ಕೆಜಿಎಫ್ ಶಾಸಕಿ ರೂಪಾ ಮತ್ತು ಬೆಂಬಲಿಗರ ಪ್ರತಿಭಟನೆಗೆ ಮಣಿದ ಚುನಾವಣಾಧಿಕಾರಿ
ಕೋಲಾರ, ಫೆಬ್ರವರಿ 9: ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಶ್ರೀನಿವಾಸಸಂದ್ರ ಗ್ರಾಮ ಪಂಚಾಯತಿಯಲ್ಲಿ ಹೈಡ್ರಾಮ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನಿಯಮ ಬಾಹಿರದ ಆರೋಪ ಕೇಳಿಬಂದಿದೆ.
ಕೆಜಿಎಫ್ ಶಾಸಕಿ ರೂಪಾ ಮತ್ತು ಬೆಂಬಲಿಗರ ಪ್ರತಿಭಟನೆಗೆ ಮಣಿದು ಚುನಾವಣಾಧಿಕಾರಿ ಫಲಿತಾಂಶ ಘೋಷಣೆ ತಡೆಹಿಡಿದಿದ್ದಾರೆ. ಒಟ್ಟು 19 ಮಂದಿ ಸದಸ್ಯರ ಬಲವಿದ್ದ ಶ್ರೀನಿವಾಸಸಂದ್ರ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷದ 10, ಬಿಜೆಪಿ 9 ಮಂದಿ ಸದಸ್ಯರ ಬಲಾಬಲವಿದೆ.

ಕೋಲಾರದ ಕೆಜಿಎಫ್ ನ ಬಿಜೆಪಿ ಮುಖಂಡರ ವಿರುದ್ಧ ಶಾಸಕಿ ರೂಪಾ ಆರೋಪಿಸಿದ್ದು, ಬಿಜೆಪಿ ಮುಖಂಡರ ವಿರುದ್ಧ ಅಧಿಕಾರಿಗಳ ದುರುಪಯೋಗ ಎಂದು ವಾಗ್ದಾಳಿ ನಡೆಸಿದ್ದಾರೆ. ನ್ಯಾಯ, ಧರ್ಮ ಮಾತ್ರ ಗೆಲ್ಲುತ್ತೆ ಎಂದು ಏರುಧ್ವನಿಯಲ್ಲಿ ಶಾಸಕಿ ಹೇಳಿದ್ದು, ಸದ್ಯಯ ಸ್ಥಳದಲ್ಲಿನ ಬಿಗುವಿನ ವಾತಾವರಣವನ್ನು ಪೊಲೀಸರು ತಿಳಿಗೊಳಿಸಿದ್ದಾರೆ.












Click it and Unblock the Notifications