬಲ್ ಇಂಜಿನ್' ಬಿಜೆಪಿ ಅಧಿಕಾರದಲ್ಲಿದೆ ಎಂದು ಉಲ್ಲೇಖಿಸಿ, ಉತ್ತರ ಪ್ರದೇಶವು ಸಾಮಾಜಿಕ ಸೂಚಕಗಳಲ್ಲಿ ಸುಧಾರಣೆಯನ್ನು ಮಾಡಿದೆ. ಸಂಪರ್ಕ ಮತ್ತು ಶಿಕ್ಷಣ, ವಿಶೇಷವಾಗಿ ವೈದ್ಯಕೀಯ ಶಿಕ್ಷಣ, ಉತ್ತೇಜನವನ್ನು ಪಡೆಯುತ್ತಿದೆ ಎಂದರು. ಪಟೇಲ್ ಮತ್ತು ನಿಶಾದ್ ಇಬ್ಬರೂ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಿದ್ದಕ್ಕಾಗಿ ಮತ್ತು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಸೇರಿದಂತೆ ಶಿಕ್ಷಣದಲ್ಲಿ ಸಮುದಾಯ ಮೀಸಲಾತಿಯನ್ನು ನೀಡಿದ್ದಕ್ಕಾಗಿ ಮೋದಿ ಸರ್ಕಾರವನ್ನು ಶ್ಲಾಘಿಸಿದರು.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ಮತ್ತು ಮಾರ್ಚ್ 7 ರ ನಡುವೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 58 ಸ್ಥಾನಗಳಿಗೆ ಮತದಾನ ನಡೆದರೆ, 55 ಸ್ಥಾನಗಳು ಮತ್ತು 59 ಸ್ಥಾನಗಳು ಕ್ರಮವಾಗಿ ಎರಡನೇ ಹಂತ ಮತ್ತು ಮೂರನೇ ಹಂತದಲ್ಲಿ ಸಿಗಲಿವೆ. ಮಾರ್ಚ್ 10 ರಂದು ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆ ನಡೆಯಲಿದೆ.
Recommended Video
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್, ಎಎಪಿ ಮತ್ತು ಬಿಎಸ್ಪಿ ಏಕಾಂಗಿಯಾಗಿ ಮುನ್ನಡೆಯುತ್ತಿದ್ದರೆ, ಸಮಾಜವಾದಿ ಪಕ್ಷವು ಶಿವಪಾಲ್ ಯಾದವ್ ಅವರ ಪಿಎಸ್ಪಿ (ಎಲ್), ಮಹಾನ್ ದಳ, ಒಪಿ ರಾಜ್ಭರ್ ನೇತೃತ್ವದ ಎಸ್ಬಿಎಸ್ಪಿ, ಆರ್ಎಲ್ಡಿ ಮತ್ತು ಕೃಷ್ಣ ಪಟೇಲ್ರ ಅಪ್ನಾ ದಳ ಬಣದೊಂದಿಗೆ ಮೈತ್ರಿಯನ್ನು ಘೋಷಿಸಿದೆ. ಬಿಜೆಪಿ ಅಪ್ನಾ ದಳ ಮತ್ತು ನಿಶಾದ್ ಪಕ್ಷದೊಂದಿಗೆ ಕೈಜೋಡಿಸಿದೆ. ಈಗಾಗಲೇ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿವೆ. ಈ ಬಾರಿ ಬಿಜೆಪಿ ಹಾಗೂ ಎಸ್ಪಿ ನಡುವೆ ಪೈಪೋಟಿ ಜೋರಾಗಿದ್ದು ಉತ್ತರಪ್ರದೇಶ ಚುನಾವಣೆ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ. 1987 ರಿಂದ ಯುಪಿಯ ಯಾವುದೇ ಸಿಎಂ ಸತತ ಎರಡನೇ ಬಾರಿಗೆ ಗೆಲ್ಲಲು ಸಾಧ್ಯವಾಗದ ಕಾರಣ ಯೋಗಿ ಆದಿತ್ಯನಾಥ್ ಅವರಿಗೆ ಈ ಬಾರಿಯ ಚುನಾವಣೆ ಕಠಿಣ ಸವಾಲಾಗಿದೆ.