ಯೆಮನ್ ಪರದಾಟ: 15 ದಿನದಲ್ಲಿ ಕಂಡ ಕರಾಳ ಮುಖ
ಕೊಪ್ಪಳ, ಏ. 8: 'ಯೆಮನ್ ನಿಂದ ಜೀವಂತವಾಗಿ ಹಿಂದಕ್ಕೆ ಬರುತ್ತೇನೆ ಎಂಬ ಯಾವ ನಂಬಿಕೆಗಳು ನನಗಿರಲಿಲ್ಲ. ಭಾರತ ಸರ್ಕಾರ ಮತ್ತು ಸೇನೆಯ ಕಾರ್ಯವನ್ನು ನನ್ನ ಜೀವನದೂದ್ದಕ್ಕೂ ನೆನೆಯುತ್ತಿರಬೇಕಾಗಿದೆ' ಇದು ಯುದ್ಧ ಪೀಡಿತ ಯೆಮನ್ ನಿಂದ ಹಿಂದಿರುಗಿದ ಇಂಜಿನಿಯರ್ ಇಕ್ಬಾಲ್ ಬಾಷಾ ಅಬ್ದುಲ್ ಕುದ್ದುಸ್ ಅವರ ಮಾತು.
ಕೊಪ್ಪಳ ಮೂಲದ ಬಾಷಾ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು ಕಳೆದ 16 ವರ್ಷದಿಂದ ಏಡನ್ ನ ಕನ್ ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.[ಯೆಮನ್: ಭಾರತಕ್ಕೆ ಹಿಂದಿರುಗಿದ 349 ಜನ ಸಂತ್ರಸ್ತರು]

ಆಂತರಿಕ ಸಂಘರ್ಷದ ಪರಿಣಾಮ ಏಡನ್ ವಿಮಾನ ನಿಲ್ದಾಣ ಸಂಪೂರ್ಣವಾಗಿ ಹಾಳಾಗಿತ್ತು. ಭಾರತಕ್ಕೆ ಹಿಂದಿರುಗಬೇಕು ಎಂದರೆ 280 ಕಿಮೀ ದೂರದ ಜಿಬೌಟಿಗೆ ಬರಲೇಬೇಕಿತ್ತು. ಆದರೆ ಯಾವ ವಾಹನದ ವ್ಯವಸ್ಥೆ ಅಲ್ಲಿರಲಿಲ್ಲ. ಅಂತೂ ಇಂತೂ ಒಂದು ಬೋಟಿನ ನೆರವಿನಲ್ಲಿ ವಿಮಾನ ನಿಲ್ದಾಣ ತಲುಪಿ ಮುಂಬೈಗೆ ಬಂದಿಳಿದಾಗ ಹೋದ ಪ್ರಾಣ ವಾಪಸ್ ಬಂದ ಹಾಗೆ ಆಗಿತ್ತು ಎಂದು ಹೇಳುವಾಗ ಬಾಷಾ ನಮ್ಮ ದೇಶವೇ ಸುರಕ್ಷಿತ ಎನ್ನಲು ಮರೆಯಲ್ಲ.
ಕಳೆದ 15 ದಿನಗಳಲ್ಲಿ ಮಾನವನ ಕರಾಳ ಮುಖ ದರ್ಶನವಾಗಿದೆ. ನಾವು ಯುದ್ಧ ಪ್ರದೇಶದಿಂದ 5 ಕಿಮೀ ದೂರದಲ್ಲಿ ಇದ್ದುದರಿಂದ ಸಾವಿನಿಂದ ಬಚಾವಾಗಿದ್ದೇನೆ. ಹಲವು ದಿನ ಆಹಾರ ಮತ್ತು ನೀರು ಇಲ್ಲದೇ ಕಳೆದಿದ್ದೇನೆ ಎಂದು ಯೆಮನ್ ನಲ್ಲಿ ಕಳೆದ ಕೆಟ್ಟ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.[ಸಿಕ್ಕಿಕೊಂಡಿದ್ದ ಭಾರತೀಯರ ಕತೆ ಹೇಗಿತ್ತು?]
ಇನ್ನು ಮುಂದೆ ಬಾಷಾ ಭಾರತದಲ್ಲೇ ನೆಲೆಸಲು ತೀರ್ಮಾನಿಸಿದ್ದೇನೆ. ಹಣ ಗಳಿಸಲು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದು ಸರಿಯೇ? ಎಂದು ಅವರು ಪ್ರಶ್ನೆ ಮಾಡುತ್ತಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications