ಉತ್ತರ ಕನ್ನಡ: ಹರಿಯುವ ಹಳ್ಳಗಳೇ ಹಳ್ಳಿಗರಿಗೆ ಕಂಟಕ
ಕಾರವಾರ, ಜೂನ್.24: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿವೆ. ಆದರೆ, ಈವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ಹಳ್ಳಿಗಳಿಗೆ ಹೊರ ಪ್ರಪಂಚದ ಸಂಪರ್ಕವೇ ಇಲ್ಲ. ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಬರಬೇಕೆಂದರೆ ಏನಾದರೊಂದು ಸಾಹಸ ಮಾಡಿಯೇ ತಲುಪುವ ಪರಿಸ್ಥಿತಿ ಈ ಹಳ್ಳಿಗರದ್ದು.
ಅಂಥ ಹಳ್ಳಿಗಳ ಸಾಲಿಗೆ ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳೂರು ಗ್ರಾಮದ ಹಿಣೆಬೈಲ್ ಹಾಗೂ ಬಿಚ್ಚಾಂಡೆ ಹಳ್ಳಿಗಳು ಕೂಡ ಸೇರುತ್ತವೆ.
ಜಿಲ್ಲಾ ಕೇಂದ್ರ ಕಾರವಾರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಈ ಎರಡು ಹಳ್ಳಿಗಳಲ್ಲಿ ಗುನಗಿ, ಗೌಡ ಹೀಗೆ ವಿವಿಧ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ. ಪಾಲಕರೆಲ್ಲರೂ ವಿದ್ಯೆ ಕಲಿಯದಿದ್ದರೂ ಮಕ್ಕಳಿಗೆ ಶಿಕ್ಷಣ ನೀಡುವ ಹಂಬಲ ಇಲ್ಲಿನವರದ್ದು.
ಆದರೆ, ಶಿಕ್ಷಣ ನೀಡುವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಇವರಿಗೆ ಈ ಹಳ್ಳಿಗಳಲ್ಲಿ ಹರಿಯುವ ಹಳ್ಳಗಳೇ ಕಂಟಕವಾಗಿದೆ...

ಸಾಹಸ ಮಾಡಿ ಹಳ್ಳ ದಾಟುವ ಜನರು
ಹಿಣೆಬೈಲ್ ಹಾಗೂ ಶಿರ್ಲೆಗದ್ದೆ ನಡುವೆ ಹಿಣೆಬೈಲ್ ಹಳ್ಳವೊಂದಿದೆ. ಇದು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಈ ಸಂದರ್ಭದಲ್ಲಿ ಹಳ್ಳದಲ್ಲಿ ನಡೆದು ಆಚೆ ತಲುಪುವುದು ಅಪಾಯಕಾರಿಯಾಗಿದೆ. ನೀರಿನ ಹರಿವು ಕಡಿಮೆಯಾದ ಮೇಲಷ್ಟೇ ಹಳ್ಳವನ್ನು ದಾಟಬಹುದಾಗಿದೆ. ಆದರೆ, ಸಾಹಸ ಮಾಡಿ ಇಲ್ಲಿನ ಜನರು ಈ ಹಳ್ಳವನ್ನು ದಾಟುತ್ತಾರೆ. ದಾಟಲೇಬೇಕು ಕೂಡ.

ಮಳೆಯಾದರೆ ಮಕ್ಕಳಿಗೆ ರಜೆ
ಮಕ್ಕಳಿಗೆ ಶಿಕ್ಷಣ ನೀಡಲು ಈ ಸಾಹಸ ಅನಿವಾರ್ಯವಾಗಿದೆ. ಹಳ್ಳದಾಚೆಯಲ್ಲಿ ಅಂಗನವಾಡಿ ಕೇಂದ್ರ ಇರುವುದರಿಂದ ಹಿಣೆಬೈಲ್ ನ ಮಕ್ಕಳು ಈ ಹಳ್ಳ ದಾಟಿಯೇ ಆ ಕಡೆ ತೆರಳಬೇಕು. ಆದರೆ, ಚಿಕ್ಕ ಚಿಕ್ಕ ಮಕ್ಕಳಿರುವುದರಿಂದ ನೀರಿನಲ್ಲಿ ಕೊಚ್ಚಿ ಹೋಗುವ ಭಯ ಅವರ ಪಾಲಕರಲ್ಲಿದೆ.
ಹೀಗಾಗಿ ಪಾಲಕರೇ ಮಕ್ಕಳನ್ನ ಎತ್ತಿಕೊಂಡು ಹಳ್ಳದಾಚೆ ಬಿಟ್ಟು ಬರುವ ಪರಿಸ್ಥಿತಿ ಇದೆ. ಅಚಾನಕ್ ಆಗಿ ಭಾರೀ ಮಳೆಯಾದರೆ ಅಂದು ಈ ಮಕ್ಕಳಿಗೆ ರಜೆ!

ನಡಿಗೆಯಲ್ಲೇ ಸಾಗುವ ಮಕ್ಕಳು
ಇಲ್ಲಿಗೆ ಸಂಪರ್ಕ ಕಲ್ಪಿಸಲು ಕಿರು ಸೇತುವೆಯೊಂದನ್ನು ಅಥವಾ ಕಾಲು ಸಂಕವನ್ನಾದರು ನಿರ್ಮಿಸಿಕೊಡಬೇಕು ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ. ಬಿಚ್ಚಂಡೆ ಹಳ್ಳಿಯದ್ದೂ ಇದೇ ಪರಿಸ್ಥಿತಿ. ಇಲ್ಲಿನ ಬಿಚ್ಚಾಂಡೆ ಹಳ್ಳ ದಾಟಿ ಬಿಚ್ಚಾಂಡೆ ಗ್ರಾಮದ ಮಕ್ಕಳು ಹೈಸ್ಕೂಲಿಗೆ ತೆರಳಬೇಕು.
ಹೀಗಾಗಿ, ಶಾಲೆಯಲ್ಲಿ ಕೊಟ್ಟ ಸೈಕಲ್ ಅನ್ನು ಒಯ್ಯಲಾಗದೇ ಹಳ್ಳದ ಬದಿಯೇ ನಿಲ್ಲಿಸಿಟ್ಟು ನಡಿಗೆಯಲ್ಲೇ ಈ ಮಕ್ಕಳು ಸಾಗುತ್ತಾರೆ.

ಇದೊಂದೇ ಗ್ರಾಮಸ್ಥರ ಆಗ್ರಹ
ಒಟ್ಟಾರೆ ಈ ಹಳ್ಳಿಗಳಿಗೆ ಇನ್ನೊಂದು ಕಡೆ ಸಂಪರ್ಕ ಕಲ್ಪಿಸಲು, ಮಳೆಗಾಲದ ಸಂದರ್ಭ ಅಪಾಯ ಏನಾದರು ಉಂಟಾದಲ್ಲಿ ತುರ್ತು ಕ್ರಮಕ್ಕೆ ಸಹಕಾರಿಯಾಗುವಂತೆ ಕಾಲು ಸಂಕವನ್ನಾದರು ನಿರ್ಮಿಸಿಕೊಡಲು ಜಿಲ್ಲಾಡಳಿತ ಮುಂದಾಗಬೇಕು ಎನ್ನುವುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.
-
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
ಸರ್ಕಾರಿ PU ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಬರೋಬ್ಬರಿ 9,383 ರೂ. ಲಕ್ಷ ಅನುದಾನ ಮಂಜೂರು -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications