ಯುಪಿ ಚುನಾವಣೆಗೂ ಮುನ್ನ ಬಿಜೆಪಿ ಶಾಸಕನನ್ನು ಕ್ಷೇತ್ರದಿಂದ ಓಡಿಸಿದ ಗ್ರಾಮಸ್ಥರು
ಲಕ್ನೋ ಜನವರಿ 20: ಉತ್ತರ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಶಾಸಕರನ್ನು ಅವರ ಸ್ವಂತ ಕ್ಷೇತ್ರದ ಮುಜಾಫರ್ನಗರದ ಗ್ರಾಮಸ್ಥರು ಓಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿದೆ.
ಖತೌಲಿಯ ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ ಅವರು ಬುಧವಾರ ಗ್ರಾಮವೊಂದರಲ್ಲಿ ಸಭೆಗೆ ಆಗಮಿಸಿದ್ದರು. ಈ ವೇಳೆ ಅವರ ಮೇಲೆ ಕೋಪಗೊಂಡಿದ್ದ ನಿವಾಸಿಗಳು ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಶಾಸಕ ಕಕ್ಕಾಬಿಕ್ಕಿಯಾಗಿದ್ದಾರೆ. ನಂತರ ಕೈಮುಗಿದು ಕ್ಷಮೆಕೇಳಿ ಅಲ್ಲಿಂದ ಹೊರಟಿದ್ದಾರೆ. ವಿಡಿಯೊದಲ್ಲಿ ಗ್ರಾಮಸ್ಥರ ಗುಂಪು ಸೈನಿಯನ್ನು ಅವರ ಕಾರಿಗೆ ಹಿಂಬಾಲಿಸುವುದು ಮತ್ತು ಅವರು ಪ್ರವೇಶಿಸುತ್ತಿದ್ದಂತೆ ಅವರನ್ನು ಹಿಂಬಾಲಿಸುವುದು ಕಂಡುಬರುತ್ತದೆ.
ಗ್ರಾಮಸ್ಥರು ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗುವುದನ್ನು ಕೇಳಬಹುದು. ವಿಕ್ರಮ್ ಸಿಂಗ್ ಯಾವಾಗಲೈ ಉದ್ರೇಕಕಾರಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಕಳೆದ ವರ್ಷ ಒಂದು ವರ್ಷದ ಪ್ರತಿಭಟನೆಯ ನಂತರ ಸರ್ಕಾರವು ರದ್ದುಗೊಳಿಸಿದ ವಿವಾದಾತ್ಮಕ ಕೃಷಿ ಕಾನೂನುಗಳಿಗೆ ಅನೇಕರು ಅಸಮಾಧಾನವನ್ನು ಹೊಂದಿದ್ದಾರೆ. 2019 ರಲ್ಲಿ ಅವರು ಭಾರತದಲ್ಲಿ ಅಸುರಕ್ಷಿತ ಎಂದು ಭಾವಿಸುವವರಿಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದರು. ಅದಕ್ಕೂ ಒಂದು ವರ್ಷದ ಹಿಂದೆ, "ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಕರೆಯಲಾಗುತ್ತದೆ, ಅಂದರೆ ಹಿಂದೂಗಳ ರಾಷ್ಟ್ರ" ಎಂದು ಹೇಳಿದ್ದರು. ಗೋಹತ್ಯೆ ಮಾಡುವವರ ಕೈಕಾಲು ಮುರಿಯುವುದಾಗಿಯೂ ಬೆದರಿಕೆ ಹಾಕಿದ್ದರು.

ಪ್ರತಿಕ್ರಿಯೆಯಾಗಿ ಸೈನಿ ಅವರು ತಮ್ಮ ಸ್ವಂತ ಕ್ಷೇತ್ರವನ್ನು ತೊರೆಯುವಂತೆ ಬಲವಂತವಾಗಿ ಓಡಿಸಲಾಗಿದೆ. ಈ ವೇಳೆ ಸೈನಿ ತಮ್ಮ ಕೈಗಳನ್ನು ಮಡಚಿ ಕ್ಷಮೆ ಕೇಳಿದರು. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಮತದಾನ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
2019ರಲ್ಲಿ ದೇಶದಲ್ಲಿ ತಮಗೆ ಆಪತ್ತಿದೆ ಹಾಗೂ ತಾವು ಸುರಕ್ಷಿತರಲ್ಲ ಎನ್ನುವವರ ಮೇಲೆ ಬಾಂಬ್ ಹಾಕಬೇಕು ಎಂದು ಉತ್ತರಪ್ರದೇಶದ ಖತೌಲಿಯ ಬಿಜೆಪಿ ಶಾಸಕ ವಿಕ್ರಮ್ ಸೈನಿ ಹೇಳಿದ್ದರು. 'ದೇಶದಲ್ಲಿ ತಾವು ಸುರಕ್ಷಿತರಲ್ಲ ಎಂದು ಭಾವಿಸುವವರ ಮೇಲೆ ಬಾಂಬ್ ಹಾಕಬೇಕು ಎಂಬುದು ನನ್ ವೈಯಕ್ತಿಕ ಅಭಿಪ್ರಾಯ. ನನಗೊಂದು ಸಚಿವಸ್ಥಾನ ನೀಡಿ, ನಾನು ಅಂತಹವರ ಮೇಲೆ ಬಾಂಬ್ ಹಾಕುತ್ತೇನೆ. ಅವರು ಅಸುರಕ್ಷಿತರೆಂದು ಭಾವಿಸುವುದಿದ್ದರೆ, ಅವರಲ್ಲಿ ರಾಷ್ಟ್ರೀಯತೆಯ ಕೊರತೆ ಇದ್ದರೆ ಅವರು ಭಾರತವನ್ನು ಬಿಟ್ಟು ತೆರಳಬಹುದು. ತಾವು ಸುರಕ್ಷಿತರೆಂದು ಭಾವಿಸು ಯಾವುದೇ ದೇಶಕ್ಕೆ ಬೇಕಾದರೂ ಹೋಗಬಹುದು'ಎಂದು ಸೈನಿ ಹೇಳಿದ್ದಾರೆ.
#WATCH Muzaffarnagar(UP): BJP MLA Vikram Saini says 'I promised to break limbs of ppl who disrespect and kill cows' (25.3.17) pic.twitter.com/C8tXd2V2Kf
— ANI UP/Uttarakhand (@ANINewsUP) March 26, 2017
ವಿಕ್ರಮ್ ಸೈನಿ ವಿವಾದಿತ ಹೇಳಿಕೆಗಳು:
2018ರಲ್ಲಿ 'ಜನಸಂಖ್ಯಾ ನಿಯಂತ್ರಣಕ್ಕೆ ಸರಕಾರ ಕಾನೂನು ರೂಪಿಸುವವರೆಗೂ ನೀನು ಮಕ್ಕಳನ್ನು ಹಡೆಯುವುದನ್ನು ನಿಲ್ಲಿಸಬೇಡ, ಎಂದು ಪತ್ನಿಗೆ ಹೇಳಿದ್ದೇನೆ', ಎನ್ನುವುದರ ಮೂಲಕ ಖತೌಲಿಯ ಬಿಜೆಪಿ ಶಾಸಕ ವಿಕ್ರಮ್ ಸೈನಿ ವಿವಾದ ಸೃಷ್ಟಿಸಿದ್ದರು. ಮುಜಾಫರ್ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ನಮಗಿಬ್ಬರೇ ಮಕ್ಕಳು ಸಾಕು ಎನ್ನುತ್ತಾಳೆ ನನ್ನ ಪತ್ನಿ. ಆದರೆ ಜನಸಂಖ್ಯಾ ನಿಯಂತ್ರಣ ಕಾನೂನು ಅಸ್ತಿತ್ವಕ್ಕೆ ಬರುವವರೆಗೂ ಮಕ್ಕಳನ್ನು ಹಡೆಯುತ್ತಾ ಇರಲು ಹೇಳಿದ್ದೇನೆ ಎಂದಿದ್ದರು. ಸೈನಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕ್ರಿಶ್ಚಿಯನ್ನರನ್ನು ಸಂಬೋಧಿಸಿ ವಾಗ್ದಾಳಿ ನಡೆಸಿದ್ದ ಅವರು, ಹೊಸವರ್ಷಾಚರಣೆ ಕ್ರೈಸ್ತರ ಹಬ್ಬ, ಈ ಆಚರಣೆಯಿಂದ ಹಿಂದೂಗಳು ದೂರವಿರಿ ಎಂದು ಮನವಿ ಮಾಡಿದ್ದರು.
Recommended Video
2017 ರಲ್ಲಿ ಗೋಹತ್ಯೆ ಮಾಡುವವರ ಕೈ ಕಾಲುಗಳನ್ನು ಕತ್ತರಿಸಬೇಕು ಎಂದಿದ್ದರು. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಅಧಿಕಾರಕ್ಕೇರಿದ ನಂತರ ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಡುವೆಯೇ ಖತೌಲಿ ವಿಧಾನಸಭಾ ಕ್ಷೇತ್ರದ ಶಾಸಕ ವಿಕ್ರಂ ಗೋಹತ್ಯೆ ಮಾಡುವವರ ಕೈ ಕಾಲು ಕತ್ತರಿಸಿ ಎಂದು ಹೇಳಿದ್ದರು.












Click it and Unblock the Notifications