ಪಿಎಂ ಜೊತೆ ಸಭೆ ನಿಗದಿ; ಸಿಎಂ ಕಾರವಾರ ಭೇಟಿ ಮುಂದೂಡಿಕೆ
ಕಾರವಾರ, ಜುಲೈ 14: ಕೋವಿಡ್ ನಿಯಂತ್ರಣಕ್ಕೆ ಬಾರದ 6 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಭೆ ನಡೆಸಲಿರುವ ಕಾರಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕಾರವಾರ ಭೇಟಿ ಕಾರ್ಯಕ್ರಮ ಮುಂದೂಡಿಕೆಯಾಗಿದೆ.
ಜುಲೈ 16ರಂದು ಕಾರವಾರಕ್ಕೆ ಮುಖ್ಯಮಂತ್ರಿ ಆಗಮಿಸಿ, ಮೆಡಿಕಲ್ ಕಾಲೇಜು ಆವರಣದಲ್ಲಿ ಸುಮಾರು 150 ಕೋಟಿ ವೆಚ್ಚದ ಆಸ್ಪತ್ರೆ ಕಟ್ಟಡ ಸೇರಿ 230 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಬೇಕಿತ್ತು. ಸಿಎಂ ಆಗಮನದ ಹಿನ್ನಲೆಯಲ್ಲಿ ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು.
ಮೆಡಿಕಲ್ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ಮಾಡಲು ಸಿದ್ಧತೆ ಅಂತಿಮ ಹಂತದಲ್ಲಿತ್ತು. ಬೆಂಗಳೂರಿನಿಂದ ಅಧಿಕಾರಿಗಳ ತಂಡ ಕೂಡ ಜಿಲ್ಲೆಯತ್ತ ಆಗಮಿಸಿ, ವಾಸ್ತವ್ಯ ಹೂಡಿತ್ತು. ಆದರೆ ಕೋವಿಡ್ ನಿಯಂತ್ರಣಕ್ಕೆ ಬಾರದ ಕರ್ನಾಟಕ, ತಮಿಳುನಾಡು, ಒಡಿಶಾ, ಆಂಧ್ರಪ್ರದೇಶ, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜುಲೈ 16ರಂದು ಸಭೆ ನಿಗದಿಗೊಳಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು, ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹಾಗೂ ಕೇಂದ್ರದಿಂದ ರಾಜ್ಯಕ್ಕೆ ಸಲಹೆಗಳನ್ನು ಸಹ ನೀಡಲಿರುವ ಹಿನ್ನಲೆಯಲ್ಲಿ ಸಿಎಂ ಕಾರವಾರ ಭೇಟಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ. ಚನ್ನಬಸವೇಶ ಜಿಲ್ಲಾಧಿಕಾರಿಗಳಿಗೆ ಪತ್ರ ಕೂಡ ಬರೆದು ತಿಳಿಸಿದ್ದಾರೆ.
ಹವಾಮಾನ
ವೈಪರೀತ್ಯವೂ
ಕಾರಣ
ಪ್ರಸ್ತುತ
ಉತ್ತರ
ಕನ್ನಡ
ಜಿಲ್ಲೆಯಲ್ಲಿ
ಭಾರೀ
ಮಳೆಯಾಗುತ್ತಿದ್ದು,
ಸಿಎಂ
ಆಗಮನಕ್ಕೆ
ಹವಾಮಾನ
ವೈಪರೀತ್ಯ
ಕೂಡ
ಅಡ್ಡಿ
ಉಂಟುಮಾಡುವ
ಸಾಧ್ಯತೆಯೂ
ಇತ್ತು.
ಹೀಗಾಗಿ
ಅಂತಿಮವಾಗಿ
ಮುಖ್ಯಮಂತ್ರಿ
ಉತ್ತರ
ಕನ್ನಡ
ಪ್ರವಾಸದ
ಬಗ್ಗೆ
ಜು.14ರಂದು
ಅಧಿಕೃತವಾಗಿ
ಮಾಹಿತಿ
ನೀಡುವ
ಸಾಧ್ಯತೆ
ಇದೆ
ಎನ್ನಲಾಗಿದೆ.
ಜುಲೈ
23ಕ್ಕೆ
ಭೇಟಿ
ಸಾಧ್ಯತೆ:
ರೂಪಾಲಿ
ನಾಯ್ಕ
ಮುಖ್ಯಮಂತ್ರಿ
ಬಿ.ಎಸ್.
ಯಡಿಯೂರಪ್ಪ
ಕಾರವಾರಕ್ಕೆ
ಆಗಮಿಸುತ್ತಿದ್ದ
ಹಿನ್ನಲೆಯಲ್ಲಿ
ಸಕಲ
ಸಿದ್ಧತೆ
ಮಾಡಿಕೊಳ್ಳಲಾಗಿತ್ತು.
ಆದರೆ
ಪ್ರಧಾನಿಗಳ
ಜೊತೆ
ಸಭೆ
ಇರುವ
ಹಿನ್ನಲೆಯಲ್ಲಿ
ಕಾರ್ಯಕ್ರಮ
ಮುಂದೂಡಿದ್ದು,
ಈ
ಬಗ್ಗೆ
ಮಾಹಿತಿ
ಬಂದಿದೆ
ಎಂದು
ಶಾಸಕಿ
ರೂಪಾಲಿ
ನಾಯ್ಕ
ಖಚಿತಪಡಿಸಿದ್ದಾರೆ.
Recommended Video
"ಕೋವಿಡ್ ನಿಯಂತ್ರಣ ಕುರಿತು ಪ್ರಧಾನಿಗಳ ಜೊತೆ ಸಭೆ ಮಹತ್ವದ್ದಾಗಿದೆ. ಜುಲೈ 23ಕ್ಕೆ ಬಹುಶಃ ಸಿಎಂ ಬರುವ ಸಾಧ್ಯತೆ ಇದ್ದು, ಶೀಘ್ರವೇ ದಿನಾಂಕವನ್ನು ಪ್ರಕಟಿಸಲಿದ್ದಾರೆ. ಜು.16ರ ಸಿಎಂ ಕಾರ್ಯಕ್ರಮ ಮುಂದೂಡಿಕೆಯಾಗಿದ್ದರೂ ಶೀಘ್ರವೇ ನಗರಕ್ಕೆ ಆಗಮಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ,'' ಎಂದು ಅವರು 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.