ಈಶ್ವರಪ್ಪನಿಗೆ ಮನುಷ್ಯತ್ವ ಇಲ್ಲ:ಏಕವಚನದಲ್ಲೇ ವೆಂಕಟರಾವ್ ನಾಡಗೌಡ ವಾಗ್ದಾಳಿ
ಕೊಪ್ಪಳ, ಏಪ್ರಿಲ್ 03: ಚುನಾವಣೆ ಬಳಿಕ ಕುಮಾರಸ್ವಾಮಿ ನೆಗೆದು ಬೀಳ್ತಾರೆಂಬ ಈಶ್ವರಪ್ಪ ಹೇಳಿಕೆಗೆ ಕೊಪ್ಪಳದಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಸಚಿವ ವೆಂಕಟರಾವ್ ನಾಡಗೌಡ,
ಈಶ್ವರಪ್ಪನಿಗೆ ಮನುಷ್ಯತ್ವ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಶ್ವರಪ್ಪನವರದು ಎಲುಬಿಲ್ಲದ ನಾಲಿಗೆ, ಮನುಷ್ಯತ್ವ ಇಲ್ಲ, ಮಾನವೀಯತೆ ಇಲ್ಲ.ಅವ ಏನ್ ಮಾತಾಡ್ತಾನೆ ಅನ್ನೋದು ತನಗೆ ಗೊತ್ತಿರಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆತ ಮಾತಾಡ್ತಾನೆ ಅಂತ ನಾನು ಮಾತನಾಡುವುದಿಲ್ಲ ಎಂದ ನಾಡಗೌಡ ಅವರು, ಆತ ಇನ್ನು ನೂರು ಕಾಲ ಬಾಳಲಿ ಎಂದು ಆಶೀರ್ವಾದ ಮಾಡ್ತೀನಿ. ನಮ್ಮ ನಾಯಕ ನೆಗೆದು ಬೀಳಲಿ ಎಂದು ಮಾತಾಡ್ತಾನೆ. ಸಾವು ಯಾರನ್ನು ಬಿಟ್ಟಿಲ್ಲ, ಇಲ್ಲಿ ಗೂಟಾ ಹೊಡಕೊಂಡು ಯಾರೂ ಬದಕಾಗಲ್ಲ ಎಂದರು.

ಈಶ್ವರಪ್ಪ ನಾನು ಸಾಯಲ್ಲ ಎಂದು ತಿಳಿದುಕೊಂಡಿದ್ದಾನೆ.ಮಾತನಾಡುವಾಗ ಸ್ವಲ್ಪ ಎಚ್ಚರ ಇರಬೇಕು.ಆರೋಗ್ಯ ಸರಿ ಇದ್ದಾಗ ಇನ್ನು ಬದುಕಲಿ ಅನ್ನೋನು ಮನುಷ್ಯತ್ವ ಇರೋ ವ್ಯಕ್ತಿ ಎಂದು ವೆಂಕಟರಾವ್ ನಾಡಗೌಡ ತಿಳಿಸಿದರು.












Click it and Unblock the Notifications