Get Updates
Get notified of breaking news, exclusive insights, and must-see stories!

ಬಿಜೆಪಿ ಹಾಗೂ ಟಿಡಿಪಿ ಬಿರುಕು, ಕರ್ನಾಟಕದ ಮೇಲೆ ಪರಿಣಾಮವೇನು?

ಬೆಂಗಳೂರು, ಮಾರ್ಚ್ 12 : ಆಂಧ್ರಪ್ರದೇಶದಲ್ಲಿ ಬಿಜೆಪಿ ಹಾಗೂ ಟಿಡಿಪಿ ನಡುವಿನ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು, ಇದು ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ? ಕರ್ನಾಟಕದ ಬಳ್ಳಾರಿ, ಕೋಲಾರ, ಕಲಬುರಗಿ ಹಾಗೂ ಬೀದರ್ ನಲ್ಲಿ ತೆಲುಗು ಭಾಷಿಗರ ಸಂಖ್ಯೆ ಹೆಚ್ಚಿದೆ. ಇದಲ್ಲದೆ, ಬೆಂಗಳೂರಿನಲ್ಲೂ ತೆಲುಗು ಭಾಷಿಗರ ಮತಗಳು ಕೆಲ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಲಿದೆ. ಹೀಗಾಗಿ, ಮತ ವಿಭಜನೆ ತಡೆಗಟ್ಟಲು ಬಿಜೆಪಿ ಯತ್ನಿಸುತ್ತಿದೆ.

ರಾಜ್ಯ, ಭಾಷೆ ವಿಷಯಕ್ಕೆ ಬಂದರೆ ಅಧಿಕಾರವನ್ನು ಲೆಕ್ಕಿಸದೆ ಹೋರಾಟಕ್ಕೆ ಇಳಿಯಲು ಆಂಧ್ರಪ್ರದೇಶದ ಜನತೆ ಮುಂದಾಗಿದ್ದಾರೆ. ವಿಶೇಷ ಸ್ಥಾನಮಾನದ ನಿರೀಕ್ಷೆಯಲ್ಲಿದ್ದ ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಭರವಸೆಯನ್ನು ಮೋದಿ ಸರ್ಕಾರ ನೀಡಿತ್ತು.

 Will BJP-TDP spat play out on Telugu voters in Karnataka?

ಅದರೆ, ಇದಕ್ಕೆ ಒಪ್ಪದ ತೆಲುಗು ದೇಶಂ ಪಾರ್ಟಿ ತನ್ನ ಸಚಿವರನ್ನು ಕೇಂದ್ರ ಸಂಪುಟದಿಂದ ಹೊರಕ್ಕೆ ಕರೆಸಿಕೊಂಡಿದೆ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಳಂಬ ಮಾಡಿದರೆ, ಇದರ ಪರಿಣಾಮ ಆಂಧ್ರದ ಮೇಲಷ್ಟೇ ಅಲ್ಲ, ಕರ್ನಾಟಕದ ಮೇಲೂ ಆಗಲಿದೆ. ಸದ್ಯ ದಕ್ಷಿಣ ಭಾರತದಲ್ಲಿ ದೊಡ್ಡ ರಾಜ್ಯವಾಗಿರುವ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ, ಶತಾಯಗತಾಯ ಯತ್ನಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+