ಮಳೆ, ಕೊರೆಯುವ ಚಳಿ: ಕೋಲಾರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಕೋಲಾರ, ಡಿಸೆಂಬರ್, 10: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪ್ರಭಾವ ರಾಜ್ಯದ ಮೇಲೂ ಬೀರಿದೆ. ಹಾಗೆಯೇ ಕೋಲಾರ ಜಿಲ್ಲೆಯಲ್ಲಿ ಸತತವಾಗಿ ಕಳೆದ ಎರಡು ದಿನಗಳಿಂದ ಜಿನುಗು ಮಳೆ ಹಾಗೂ ಶೀತ ಗಾಳಿ ಹೆಚ್ಚಾಗಿದೆ. ಇಂದು ಸಹ ಅತಿಯಾದ ಚಳಿ ದಾಖಲಾದ ಕಾರಣ ಮುಂಜಾಗ್ರತೆಗಾಗಿ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಜಿನುಗು ಮಳೆ ಹಾಗೂ ಕೊರೆಯುವ ಚಳಿ ವಾತಾವರಣ ಇದ್ದು, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರ ಅನುಮೋದನೆ ಪಡೆದು ಶಾಲೆಗಳಿಗೆ ರಜೆ ನೀಡಲು ಅನುಮತಿಸಲಾಗಿದೆ ಎಂದು ಕೋಲಾರ ಜಿಲ್ಲಾ ಡಿಡಿಪಿಐ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ. ಇನ್ನು ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಪ್ರಯಾಣ ಸಮಸ್ಯೆ ಉಂಟಾಗಿದೆ. ಹಾಗೂ ಜಿಲ್ಲೆಯ ಕೆಲ ಶಾಲಾ ಕಟ್ಟಡಗಳು ಶಿಥಿಲವಾಗಿದ್ದರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂದು ಶನಿವಾರ ಒಂದು ದಿನ ಮಟ್ಟಿಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಇನ್ನು ಮುಂದಿನ ದಿನಗಳಲ್ಲಿ ಮಳೆ ಹೀಗೆ ಮುಂದುವರೆದರೆ ರಜೆ ಮತ್ತೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇವರಮಳ್ಳೂರು: ಶ್ರೀಮಳ್ಳೂರಾಂಭ ದೇವಿಯ ಬ್ರಹ್ಮರಥೋತ್ಸವದ ವಿಶೇಷತೆ ಇಲ್ಲಿದೆ
ಮಾಂಡೌಸ್
ಚಂಡಮಾರುತದ
ಎಫೆಕ್ಟ್
ಬಂಗಾಳಕೊಲ್ಲಿಯಲ್ಲಿ
ಸೃಷ್ಟಿಯಾಗಿ
ಕರಾವಳಿ
ಪ್ರದೇಶದತ್ತ
ಸಾಗಿ
ಬಂದ
'ಮಾಂಡೌಸ್'
ಚಂಡಮಾರುತ
ತೀವ್ರತೆ
ಹೆಚ್ಚಾಗಿದೆ.
ಇದರಿಂದಾಗಿ
ಎರಡು
ದಿನ
ರಾಜ್ಯದಲ್ಲಿ
ಮಳೆ
ಆರ್ಭಟಿಸಲಿದ್ದು,
ಒಟ್ಟು
15ಜಿಲ್ಲೆಗಳಿಗೆ
'ಯೆಲ್ಲೋ
ಅಲರ್ಟ್'
ಘೊಷಿಸಲಾಗಿತ್ತು.
ಭಾರತೀಯ
ಹವಾಮಾನ
ಇಲಾಖೆ
ನೀಡಿರುವ
ಮುನ್ಸೂಚನೆ
ಪ್ರಕಾರ,
ಕರ್ನಾಟಕದ
ಮೇಲೆ
ಅದರಲ್ಲೂ
ಪ್ರಮುಖವಾಗಿ
ದಕ್ಷಿಣ
ಒಳನಾಡಿನ
ಜಿಲ್ಲೆಗಳಲ್ಲಿ
ಮೇಲೆ
'ಮಾಂಡೌಸ್'
ಪ್ರಭಾವ
ಹೆಚ್ಚಾಗಿರಲಿದೆ.
ಒಟ್ಟು
ಮುಂದಿನ
ಮೂರು
ದಿನಗಳ
ಪೈಕಿ
ಡಿಸೆಂಬರ್
11
ಮತ್ತು
12ರಂದು
ಗುಡುಗು
ಸಹಿತ
ಧಾರಾಕಾರವಾಗಿ
ಮಳೆ
ಅಬ್ಬರಿಸಲಿದೆ.
ಹೀಗಾಗಿ
ಎರಡು
ದಿನ
ಬೆಂಗಳೂರು
ನಗರ,
ಬೆಂಗಳೂರು
ಗ್ರಾಮಾಂತರ,
ಚಾಮರಾಜನಗರ,
ಚಿಕ್ಕಬಳ್ಳಾಪುರ,
ಚಿಕ್ಕಮಗಳೂರು,
ಕೋಲಾರ,
ಮಂಡ್ಯ,
ರಾಮನಗರ,
ತುಮಕೂರು
ಮತ್ತು
ಶಿವಮೊಗ್ಗ,
ಚಿತ್ರದುರ್ಗ,
ದಾವಣಗೆರೆ
ಸೇರಿ
ಒಟ್ಟು
15
ಜಿಲ್ಲೆಗಳಿಗೆ
'ಯೆಲ್ಲೋ
ಅಲರ್ಟ್'
ಘೋಷಿಸಲಾಗಿದೆ.
15
ಜಿಲ್ಲೆಗಳಲ್ಲಿ
ಮಳೆರಾಯನ
ಅಟ್ಟಹಾಸ
ಭಾರಿ
ಮಳೆ
ನಿಗದಿತ
ಈ
15ಜಿಲ್ಲೆಗಳಲ್ಲಿ
ಸರಿಸುಮಾರು
11.5
ಸೆಂಟಿ
ಮೀಟರ್ವರೆಗೆ
ಮಳೆ
ಬರುವ
ಮುನ್ಸೂಚನೆ
ಇದೆ.
ಈ
ಎರಡು
ದಿನ
ಹೊರತಾಗಿ
ಉಳಿದ
ದಿನಗಳಲ್ಲಿ
ಅಷ್ಟಾಗಿ
ಮಳೆ
ಆಗದೇ
ಹಗುರವಾಗಿ
ಬರಬಹುದು
ಎಂದು
ಎನ್ನಲಾಗಿದೆ.
ಶುಕ್ರವಾರ
ಕರಾವಳಿ
ಮತ್ತು
ಉತ್ತರ
ಒಳನಾಡಿನ
ಹಲವು
ಕಡೆಗಳಲ್ಲಿ
ಭಾನುವಾರದ
ವರೆಗೆ
ಹಗುರುವಾಗಿ
ಮಳೆ
ಬರಲಿದೆ.
ಎಲ್ಲಡೆ
ಚಳಿ
ಹಾಗೂ
ಮೋಡ
ಕವಿದ
ಮಬ್ಬು
ವಾತಾವರಣ
ನಿರ್ಮಾಣವಾಗಲಿದೆ.
ರಾಜ್ಯದ ಗರಿಷ್ಠ ತಾಪಮಾನ ಹೊನ್ನಾವರ ಮತ್ತು ಕಾರವಾರದಲ್ಲಿ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಮಂಗಳೂರಿನಲ್ಲಿ 32.3 ಡಿಗ್ರಿ ಸೆಲ್ಸಿಯಸ್ ಮತ್ತು ಮೈಸೂರಿನಲ್ಲಿ 30ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಇನ್ನೂ ರಾಜ್ಯದ ಕನಿಷ್ಠ ತಾಪಮಾನ 6.6ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.