ಕೋಲ್ಕತ್ತಾ ಪೊಲೀಸರ ಶ್ವಾನದಳಕ್ಕೆ ದುರ್ಗಾ ಪೂಜೆಯಲ್ಲಿ ವಿಶೇಷ ಸ್ಥಾನ!
ಕೋಲ್ಕತ್ತಾ, ಸೆ. 26; ಕೋಲ್ಕತ್ತಾ ತುಂಬಾ ಈಗ ದುರ್ಗಾ ಪೂಜೆಯದ್ದೇ ಸದ್ದು, ಈಗ ಎಲ್ಲೆಲ್ಲೂ ದುರ್ಗಾ ದೇವಿಯ ದರ್ಶನವಾಗೋದು ವಿಶೇಷವೇ ಸರಿ. ಆದರೆ, ಈ ಬಾರಿ ಕೋಲ್ಕತ್ತಾ ಪೊಲೀಸರ ಶ್ವಾನದಳದ ನಾಲ್ವರ ತಂಡವು ರಾಜ್ಯದ ಪ್ರಥಮ ಸಾಕುಪ್ರಾಣಿ ಸ್ನೇಹಿ ದುರ್ಗಾ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದಾರೆ.
ಈ ವಿಶೇಷ ಪೆಂಡಾಲ್ನಲ್ಲಿ ದುರ್ಗಾ ಮಾತೆಯ ಮುಂದೆ ನಾಯಿಗಳು ಭಕ್ತಿಯಿಂದ ಕುಳಿತಿರುವ ಮೂರ್ತಿಗಳಿವೆ. ಈ ವಿಷಯದ ಹಲವಾರು ಚಿತ್ರಗಳನ್ನು ಪೊಲೀಸರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಒಂದು ಫೋಟೋದಲ್ಲಿ, ದುರ್ಗಾ ದೇವಿಯ ಪಾದದ ಬಳಿ ಎರಡು ನಾಯಿಗಳ ಪತ್ರಿಮೆಗಳನ್ನು ನಾವು ನೋಡಬಹುದು. ಇನ್ನೊಂದು ಚಿತ್ರದಲ್ಲಿ, ನಾಲ್ಕು ವಿಶೇಷ ಮುಖ್ಯ ಅತಿಥಿಗಳಾಗಿ ಎರಡು ಲ್ಯಾಬ್ರಡಾರ್ಗಳು ಮತ್ತು ಎರಡು ಜರ್ಮನ್ ಶೆಫರ್ಡ್ಗಳು ಫೋಟೋಗೆ ಫೋಸ್ ನೀಡಿವೆ.

ಪೆಂಡಾಲ್ನಲ್ಲಿ ಒಂದು ಕಲಾಕೃತಿಯಿದ್ದು, ಇದರಲ್ಲಿ ನಾಯಿಮರಿಗಳು ರಸ್ತೆಬದಿಯಲ್ಲಿ ಅಡ್ಡಾಡುತ್ತಿರುವಾಗ ಅಸುರನೊಬ್ಬ ಬೈಕಿನಲ್ಲಿ ವೇಗವಾಗಿ ಹೋಗುತ್ತಿರುವುದನ್ನು ಚಿತ್ರಿಸಲಾಗಿದೆ.
ಪೋಲೀಸರ ಪ್ರಕಾರ, ಸಾಕುಪ್ರಾಣಿ ಸ್ನೇಹಿ ದುರ್ಗಾಪೂಜಾ ಪೆಂಡಾಲ್ನಲ್ಲಿ ಬಿಧಾನ್ ಸರನಿ ಅಟ್ಲಾಸ್ ಕ್ಲಬ್ನವರು ಮಾಡಿದ್ದಾರೆ.ಇನ್ನು, ಕೊಲ್ಕತ್ತಾ ಪೊಲೀಸ್ ಶ್ವಾನದಳ ದುರ್ಗಾ ಪೂಜೆಯಲ್ಲಿ ಭಾಗವಹಿಸಿದ್ದು ಇದೇ ಮೊದಲು.

"ಮಹಾಲಯದ ಸಂಜೆ ನಮ್ಮ ಶ್ವಾನದಳದ ನಾಲ್ವರು ಸದಸ್ಯರಾದ, ಲ್ಯಾಬ್ರಡಾರ್ಸ್ ಮೋಲಿ ಮತ್ತು ಕ್ಯಾಂಪೋರ್ ಮತ್ತು ಜರ್ಮನ್ ಶೆಫರ್ಡ್ಸ್ ಲಿಜಾ ಮತ್ತು ಡಿಂಕಿ ಕೋಲ್ಕತ್ತಾದ ಮೊದಲ ಸಾಕುಪ್ರಾಣಿ ಸ್ನೇಹಿ ದುರ್ಗಾ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ" ಎಂದು ಕೋಲ್ಕತ್ತಾ ಪೊಲೀಸರ ಅಧಿಕೃತ ಸಂಅಝಿಕ ಜಾಲತಾಣ ಹ್ಯಾಂಡಲ್ಗಳಲ್ಲಿ ಪೋಟೋಗಳನ್ನು ಹಂಚಿಕೊಳ್ಳಲಾಗಿದೆ.
ನಮ್ಮ ಶ್ವಾನದಳವು ದುರ್ಗಾ ಪೂಜೆಯಲ್ಲಿ ಭಾಗವಹಿಸಿದ್ದು ಇದೇ ಮೊದಲು ಎಂದು ಕೋಲ್ಕತ್ತಾ ಪೊಲೀಸರು ಪೋಸ್ಟ್ನಲ್ಲಿ ಬರೆದಿದ್ದಾರೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಪ್ರಶಂಸೆ ಪಡೆದಿವೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications