ಉತ್ತರ ಕನ್ನಡ: ಹರಿಯುವ ಹಳ್ಳಗಳೇ ಹಳ್ಳಿಗರಿಗೆ ಕಂಟಕ
ಕಾರವಾರ, ಜೂನ್.24: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿವೆ. ಆದರೆ, ಈವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ಹಳ್ಳಿಗಳಿಗೆ ಹೊರ ಪ್ರಪಂಚದ ಸಂಪರ್ಕವೇ ಇಲ್ಲ. ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಬರಬೇಕೆಂದರೆ ಏನಾದರೊಂದು ಸಾಹಸ ಮಾಡಿಯೇ ತಲುಪುವ ಪರಿಸ್ಥಿತಿ ಈ ಹಳ್ಳಿಗರದ್ದು.
ಅಂಥ ಹಳ್ಳಿಗಳ ಸಾಲಿಗೆ ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳೂರು ಗ್ರಾಮದ ಹಿಣೆಬೈಲ್ ಹಾಗೂ ಬಿಚ್ಚಾಂಡೆ ಹಳ್ಳಿಗಳು ಕೂಡ ಸೇರುತ್ತವೆ.
ಜಿಲ್ಲಾ ಕೇಂದ್ರ ಕಾರವಾರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಈ ಎರಡು ಹಳ್ಳಿಗಳಲ್ಲಿ ಗುನಗಿ, ಗೌಡ ಹೀಗೆ ವಿವಿಧ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ. ಪಾಲಕರೆಲ್ಲರೂ ವಿದ್ಯೆ ಕಲಿಯದಿದ್ದರೂ ಮಕ್ಕಳಿಗೆ ಶಿಕ್ಷಣ ನೀಡುವ ಹಂಬಲ ಇಲ್ಲಿನವರದ್ದು.
ಆದರೆ, ಶಿಕ್ಷಣ ನೀಡುವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಇವರಿಗೆ ಈ ಹಳ್ಳಿಗಳಲ್ಲಿ ಹರಿಯುವ ಹಳ್ಳಗಳೇ ಕಂಟಕವಾಗಿದೆ...

ಸಾಹಸ ಮಾಡಿ ಹಳ್ಳ ದಾಟುವ ಜನರು
ಹಿಣೆಬೈಲ್ ಹಾಗೂ ಶಿರ್ಲೆಗದ್ದೆ ನಡುವೆ ಹಿಣೆಬೈಲ್ ಹಳ್ಳವೊಂದಿದೆ. ಇದು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಈ ಸಂದರ್ಭದಲ್ಲಿ ಹಳ್ಳದಲ್ಲಿ ನಡೆದು ಆಚೆ ತಲುಪುವುದು ಅಪಾಯಕಾರಿಯಾಗಿದೆ. ನೀರಿನ ಹರಿವು ಕಡಿಮೆಯಾದ ಮೇಲಷ್ಟೇ ಹಳ್ಳವನ್ನು ದಾಟಬಹುದಾಗಿದೆ. ಆದರೆ, ಸಾಹಸ ಮಾಡಿ ಇಲ್ಲಿನ ಜನರು ಈ ಹಳ್ಳವನ್ನು ದಾಟುತ್ತಾರೆ. ದಾಟಲೇಬೇಕು ಕೂಡ.

ಮಳೆಯಾದರೆ ಮಕ್ಕಳಿಗೆ ರಜೆ
ಮಕ್ಕಳಿಗೆ ಶಿಕ್ಷಣ ನೀಡಲು ಈ ಸಾಹಸ ಅನಿವಾರ್ಯವಾಗಿದೆ. ಹಳ್ಳದಾಚೆಯಲ್ಲಿ ಅಂಗನವಾಡಿ ಕೇಂದ್ರ ಇರುವುದರಿಂದ ಹಿಣೆಬೈಲ್ ನ ಮಕ್ಕಳು ಈ ಹಳ್ಳ ದಾಟಿಯೇ ಆ ಕಡೆ ತೆರಳಬೇಕು. ಆದರೆ, ಚಿಕ್ಕ ಚಿಕ್ಕ ಮಕ್ಕಳಿರುವುದರಿಂದ ನೀರಿನಲ್ಲಿ ಕೊಚ್ಚಿ ಹೋಗುವ ಭಯ ಅವರ ಪಾಲಕರಲ್ಲಿದೆ.
ಹೀಗಾಗಿ ಪಾಲಕರೇ ಮಕ್ಕಳನ್ನ ಎತ್ತಿಕೊಂಡು ಹಳ್ಳದಾಚೆ ಬಿಟ್ಟು ಬರುವ ಪರಿಸ್ಥಿತಿ ಇದೆ. ಅಚಾನಕ್ ಆಗಿ ಭಾರೀ ಮಳೆಯಾದರೆ ಅಂದು ಈ ಮಕ್ಕಳಿಗೆ ರಜೆ!

ನಡಿಗೆಯಲ್ಲೇ ಸಾಗುವ ಮಕ್ಕಳು
ಇಲ್ಲಿಗೆ ಸಂಪರ್ಕ ಕಲ್ಪಿಸಲು ಕಿರು ಸೇತುವೆಯೊಂದನ್ನು ಅಥವಾ ಕಾಲು ಸಂಕವನ್ನಾದರು ನಿರ್ಮಿಸಿಕೊಡಬೇಕು ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ. ಬಿಚ್ಚಂಡೆ ಹಳ್ಳಿಯದ್ದೂ ಇದೇ ಪರಿಸ್ಥಿತಿ. ಇಲ್ಲಿನ ಬಿಚ್ಚಾಂಡೆ ಹಳ್ಳ ದಾಟಿ ಬಿಚ್ಚಾಂಡೆ ಗ್ರಾಮದ ಮಕ್ಕಳು ಹೈಸ್ಕೂಲಿಗೆ ತೆರಳಬೇಕು.
ಹೀಗಾಗಿ, ಶಾಲೆಯಲ್ಲಿ ಕೊಟ್ಟ ಸೈಕಲ್ ಅನ್ನು ಒಯ್ಯಲಾಗದೇ ಹಳ್ಳದ ಬದಿಯೇ ನಿಲ್ಲಿಸಿಟ್ಟು ನಡಿಗೆಯಲ್ಲೇ ಈ ಮಕ್ಕಳು ಸಾಗುತ್ತಾರೆ.

ಇದೊಂದೇ ಗ್ರಾಮಸ್ಥರ ಆಗ್ರಹ
ಒಟ್ಟಾರೆ ಈ ಹಳ್ಳಿಗಳಿಗೆ ಇನ್ನೊಂದು ಕಡೆ ಸಂಪರ್ಕ ಕಲ್ಪಿಸಲು, ಮಳೆಗಾಲದ ಸಂದರ್ಭ ಅಪಾಯ ಏನಾದರು ಉಂಟಾದಲ್ಲಿ ತುರ್ತು ಕ್ರಮಕ್ಕೆ ಸಹಕಾರಿಯಾಗುವಂತೆ ಕಾಲು ಸಂಕವನ್ನಾದರು ನಿರ್ಮಿಸಿಕೊಡಲು ಜಿಲ್ಲಾಡಳಿತ ಮುಂದಾಗಬೇಕು ಎನ್ನುವುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
CBSE 10ನೇ ತರಗತಿ ಫಲಿತಾಂಶ 2026: ನಾಳೆ ಪ್ರಕಟಗೊಳ್ಳಲಿದೆಯೇ ರಿಸಲ್ಟ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್












Click it and Unblock the Notifications