ನನ್ನ ಹಣ ತಗೊಂಡು ಜೆಟ್ ಏರ್ವೇಸ್ ಉಳಿಸಿ: ಹೀಗೆಂದಿದ್ದು ವಿಜಯ್ ಮಲ್ಯ!
ಲಂಡನ್, ಮಾರ್ಚ್ 26: ನಿರ್ವಹಣೆ ವೆಚ್ಚ, ಸಿಬ್ಬಂದಿ ವೇತನ ಭರಿಸಲಾಗದೆ ಆರ್ಥಿಕ ಸಂಕಷ್ಟದಿಂದ ಮುಚ್ಚುವ ಹಂತಕ್ಕೆ ತಲುಪಿರುವ ಜೆಟ್ ಏರ್ವೇಸ್ ವಿಮಾನಯಾನ ಸಂಸ್ಥೆಯನ್ನು ಉಳಿಸಲು ದೊಡ್ಡ ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಉದ್ಯಮಿ ಬೇರಾರೂ ಅಲ್ಲ, ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಲಂಡನ್ನಲ್ಲಿ ಆಶ್ರಯ ಪಡೆದುಕೊಂಡಿರುವ ಆರೋಪದಡಿ 'ದೇಶ್ರಭ್ರಷ್ಟ ಆರ್ಥಿಕ ಅಪರಾಧಿ' ಎಂದು ಘೋಷಿತವಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ.
ಈ ಸಂಬಂಧ ಅವರು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ತಾವು ನೀಡುವ ಹಣವನ್ನು ಬಳಸಿಕೊಂಡು ಜೆಟ್ ಏರ್ಲೈನ್ಸ್ ಅನ್ನು ಉಳಿಸಿ ಎಂದಿದ್ದಾರೆ.
ಸಾಲದ ಸುಳಿಯಲ್ಲಿ ಸಿಲುಕಿದ್ದ ಕಿಂಗ್ ಫಿಶರ್ ವಿಮಾನಯಾನ ಸಂಸ್ಥೆಯನ್ನು ನಡೆಸಲು ಸಾಧ್ಯವಾಗದೆ ಸ್ಥಗಿತಗೊಳಿಸಿದ್ದ ವಿಜಯ್ ಮಲ್ಯ, ಎನ್ಡಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಎನ್ಡಿಎ ಸರ್ಕಾರ ಜೆಟ್ ಏರ್ ವೇಸ್ ಉಳಿಸಿಕೊಳ್ಳಲು ಸಾರ್ವಜನಿಕ ಬ್ಯಾಂಕುಗಳ ಮೂಲಕ ಪ್ರಯತ್ನಿಸುತ್ತಿದೆ. ಆದರೆ, ಇದೇ ಪ್ರಯತ್ನವನ್ನು ಕಿಂಗ್ಫಿಶರ್ಗೆ ಮಾಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ನನ್ನ ಆಸ್ತಿ ಮಾರಿ ಹಣ ಕೊಡುತ್ತೇನೆ ಎಂದರೂ ಬ್ಯಾಂಕುಗಳು ತೆಗೆದುಕೊಳ್ಳಲು ಸಿದ್ಧವಿಲ್ಲ. ಅದನ್ನಾದರೂ ಪಡೆದುಕೊಂಡು ಜೆಟ್ ಏರ್ವೇಸ್ ಉಳಿಸಲು ಬಳಸಿ ಎಂದು ಸಲಹೆ ನೀಡಿದ್ದಾರೆ.
ಲಂಡನ್ನಲ್ಲಿರುವ ವಿಜಯ್ ಮಲ್ಯ ಅವರು ಮಾಡಿರುವ ಸರಣಿ ಟ್ವೀಟ್ಗಳಲ್ಲಿ ಏನೇನಿದೆ? ನೋಡಿ..
|
ಕಿಂಗ್ ಫಿಶರ್ಗೂ ಮಾಡಿದ್ದರೆ...?
ಜೆಟ್ಏರ್ವೇಸ್ನ ಉದ್ಯೋಗ, ಸಂಪರ್ಕ ಮತ್ತು ಉದ್ಯಮವನ್ನು ಉಳಿಸಲು ಸಾರ್ವಜನಿಕ ಬ್ಯಾಂಕುಗಳು ಮುಂದಾಗಿರುವುದನ್ನು ಕಂಡು ಸಂತಸವಾಗುತ್ತಿದೆ. ಇದೇ ರೀತಿ ಕಿಂಗ್ಫಿಶರ್ಗೂ ಮಾಡಬೇಕಿತ್ತೆಂದು ಬಯಸುತ್ತೇನೆ.
|
ಯುಪಿಎಯಿಂದ ಎನ್ಡಿಎಗೆ ಏನು ಬದಲಾಗಿದೆ?
ನಾನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದ ಪತ್ರಗಳನ್ನು ಬಿಜೆಪಿ ವಕ್ತಾರರು ಸ್ಫುಟವಾಗಿ ಓದಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ಬ್ಯಾಂಕುಗಳು ಕಿಂಗ್ ಫಿಶರ್ ಏರ್ಲೈನ್ಸ್ಗೆ ಬೆಂಬಲ ನೀಡಿ ಪ್ರಮಾದ ಎಸಗಿದ್ದವು ಎಂದು ಆರೋಪಿಸಿದ್ದವು. ಹಾಲಿ ಪ್ರಧಾನಿಗೆ ನಾನು ಪತ್ರ ಬರೆದಿದ್ದಕ್ಕೆ ಮಾಧ್ಯಮಗಳು ನನ್ನನ್ನು ಬಲಿಪಶುವನ್ನಾಗಿ ಮಾಡಿದ್ದವು. ಈಗ ಎನ್ಡಿಎ ಸರ್ಕಾರದಡಿ ಏನು ಬದಲಾಗಿದೆ ಎಂದು ನನಗೆ ಅಚ್ಚರಿಯಾಗುತ್ತಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
|
ಎನ್ಡಿಎ ದ್ವಂದ್ವ ನೀತಿ
ಕಂಪೆನಿ ಮತ್ತು ಅದರ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕಿಂಗ್ಫಿಶರ್ ಮೇಲೆ ನಾನು 4,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದ್ದೆ. ಅದನ್ನು ಯಾರೂ ಗುರುತಿಸದೆ ಸಾಧ್ಯವಾದ ರೀತಿಯಲ್ಲೆಲ್ಲ ಟೀಕಿಸಲಾಯಿತು. ಇದೇ ಪಿಎಸ್ಯು ಬ್ಯಾಂಕುಗಳು ಭಾರತದ ಅತ್ಯುತ್ತಮ ಉದ್ಯೋಗಿಗಳು ಮತ್ತು ಸಂರ್ಪಕಸೇವೆಯ ವಿಮಾನಯಾನ ಸಂಸ್ಥೆಯು ಹೀನಾಯವಾಗಿ ನಷ್ಟಕ್ಕೆ ಸಿಲುಕಲು ಬಿಟ್ಟುಬಿಟ್ಟವು. ಎನ್ಡಿಎ ಸರ್ಕಾರದಡಿ ದ್ವಿಮುಖ ನೀತಿ ಅನುಸರಿಸಲಾಗಿದೆ ಎಂದು ಆರೋಪಿಸಿದ್ದಾರೆ.
|
ನನ್ನ ಹಣ ತೆಗೆದುಕೊಳ್ಳಿ
ಸಾರ್ವಜನಿಕ ಬ್ಯಾಂಕುಗಳು ಮತ್ತು ಇತರೆ ಸಾಲದಾತರಿಗೆ ಹಣ ಮರಳಿಸಲು ನನ್ನ ಸ್ಥಿರ ಆಸ್ತಿಗಳನ್ನು ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ಮುಂದೆ ಇರಿಸಿದ್ದೇನೆಂದು ಮತ್ತೆ ಪುನರಾವರ್ತಿಸುತ್ತಿದ್ದೇನೆ. ಬ್ಯಾಂಕುಗಳು ನನ್ನ ಹಣವನ್ನೇಕೆ ತೆಗೆದುಕೊಳ್ಳುತ್ತಿಲ್ಲ. ಏನಿಲ್ಲದಿದ್ದರೂ ಅದು ಜೆಟ್ ಎರ್ವೇಸ್ ಉಳಿಸಲು ಸಹಾಯಮಾಡುತ್ತದೆ ಎಂದಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications