Vegetable Price: ಗಗನ ಮುಟ್ಟಿದ ತರಕಾರಿ ದರ, ಮೀನು, ಚಿಕನ್ಗಿಂತ ಬೀನ್ಸ್ ದುಬಾರಿ
ಬೆಂಗಳೂರು, ಏಪ್ರಿಲ್ 29: ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನೀರಿಲ್ಲದೇ ಬಿಸಿಲಿನ ಝಳದಿಂದ ತರಕಾರಿ ಇಳುವರಿ ಕುಂಠಿತಗೊಂಡಿದೆ. ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ತರಕಾರಿಗಳ ದರವೂ ಹೆಚ್ಚಾಗುತ್ತಿದೆ. ಬೀನ್ಸ್, ಬದನೆ ಕಾಯಿ, ಕ್ಯಾಪ್ಸಿಕಂ, ಸೇರಿದಂತೆ ಹಲವು ತರಕಾರಿಗಳ ದರ ಗಗನಕ್ಕೇರಿದೆ. ತರಕಾರಿಗಿಂತ ಮೀನು, ಕೋಳಿ ಮಾಂಸದ ಬೆಲೆಯೇ ಕಡಿಮೆ ಎನ್ನುವಂತಾಗಿದೆ.
ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ಕ್ಯಾರಟ್, ನಿಂಬೆ ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳಾಂತ್ಯದಲ್ಲಿ ತರಕಾರಿಗಳ ದರದಲ್ಲಿ ಏರಿಕೆ ಉಂಟಾಗಿದೆ. ಸದ್ಯ ಬೆಂಗಳೂರು ಮಾರುಕಟ್ಟೆಗೆ ಕೋಲಾರ, ರಾಮನಗರ, ಹೊಸಕೋಟೆ ಹಾಗೂ ಚಿಕ್ಕಬಳ್ಳಾಪುರದಿಂದ ತರಕಾರಿಗಳು ಬರುತ್ತಿದ್ದು, ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ.

ಬಿಸಿಲಿನಿಂದ ತರಕಾರಿ ಹಾಗೂ ಸೊಪ್ಪುಗಳು ಬೇಗ ಒಣಗುತ್ತದೆ. ಬಾಡಿ ಹೋಗುತ್ತದೆ. ಬೆಳಗ್ಗೆ ಫ್ರೆಶ್ ಆಗಿ ತಂದ ಸೊಪ್ಪು ಎಷ್ಟೇ ನೀರು ಸಿಂಪಡಿಸಿದರೂ ಕೂಡ ಅರ್ಧ ದಿನಕ್ಕೆ ಪೂರ್ತಿ ಒಣಗುತ್ತದೆ. ತರಕಾರಿಗಳು ಕೂಡ ಹೆಚ್ಚು ದಿನ ವ್ಯಾಪಾರಕ್ಕೆ ಬರುತ್ತಿಲ್ಲ. ಇತ್ತ ದರ ಹೆಚ್ಚಳ ಒಂದು ಕಡೆಯಾದರೆ, ಒಣಗಿದ ಸೊಪ್ಪು, ತರಕಾರಿಗಳನ್ನು ಗ್ರಾಹಕರು ಕೊಳ್ಳುತ್ತಿಲಲ್ಲ. ಇದರಿಂದ ವ್ಯಾಪಾರಕ್ಕೆ ನಷ್ಟವಾಗುತ್ತಿದ್ದು, ಅನೇಕರು ತರಕಾರಿ ವ್ಯಾಪಾರಕ್ಕೆ ತಾತ್ಕಲಿಕ ಬ್ರೇಕ್ ಹಾಕಿದ್ದಾರೆ. ಇದರಿಂದ ವ್ಯಾಪಾರ ಮಾಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ತರಕಾರಿ ಬೆಲೆ ಏರಿಕೆಯಾಗುತ್ತಿದೆ.
ಮಾರುಕಟ್ಟೆಯಲ್ಲಿ ಸದ್ಯದ ತರಕಾರಿ ದರವೇನು..?( ನಗರಗಳಿಗನುಗುಣವಾಗಿ ದರರಲ್ಲಿ ಏರಿಳಿತಗಳಿರುತ್ತದೆ)
ಬೀನ್ಸ್- 200 ರೂಪಾಯಿ
ನಾಟಿ ಬೀನ್ಸ್-140 ರೂಪಾಯಿ
ಊಟಿ ಕ್ಯಾರಟ್-100 ರೂಪಾಯಿ
ನಾಟಿ ಕ್ಯಾರಟ್- 40 ರೂಪಾಯಿ
ಮೂಲಂಗಿ-60 ರೂಪಾಯಿ
ಈರುಳ್ಳಿ - 40 ರೂಪಾಯಿ
ಬೀಟ್ರೂಟ್- 80 ರೂಪಾಯಿ
ಬೆಂಡೆಕಾಯಿ - 80 ರೂಪಾಯಿ
ನವಿಲುಕೋಸು - 80 ರೂಪಾಯಿ
ಹೀರೆಕಾಯಿ -80 ರೂಪಾಯಿ
ಟೊಮೇಟೊ -40 ರೂಪಾಯಿ
ಆಲೂಗಡ್ಡೆ- 50 ರೂಪಾಯಿ
ಮೆಣಸಿನಕಾಯಿ-80 ರೂಪಾಯಿ
ಕ್ಯಾಪ್ಸಿಕಂ-80 ರೂಪಾಯಿ
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Summer: ಕರ್ನಾಟಕದಲ್ಲಿ ಪ್ರಕೃತಿ ವಿಕೋಪ - ಬೇಸಿಗೆ ನೀರಿನ ಸಂಕಷ್ಟ ತಡೆಗೆ ಸಿದ್ಧತೆ; ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ನಿರ್ಧಾರ












Click it and Unblock the Notifications