ಏಕವಚನದಲ್ಲಿ ಬೈದಾಡಿಕೊಂಡು, ಆಮೇಲೆ 'ವಿ ಆರ್ ಬ್ರದರ್ಸ್' ಅಂದ ಕಾಂಗ್ರೆಸ್, ಬಿಜೆಪಿ ಶಾಸಕರು
ಬೆಂಗಳೂರು, ಮಾರ್ಚ್ 9: ಏಕವಚನದಲ್ಲಿ ಬೈದಾಡಿಕೊಂಡರು. ತಾಕತ್ ಇದೆಯಾ ಎಂದು ಒಬ್ಬರನ್ನೊಬ್ಬರು ಪ್ರಶ್ನಿಸಿಕೊಂಡರು. ಸದನದಲ್ಲಿ ಈ ರೀತಿ ವರ್ತಿಸುವುದು ತಪ್ಪು ಎಂದು ಹಿರಿಯ ಶಾಸಕರೊಬ್ಬರು ಬುದ್ದಿ ಹೇಳಿದಾಗ, ನಮ್ಮಿಬ್ಬರ ನಡುವೆ ಬರಬೇಡಿ, ನಾವು ಸಹೋದರರು ಎಂದರು.
ಇದು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಮತ್ತು ಬೆಳ್ತಂಗಡಿಯ ಯುವ ಬಿಜೆಪಿ ಶಾಸಕ ಹರೀಶ್ ಪೂಂಜಾ ನಡುವೆ ನಡೆದ ಸಂಭಾಷಣೆ.
"ಇವನು ಬಹಳಷ್ಟು ಬಾರಿ ನನಗೆ ದೇಶದ್ರೋಹಿ ಎಂದ, ನನಗೆ ಇದರಿಂದ ಏನೂ ಬೇಸರವಿಲ್ಲ. ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಒಬ್ಬ ದೇಶದ್ರೋಹಿ ಎಂದು ನಿನಗೆ ತಾಕತ್ ಇದ್ದರೆ ಹೇಳು" ಎಂದು ಶಾಸಕ ಖಾದರ್, ಹರೀಶ್ ಪೂಂಜಾಗೆ ಸವಾಲು ಎಸೆದರು. ಇದಕ್ಕೆ ಪೂಂಜಾ ತಿರುಗೇಟು ನೀಡಿದರು.

"ಇದು ಇವರಿಬ್ಬರ ನಡುವಿನ ಚರ್ಚೆಯಲ್ಲ" ಎಂದು ಸಿ.ಟಿ.ರವಿ ಮಧ್ಯಪ್ರವೇಶಿಸಿದಾಗ, ಬಿಜೆಪಿಯ ಹಿರಿಯ (ವಿರಾಜಪೇಟೆ) ಶಾಸಕ ಕೆ.ಜಿ.ಬೋಪಯ್ಯ ಎದ್ದುನಿಂತು, "ಶಾಸಕರನ್ನು ಏಕವಚನದಲ್ಲಿ ಸಂಭೋದಿಸುತ್ತಿರುವುದು ತಪ್ಪು, ಖಾದರ್ ಅವರ ಮಾತನ್ನು ಕಡತದಿಂದ ತೆಗೆದು ಹಾಕಬೇಕೆಂದು" ಒತ್ತಾಯಿಸಿದರು.
ಆಗ ಖಾದರ್, "ನನ್ನ ತಮ್ಮನನ್ನು ನಾನು ಏಕವಚನದಲ್ಲೇ ಮಾತನಾಡಿಸುವುದು. ನನ್ನ ಸಹೋದರನನ್ನು ಏಕವಚನದಲ್ಲಿ ಮಾತನಾಡಿಸಿದರೆ, ನಿಮಗೇನು ತೊಂದರೆ" ಎಂದಾಗ, "ಅದೆಲ್ಲಾ ಸದನದಲ್ಲಿ ನಡೆಯುವುದಿಲ್ಲ" ಎಂದು ಬೋಪಯ್ಯ ಹೇಳಿದರು.
"ನಾವು ಮಾಡುವ ಪ್ರತೀ ಕೆಲಸ, ಮಾತು ದೇಶದ ಅಭಿವೃದ್ದಿಗೆ ಪೂರಕವಾಗಿರಬೇಕೆಂದು" ಖಾದರ್ ತಮ್ಮ ಭಾಷಣವನ್ನು ಮುಂದುವರಿಸಿದರು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications