ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮಿತ್ ಶಾ ಭೇಟಿಗಾಗಿ ಗೋಕರ್ಣದಲ್ಲಿ ಅಂಗಡಿ ತೆರವು

|
Google Oneindia Kannada News

ಕಾರವಾರ, ಫೆ.21: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು (ಫೆ.21) ಉಡುಪಿ ಹಾಗೂ ಕುಮಟಾಕ್ಕೆ ಭೇಟಿ ನೀಡಲಿದ್ದಾರೆ.

ಉಡುಪಿಯಲ್ಲಿ ಸಾಮಾಜಿಕ ಜಾಲತಾಣದ ಕಾರ್ಯಕರ್ತರ ಸಮಾವೇಶ, ಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಶಕ್ತಿ ಕೇಂದ್ರದ ಉಸ್ತುವಾರಿಗಳ ಸಮಾವೇಶವನ್ನು ನಡೆಸಲಿದ್ದಾರೆ.

ಅಲ್ಲಿಂದ ಅವರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಭಟ್ಕಳ, ಕುಮಟಾ, ಕಾರವಾರ ವಿಧಾನಸಭಾ ಕ್ಷೇತ್ರಗಳ ಒಂಭತ್ತು ಬೂತ್ ಮಟ್ಟದ ಕಾರ್ಯಕರ್ತರ ನವಶಕ್ತಿ ಸಮಾವೇಶವನ್ನು ಕುಮಟಾದ ಕೊಂಕಣ ಎಜುಕೇಷನಲ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದೆ.

Shop removed at Gokarna ahead of Amit Shah visit

ಜಾತ್ರೆ ಮಳಿಗೆಗಳ ತೆರವು

ಅಮಿತ್ ಷಾ ಅವರು ಹೊನ್ನಾವರದ ಮೃತ ಪರೇಶ್ ಮೇಸ್ತನ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ ಹಾಗೂ ಗೋಕರ್ಣ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಗೋಕರ್ಣ ಭೇಟಿ ಹಿನ್ನಲೆಯಲ್ಲಿ ಇಲ್ಲಿ ನಡೆಯುತ್ತಿದ್ದ ಜಾತ್ರೆಗಾಗಿ ಹಾಕಿದ್ದ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಲು ಉತ್ತರಕನ್ನಡ ಜಿಲ್ಲಾಡಳಿತ ಆದೇಶಿಸಿದೆ.

Shop removed at Gokarna ahead of Amit Shah visit

ಮೇಲಿನ ಕೇರಿಯಿಂದ ರಥಬೀದಿ ಮಾರ್ಗವಾಗಿ ಮುಖ್ಯ ದೇವಸ್ಥಾನದವರೆಗಿನ ಇಕ್ಕೆಲಗಳಲ್ಲಿ ಅಳವಡಿಸಿರುವ ಅಂಗಡಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಆದೇಶಿಸಿರುವುದರಿಂದ ಜಾತ್ರೆಯ ಪೇಟೆ ಅಸ್ತವ್ಯಸ್ತಗೊಂಡು, ಅಂಗಡಿಕಾರರ ಅಸಮಧಾನಕ್ಕೆ ಕಾರಣವಾಗಿದೆ.

ಅಮಿತ್ ಶಾ ಉನ್ನತ ಭದ್ರತೆ ಹೊಂದಿರುವ ವ್ಯಕ್ತಿಯಾಗಿದ್ದು, ಭದ್ರತಾ ನಿಯಮ ಪಾಲಿಸುವುದು ಅಗತ್ಯ. ಹೀಗಾಗಿ ಅವರು ಹೋದ ಬಳಿಕ ಅಂಗಡಿಗಳನ್ನು ಇಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
BJP national president Amit Shah will be visiting Udupi and Kumata today (Feb 21). Amit Shah will visit Gokarna temple. Ahead of his visit Uttara Kannada district administration ordered to clear temporary shops built for the fair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X