ಬಿಜೆಪಿ ಗೆದ್ದರೂ ಯಡಿಯೂರಪ್ಪ ಸಿಎಂ ಆಗಲು ಕಾನೂನು ಅಡ್ಡಿ: ಭವಿಷ್ಯ
Recommended Video

ಕೊಪ್ಪಳ, ಏಪ್ರಿಲ್ 06: ಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ಜ್ಯೋತಿಷಿಗಳ ಮೊರೆ ಹೋಗುವುದು ಸಾಮಾನ್ಯ. ಜೆತೆಗೆ ದೇವಸ್ಥಾನಕ್ಕೆ ತೆರಳುವುದು, ದೇವರಲ್ಲಿ ಪ್ರಾರ್ಥಿಸುವುದು, ಹೋಮಗಳನ್ನು ಕೈಗೊಳ್ಳುವುದು ಸಾಮಾನ್ಯವಾಗಿದೆ.
ಹೀಗಿರುವಾಗ ಕೊಪ್ಪಳದ ಸ್ವಾಮೀಜಿಯೊಬ್ಬರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ. ಅವರ ಭವಿಷ್ಯದ ಕುರಿತು ರಾಜಕೀಯ ವಲಯದಲ್ಲಿ ಈಗಾಗಲೇ ಗುಸುಗುಸು ಪ್ರಾರಂಭವಾಗಿದೆ.
ಕೊಪ್ಪಳ ತಾಲೂಕಿಮ ಟಣಕಣಕಲ್ ಬಳಿಯ ಶರಣಬಸವ ಸ್ವಾಮೀಜಿ ಭವಿಷ್ಯ ನುಡಿದಿದ್ದುದಿದ್ದು, ಅವರ ಭವಿಷ್ಯದ ಪ್ರಕಾರ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ಅವರ ಭವಿಷ್ಯ ಅತಂತ್ರವಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಹಾಗೂ ಜೆಡಿಎಸ್ ನ ಕುಮಾರಸ್ವಾಮಿ ಅವರು ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಮುಖ್ಯಮಮತ್ರಿ ಆಗಲು ಅವರಿಗೆ ಕಾನೂನು ತೊಡಕು ಎದುರಾಗುತ್ತದೆ, ಹಾಗೂ ಜನಾರ್ಧನರೆಡ್ಡಿ ಅವರಿಗೆ ಇನ್ನೂ ನಾಲ್ಕೈದು ವರ್ಷ ಸಂಕಷ್ಟ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.












Click it and Unblock the Notifications