ಕೋಲಾರ: 2 ಕೃಷ್ಣ ಮೃಗಗಳನ್ನು ಕೊಂದು ಸೆರೆ ಸಿಕ್ಕ ಮೂವರು
ಕೋಲಾರ: ಜನವರಿ 23: ಕೆಜಿಎಫ್ ನ ಬಡಮಾಕನಹಳ್ಳಿ ಕಾಡಿನಲ್ಲಿ 2 ಕೃಷ್ಣಮೃಗಗಳನ್ನು ಕೊಂದು ಸಾಗಿಸುತ್ತಿದ್ದ ಆರೋಪದ ಮೇರೆಗೆ ಮೂವರನ್ನು ಅರಣ್ಯ ಇಲಾಖೆ ಬಂಧಿಸಿದೆ.
ಬೆಂಗಳೂರಿನ ಮಹಮ್ಮದ್ ಜಬ್ರಾನ್, ಆತನ ಸಹಚರ ಸೆಲ್ವಂ ಮತ್ತು ಮಂಜುನಾಥ್ ಬಂಧಿತರು. ಭಾನುವಾರ ಬೆಳಗ್ಗೆ ಅಕ್ರಮವಾಗಿ ಕಾಡು ಪ್ರವೇಶಿಸಿದ ಇವರು ಸುಮಾರು 4-5 ವರ್ಷ ವಯಸ್ಸಿನ ಒಂದು ಗಂಡು ಮತ್ತು ಹೆಣ್ಣು ಕೃಷ್ಣ ಮೃಗವನ್ನು ಗುಂಡಿಕ್ಕಿ ಸಾಯಿಸಿದ್ದರು. ಅವುಗಳನ್ನು ಬೆಂಗಳೂರಿಗೆ ಸಾಗಿಸಲು ಪ್ರಯತ್ನಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಜಬ್ರಾನ್ ಕೃತ್ಯಕ್ಕೆ ಬಳಸಿದ ಪಾಯಿಂಟ್ 202 ರೈಫಲ್ಅನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.[ಅಕ್ರಮ ಶಸ್ತ್ರಾಸ್ತ್ರ ಕೇಸ್ : ನಟ ಸಲ್ಮಾನ್ ಖಾನ್ ನಿರ್ದೋಷಿ]
ಇನ್ನು ಜಬ್ರಾನ್ ಕಾಡಿನ ಸಮೀಪವೇ ತೋಟದ ಮನೆಯನ್ನು ಹೊಂದಿದ್ದು, ಬೆಂಗಳೂರಿನಿಂದ ಆಗಾಗ ಇಲ್ಲಿಗೆ ಬರುತ್ತಿದ್ದು ಕೃಷ್ಣ ಮೃಗಗಳ ಬಗ್ಗೆ ಮಾಹಿತಿ ಕಲೆಹಾಕಿದ್ದನು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.[ಕೃಷ್ಣಮೃಗ ಆತ್ಮಹತ್ಯೆ ಮಾಡ್ಕೊಂಡಿದ್ದು, ಅದ್ಕೆ ಸಲ್ಲೂ ಬಚಾವ್!]
ಆರೋಪಿಗಳ ವಿರುದ್ಧ ಕೆಜಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಈ ಮೂವರು ಆರೋಪಿಗಳು ಚಿಕ್ಕಮಗಳೂರು ಇತ್ಯಾದಿಗಳಲ್ಲಿ ಪ್ರಾಣಿಗಳ ಬೇಟೆಯಾಡುವ ತಂಡದೊಂದಿಗೆ ನಂಟಿದೆಯೇ ಎಂಬ ಶಂಕೆ ಅರಣ್ಯ ಇಲಾಖೆಯವರದ್ದಾಗಿದೆ.