ಬಿಜೆಪಿಯ ಕೀಳು ಸಂಸ್ಕೃತಿ ಬಿಂಬಿಸುವ ಬಿಎಸ್ ವೈ ಹೇಳಿಕೆ: ಡಿಕೆಶಿ ಟಾಂಗ್
ಬಂಗಾರಪೇಟೆ (ಕೋಲಾರ ಜಿಲ್ಲೆ), ಜನವರಿ 25 : ರಾಹುಲ್ ಗಾಂಧಿ ರಾಜ್ಯಕ್ಕೆ ಬರುವಾಗ ಕರ್ನಾಟಕ ಬಂದ್ ಮಾಡುವುದಾಗಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಬಿಜೆಪಿಯ ಕೀಳು ಮಟ್ಟದ ತತ್ವ, ಸಿದ್ಧಾಂತ ಹಾಗೂ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಲ್ಲಿ ಹೇಳಿದರು.
ಕೆಂಪೇಗೌಡ ಪ್ರತಿಮೆ ಅನಾವರಣ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದ ಅವರು, ಮಹಾದಾಯಿ ವಿಚಾರವಾಗಿ ಕರ್ನಾಟಕ ಬಂದ್ ಗೆ ಸರಕಾರದ ಬೆಂಬಲ ಇದೆ ಎಂಬ ಯಡಿಯೂರಪ್ಪ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿ, ವಿರೋಧ ಪಕ್ಷಗಳು ಈ ರೀತಿ ವಿರುದ್ಧ ಆರೋಪ ಮಾಡುವುದು ಸಹಜ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವಂಥ ಬಂದ್ ಗಳನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದರು.

ನಮ್ಮ ಆಡಳಿತದ ಮೇಲೆ ನಂಬಿಕೆ ಇದೆ. ಶಾಂತಿ ಕಾಪಾಡುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಕೇಂದ್ರ ಹಾಗೂ ಗೋವಾ ಸರಕಾರಗಳು ಅನ್ಯಾಯ ಮಾಡಿವೆ. ಈ ರೀತಿ ಅನ್ಯಾಯವಾದರೆ ರಾಜ್ಯದ ಜನತೆ ಪ್ರತಿಭಟಿಸುತ್ತಾರೆ. ಆದು ಅವರ ಹಕ್ಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
Recommended Video













Click it and Unblock the Notifications