ಯಾವುದೇ ಪಕ್ಷಕ್ಕೆ ಹೋದರೂ ಯಾವ ಜಾತಿ, ಎಷ್ಟು ದುಡ್ಡು ತರುತ್ತಿಯಾ ಎಂದು ಕೇಳುತ್ತಾರೆ: ಹೊರಟ್ಟಿ
ಕಾರವಾರ, ಜೂನ್ 6: ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಜಾತಿ ಇದೆ. ಯಾವುದೇ ಪಕ್ಷಕ್ಕೆ ಹೋದರೂ ನಿಂದು ಯಾವ ಜಾತಿ, ಎಷ್ಟು ದುಡ್ಡು ತರುತ್ತಿಯಾ ಇದನ್ನೇ ಕೇಳುತ್ತಾರೆ ಎಂದು ಪಶ್ಚಿಮ ಪಧವೀದರ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಹೇಳಿದರು.
ಕಾರವಾರದಲ್ಲಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾವ ರಾಜಕೀಯ ಪಕ್ಷಗಳು ಜಾತಿ ಬಿಟ್ಟಿಲ್ಲ. ಕೆಲವೊಬ್ಬರು ಕೋಮುವಾದಿ ಪಕ್ಷ ಎಂದು ಕರೆಯುತ್ತಾರೆ. ಆದರೆ ಎಲ್ಲಾ ಪಕ್ಷಗಳು ಜಾತಿ ಮಾಡುತ್ತವೆ ಎಂದ ಅವರು, 42 ವರ್ಷಗಳಿಂದ ಏನು ಕೆಲಸ ಮಾಡಲಿಲ್ಲ. ಶಿಕ್ಷಕರಿಗೆ ಹೆದರಿದಿ ಆರಿಸಿ ಬರುತ್ತಿದ್ದಾರೆ ಎಂದು ನನ್ನ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಶಿಕ್ಷಕರನ್ನ ಯಾರಾದರೀ ಹೆದರಿಸಿ ಆರಸಿ ಬರುವುದಕ್ಕೆ ಆಗುತ್ತಾ? ಸುಮ್ಮನೆ ಟೀಕೆ ಮಾಡಬೇಕು ಎಂದು ಟೀಕೆ ಮಾಡುತ್ತಾರೆ ಅಷ್ಟೇ. ಎಥಿಕ್ಸ್ ಇಲ್ಲದೆ ಟೀಕೆ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಪಕ್ಷದ ದೊಡ್ಡ ದೊಡ್ಡ ನಾಯಕರು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆದರು. ಆಕಸ್ಮಿಕವಾಗಿ ಬಿಜೆಪಿಗೆ ಬಂದೆ. ಬೆಂಬಲಿಗರು, ಯುವ ಶಿಕ್ಷಕರು ಬಿಜೆಪಿಯಿಂದ ನಿಲ್ಲಿ ಎಂದು ಒತ್ತಾಯ ಮಾಡುತ್ತಿದ್ದರು, ಹೀಗಾಗಿ ಬಂದೆ. ಜೆಡಿಎಸ್ ನಲ್ಲಿದ್ದವರನ್ನು ನಾನು ಕರ್ಕೊಂಡು ಬಿಜೆಪಿಗೆ ಹೋದರೆ ಪಕ್ಷವನ್ನ ಮುಗಿಸಿದಂತಾಗುತ್ತದೆ. ಹೀಗಾಗಿ ನಾನು ಆ ಕೆಲಸಕ್ಕೆ ಹೋಗಿಲ್ಲ. ಬರುತ್ತೇವೆ ಎಂದವರಿಗೆ ಬೇಡ ಎಂದಿದ್ದೇನೆ ಎಂದು ಕೆಲ ಜೆಡಿಎಸ್ ನಾಯಕರುಗಳ ಬಿಜೆಪಿ ಸೇರ್ಪಡೆ ವಿಚಾರದ ಸಂಬಂಧ ಸ್ಪಷ್ಟಪಡಿಸಿದರು.
ಪಠ್ಯ ಪರಿಷ್ಕರಣೆಯಲ್ಲಿ ಎಲ್ಲಾ ಪಕ್ಷಗಳಿಂದ ರಾಜಕೀಯ
ಪಠ್ಯ ಪರಿಷ್ಕರಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಮಾಡಿವೆ. ಸಮಾಜಕ್ಕೆ, ಮಕ್ಕಳಿಗೆ, ದೇಶಕ್ಕೆ ಒಳ್ಳೆಯದು ಆಗತ್ತೆ ಅನ್ನೋದಿದ್ದರೆ ಪರಿಷ್ಕರಣೆ ಮಾಡಲಿ, ಅದರಲ್ಲಿ ತಪ್ಪೇನಿದೆ. ಆದರೆ ಅದರಲ್ಲಿ ರಾಜಕೀಯ ಮಾಡಬಾರದು. ಸಾವಿತ್ರಿಬಾಯಿ ಫುಲೆ ಅವರ ಪಠ್ಯವನ್ನು ತೆಗೆದಿದ್ದು ತಪ್ಪು, ನಾನು ಇದನ್ನು ಒಪ್ಪುವುದಿಲ್ಲ. ಮಹಿಳಾ ಶಿಕ್ಷಣದಲ್ಲಿ ಅವರ ಕೊಡುಗೆ ಅಪಾರವಿದೆ. ಭಗತ್ ಸಿಂಗ್, ಸಾವಿತ್ರಿಬಾಯಿ ಫುಲೆ ಅವರ ಪಠ್ಯ ತೆಗೆದದ್ದು ತಪ್ಪು, ನಾನು ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪುನರುಚ್ಚರಿಸಿದರು.

ಹೆಡ್ಗೆವಾರ್ ಪಠ್ಯ ಸೇರಿಸಿರುವುದು ತಪ್ಪಲ್ಲ
ಹೆಡ್ಗೆವಾರ್ ಪಠ್ಯವನ್ನು ಸೇರಿಸಿರುವುದನ್ನು ನಾನು ತಪ್ಪು ಎನ್ನಲಾರೆ. ಅದರಲ್ಲಿ ತಪ್ಪೇನಿದೆ? ಒಳ್ಳೆ ಉದ್ದೇಶದಿಂದ ಮಾಡಿದ ಕೆಲಸಗಳು ಯಾವುದೇ ಕಾರಣಕ್ಕೂ ತಪ್ಪಲ್ಲ ಎಂದ ಅವರು, ಯಾವ ಅಧಿಕಾರಿಗಳೂ ಶಿಸ್ತಾಗಿ ಕ್ರಮ ಕೈಗೊಳ್ಳದಿದ್ದರಿಂದ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಬಂದಾಗ ಯಾವ ಮಂತ್ರಿ ಬರುತ್ತಾರೋ ಅವರಿಗೆ ಬೇಕಾಗಿದ್ದನ್ನ ಪಠ್ಯದಲ್ಲಿ ತರುತ್ತಾರೆ. ರಾಜಕಾರಣಿಗಳು ಇದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು.
ಪಕ್ಷದಲ್ಲಿ ನಿಮ್ಮ ಸ್ಪರ್ಧೆಗೆ ವಿರೋಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ಬಿಜೆಪಿ ಸೇರುವುದಕ್ಕೆ ನಡೆದಿರುವ ಬೆಳವಣಿಗೆಗೂ ನನಗೂ ಸಂಬಂಧವಿಲ್ಲ. ಜೊತೆಗೆ ಆ ಸಂದರ್ಭದಲ್ಲಿ ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ನಾನು ಪಕ್ಷ ಸೇರಿದಾಗ, ನೀವು ಮುಂಚೆಯೇ ಬಂದಿದರೆ ಚೆನ್ನಾಗಿತ್ತು ಎಂದು ಆ ಪಕ್ಷದ ನಾಯಕರು ಸ್ವಾಗತಿಸಿದ್ದರು.
(ಒನ್ಇಂಡಿಯಾ ಸುದ್ದಿ)
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು?












Click it and Unblock the Notifications