ಆರ್‌ಎಲ್‌ಡಿ ಕಡಿಮೆ ಜ್ಞಾನದ ಮಗು: ಅಖಿಲೇಶ್ ಮಿತ್ರನ ಬಗ್ಗೆ ಬಿಜೆಪಿ ಟೀಕೆ

ಲಕ್ನೋ, ಜನವರಿ 31: ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿಯವರನ್ನು ಓಲೈಸಲು ಬಿಜೆಪಿ ಮುಂದಾಗಿದೆ. ನಾನು 'ನಾಣ್ಯದಂತೆ ತಿರುಗುವುದಿಲ್ಲ' ಎಂದು ಹೇಳಿದ ಚೌಧರಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ 'ಇತಿಹಾಸದ ಬಗ್ಗೆ ಸ್ವಲ್ಪ ಜ್ಞಾನವಿಲ್ಲದ ಮಗು' ಎಂದಿದ್ದಾರೆ. ಜೊತೆಗೆ ಅವರ ತಂದೆ ದಿವಂಗತ ಅಜಿತ್ ಸಿಂಗ್ ಅವರು ಎಷ್ಟು ಬಾರಿ ಪಕ್ಷ ಬದಲಾಯಿಸಿದರು ಎಂಬುದನ್ನು ಅವರು ಮರೆತಿದ್ದಾರೆ ಎಂದು ಬಿಜೆಪಿಯ ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿ ಪ್ರಧಾನ್ ಹೇಳಿದರು.

ಡಾ.ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಖಾಂದಾರಿ ಕಾಂಪ್ಲೆಕ್ಸ್‌ನಲ್ಲಿರುವ ಜೆಪಿ ಸಭಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮವನ್ನು ಆಲಿಸಿದ ನಂತರ ಮಾತನಾಡಿದ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಕಳೆದ ಐದು ವರ್ಷಗಳಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಹೇಗೆ ಆಡಳಿತ ನಡೆಸಿದೆ ಎಂಬುದು ಉತ್ತರ ಪ್ರದೇಶದ ಜನರಿಗೆ ಚೆನ್ನಾಗಿ ತಿಳಿದಿದೆ ಎಂದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತವು ಗೂಂಡಾಗಳನ್ನು ಕಂಬಿ ಹಿಂದೆ ಹಾಕಿದೆ ಮತ್ತು ಮಹಿಳೆಯರ ಸುರಕ್ಷತೆಯನ್ನು ಕಾಪಾಡಿದೆ ಎಂದರು. ಬಿಜೆಪಿ ಮೇಲೆ ಜಾಟ್ ಸಮುದಾಯದಲ್ಲಿ ಕಂಡುಬರುತ್ತಿರುವ ಅಸಮಾಧಾನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನ್, "ನಾವು ಪ್ರತಿ ಸಮುದಾಯಕ್ಕೆ ಭೇಟಿ ನೀಡುತ್ತೇವೆ. ರಾಜ್ಯಾಧ್ಯಕ್ಷರು ಬಡ ಹಿರಿಯರಿಂದ ಆಶೀರ್ವಾದ ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಕೂಡ ಇದ್ದಾರೆ. ಮನೆ ಮನೆಗೆ ಪ್ರಚಾರ ನಡೆಸುತ್ತಿದ್ದಾರೆ. RLD ಪ್ರಭಾವವನ್ನು ಹೊಂದಿರುವ ಪಶ್ಚಿಮ ಉತ್ತರ ಪ್ರದೇಶದ ಬಹುತೇಕ ಎಲ್ಲಾ ಸ್ಥಾನಗಳಲ್ಲಿ ಜಾಟ್‌ಗಳ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

A Child With Very Little Knowledge: BJP on Akhilesh’s Ally
ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್ ಚೌಧರಿ ನೇತೃತ್ವದಲ್ಲಿ ಆರ್‌ಎಲ್‌ಡಿ ಈ ಬಾರಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಕೈಜೋಡಿಸಿದೆ.

ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನಕ್ಕೂ ಮುನ್ನ ಕೇಂದ್ರ ಸಚಿವ ಅಮಿತ್ ಶಾ ಬುಧವಾರ ಜಾಟ್ ನಾಯಕರನ್ನು ಸಂಪರ್ಕಿಸಿದರು. ಬಳಿಕ ಮಾತನಾಡಿದ ಅವರು ಜಯಂತ್ ಚೌಧರಿ ಅವರು ತಪ್ಪು ಮನೆ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು. ಮೂರು ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ನಡೆದ ರೈತರ ಆಂದೋಲನ ಸರ್ಕಾರದ ಭರವಸೆ ಮೂಲಕ ಹಿಂಪಡೆದುಕೊಂಡಿತು. ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಬಿಜೆಪಿ ಎಂದು ರೈತ ಸಂಘಟನೆಗಳು ದೂರಿವೆ. ಈ ವಿಚಾರ ಚುನಾವಣೆ ಮೇಲೂ ಪರಿಣಾಮ ಬೀರಲಿದೆ.

ಆರ್‌ಎಲ್‌ಡಿ ನಾಯಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. "ನೀವು ನಾಶಪಡಿಸಿದ +700 ರೈತ ಕುಟುಂಬಗಳನ್ನು ಆಹ್ವಾನಿಸಿ" ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. "ನಾಣ್ಯದಂತೆ ನಾವು ತಿರುಗಿಸುವುದಿಲ್ಲ" ಎಂದು ಚೌಧರಿ ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಪ್ರಧಾನ್ ಅವರು, RLD ಅಧ್ಯಕ್ಷರು "ಒಂದು ಮಗು" ಎಂದು ಹೇಳಿದರು. "ಅವರು ಈಗಷ್ಟೇ ಕ್ಷೇತ್ರಕ್ಕೆ ಬಂದಿದ್ದಾರೆ ಮತ್ತು ನೆಲದ ವಾಸ್ತವಗಳ ಬಗ್ಗೆ ತಿಳಿದಿಲ್ಲ. ಜಯಂತ್ (ಚೌಧರಿ) ಅವರಿಗೆ ಇತಿಹಾಸದ ಜ್ಞಾನ ಕಡಿಮೆ. ಅವರ ತಂದೆ ಎಷ್ಟು ಬಾರಿ ಪಕ್ಷ ಬದಲಾಯಿಸಿದ್ದಾರೆ ಎಂಬುದನ್ನು ಅವರು ಮರೆತಿದ್ದಾರೆ. ಜಯಂತ್ ಮೊದಲ ಬಾರಿಗೆ ಯಾವ ಮೈತ್ರಿಯಲ್ಲಿ ಗೆದ್ದಿದ್ದಾರೆ? ಮಗುವಿಗೆ ಇದು ತಿಳಿದಿರಬೇಕು" ಎಂದಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ತಮ್ಮ ಪಕ್ಷದ ಭವಿಷ್ಯದ ಬಗ್ಗೆ, ಪ್ರಧಾನ್ ಅವರು ಮಾತನಾಡಿ, "ಬಿಜೆಪಿ ಎಲ್ಲರಿಗೂ ಕೆಲಸ ಮಾಡುತ್ತದೆ ಮತ್ತು ವೋಟ್ ಬ್ಯಾಂಕ್ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅದು 'ಸಬ್ಕಾ ಸಾಥ್-ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಾಯಸ್' ಅನ್ನು ನಂಬುತ್ತದೆ. ನಾವು ಪ್ರತಿ ಸಮುದಾಯಕ್ಕೂ ಸೇವೆ ಸಲ್ಲಿಸಿದ್ದೇವೆ ಮತ್ತು ನಾವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆ ಎಂದು ನಾವು ನಂಬುತ್ತೇವೆ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+