'ಕರ್ನಾಟಕದಲ್ಲಿ ಚುನಾವಣೆ ಗೆಲ್ಲೋದು ಐಟಿ ದಾಳಿಗೆ ಆದೇಶ ಕೊಟ್ಟಂಗಲ್ಲ'

ಬೆಂಗಳೂರು, ಆಗಸ್ಟ್ 14: ಉತ್ತರಪ್ರದೇಶದಲ್ಲಿ ಚುನಾವಣೆ ಗೆದ್ದಂತೆ ಅಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಸೋಲಿಸಲು ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾಗೆ ಸವಾಲು ಎಸೆದಿದ್ದಾರೆ.

ನಾವೇನು ಮಕ್ಕಳಲ್ಲ. ನಲವತ್ತು ವರ್ಷಗಳಿಂದ ರಾಜಕೀಯದಲ್ಲಿ ಇದೀವಿ. ಅಮಿತ್ ಷಾ ಅದ್ಭುತ ತಂತ್ರಗಾರ ಆಗಿದ್ದರೆ ಪಂಜಾಬ್, ಗೋವಾ, ಮಣಿಪುರದಲ್ಲಿ ಯಾಕೆ ವಿಫಲರಾಗುತ್ತಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ. ಆಳಂದದಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿದ ನಂತರ ಅವರು ಮಾತನಾಡಿದರು.

ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ

Siddaramaiah

ಕರ್ನಾಟಕದಲ್ಲಿ ಚುನಾವಣೆ ಗೆಲ್ಲುವುದು ಅಂದರೆ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿಗೆ ಆದೇಶ ನೀಡಿದ ಹಾಗಲ್ಲ. ಇದು ಬಸವಣ್ಣನ ನಾಡು. ಇಲ್ಲಿ ಅವರ ವಿಭಜನೆ ರಾಜಕೀಯ ಕೆಲಸ ಮಾಡಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಯಡಿಯೂರಪ್ಪ ಅವರ 'ಮಿಷನ್ ನೂರೈವತ್ತು' ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಜೈಲಿಗೆ ಹೋಗಿದ್ದವರನ್ನು ಜನ ಯಾಕೆ ಆರಿಸುತ್ತಾರೆ? ಉಚಿತವಾಗಿ ಅಕ್ಕಿ ನೀದಿದ, ಸಾಲ ಮನ್ನಾ ಮಾಡಿದ ಹಾಗೂ ಕಳೆದ ಚುನಾವಣೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಿದ ನಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ.

Amit sha

ಉಚಿತ ಊಟ, ಶಿಕ್ಷಣ ಮತ್ತಿತರ ಅನುಕೂಲಗಳನ್ನು ಮಾಡಿದ ಸರಕಾರಕ್ಕೆ ಜನರು ದ್ರೋಹ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+