ಸರ್ಕಾರದ ಆದೇಶ ಹೊರತಾಗಿಯೂ ಹಿಜಾಬ್- ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು
ವಿಜಯಪುರ, ಫೆಬ್ರವರಿ 7: ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಈಗ ರಾಜ್ಯದಾದ್ಯಂತ ವ್ಯಾಪಿಸಿದೆ. ಕರಾವಳಿ ವಿದ್ಯಾರ್ಥಿಗಳು ಈಗ ಹಿಜಾಬ್- ಕೇಸರಿ ಶಾಲು ವಿವಾದ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಸುದ್ದಿಯಾಗಿದೆ.
ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿತ್ತು.
ಖಾಸಗಿ ಶಾಲಾ-ಕಾಲೇಜುಗಳಲ್ಲಿ ಸಹ ಆಯಾ ಆಡಳಿತ ಮಂಡಳಿ ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಬೇಕಾದುದುದ ಕಡ್ಡಾಯವಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು ಎಂದು ತಿಳಿಸಿತ್ತು.
ರಾಜ್ಯ
ಸರ್ಕಾರದಸಮವಸ್ತ್ರ
ಸಂಹಿತೆಯ
ಆದೇಶ
ಬಂದ
ನಂತರ
ಇಂದು
ಮೊದಲ
ದಿನದ
ಕಾಲೇಜು
ಆರಂಭವಾಗಿದ್ದು,
ಈ
ವಿವಾದ
ಯಾವ
ಸ್ವರೂಪ
ಪಡೆದುಕೊಳ್ಳುತ್ತದೆ
ಎಂಬ
ಆತಂಕ
ಶುರುವಾಗಿದೆ.
ಹಿಜಾಬ್ ಮತ್ತು ಕೇಸರಿ ಶಾಲು ತೊಟ್ಟು ಕಾಲೇಜಿಗೆ ಬಂದರೆ ತರಗತಿಗೆ ಪ್ರವೇಶ ಇಲ್ಲ ಎಂದು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧಾರ ಮಾಡಿದೆ. ಅಲ್ಲದೇ ಕಾಲೇಜಿನ ಬಳಿ ಯಾವುದೇ ಪ್ರತಿಭಟನೆ ನಡೆಸಬಾರದು ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ಕಾಲೇಜು ಗೇಟ್ ಬಳಿ ಪ್ರತಿಭಟನೆಗೆ ಪೊಲೀಸರು ತಡೆಯೊಡ್ಡುವ ಸಾಧ್ಯತೆ ಇದೆ.
ಇಂಡಿಯಲ್ಲಿ
ಹಿಜಾಬ್,
ಕೇಸರಿ
ಶಾಲು
ಧರಿಸಿ
ಬಂದ
ವಿದ್ಯಾರ್ಥಿಗಳು
ರಾಜ್ಯ
ಸರ್ಕಾರದ
ವಸ್ತ್ರ
ಸಂಹಿತೆ
ಆದೇಶದ
ಹೊರತಾಗಿಯೂ
ವಿಜಯಪುರ
ಜಿಲ್ಲೆಯ
ಇಂಡಿ
ಪಟ್ಟಣದಲ್ಲಿ
ಶಾಂತೇಶ್ವರ
ಪದವಿ
ಪೂರ್ವ
ಕಾಲೇಜಿನ
ವಿದ್ಯಾರ್ಥಿಗಳು
ಹಿಜಾಬ್,
ಕೇಸರಿ
ಶಾಲು
ಧರಿಸಿ
ಕಾಲೇಜಿಗೆ
ಬಂದಿದ್ದಾರೆ.
ಮುಂದೆ
ಇದು
ಯಾವ
ಸ್ವರೂಪ
ಪಡೆದುಕೊಳ್ಳುತ್ತದೆ
ಎಂಬ
ಭಯ
ಕಾಲೇಜು
ಆಡಳಿತ
ಮಂಡಳಿಗೆ
ಶುರುವಾಗಿದೆ.
ಇದಲ್ಲದೇ
ಉಡುಪಿ
ಜಿಲ್ಲೆಯ
ಕುಂದಾಪುರದಲ್ಲಿನ
ವೆಂಕಟರಮಣ
ಪದವಿ
ಪೂರ್ವ
ಕಾಲೇಜಿನ
ವಿದ್ಯಾರ್ಥಿಗಳು
ಕೇಸರಿ
ಶಾಲು
ಧರಿಸಿ
ಕಾಲೇಜಿಗೆ
ಆಗಮಿಸಿದ್ದಾರೆ.
ಇಂಡಿ
2
ಕಾಲೇಜುಗಳಿಗೆ
ರಜೆ
ವಿಜಯಪುರ
ಜಿಲ್ಲೆ
ಇಂಡಿ
ಪಟ್ಟಣದ
ಶಾಂತೇಶ್ವರ
ಪಿಯುಸಿ
ಕಾಲೇಜು,
GRB
ಕಾಲೇಜಿಗೆ
ರಜೆ
ಘೋಷಿಸಲಾಗಿದೆ.
ವಿದ್ಯಾರ್ಥಿಗಳು
ಹಿಜಾಬ್
ಹಾಗೂ
ಕೇಸರಿ
ಶಾಲು
ಧರಿಸಿ
ಬಂದ
ಕಾರಣ
ಮುಂಜಾಗ್ರತಾ
ಕ್ರಮವಾಗಿ
2
ಕಾಲೇಜುಗಳಿಗೆ
ರಜೆ
ನೀಡಲಾಗಿದೆ.
ಕೇಸರಿ
ಶಾಲು
ಹಾಕಿಕೊಂಡು
ವಿದ್ಯಾರ್ಥಿಗಳು
ಕಾಲೇಜುಗಳಿಗೆ
ಆಗಮಿಸಿದ
ಕಾರಣ
ತುರ್ತು
ಸಭೆ
ನಡೆಸಿದ
ಎರಡೂ
ಕಾಲೇಜುಗಳ
ಆಡಳಿತ
ಮಂಡಳಿಗಳು,
ವಿವಾದ
ಉಂಟಾಗಬಾರದು
ಎಂಬ
ಕಾರಣದಿಂದ
ಕಾಲೇಜುಗಳಿಗೆ
ರಜೆ
ಘೋಷಣೆ
ಮಾಡಿವೆ.
ಇಂದು
ಒಂದು
ದಿನದ
ಮಟ್ಟಿಗೆ
ರಜೆ
ನೀಡಲಾಗಿದ್ದು,
ನಾಳೆಯಿಂದ
ಸರ್ಕಾರ
ಜಾರಿ
ಮಾಡಿರುವ
ಆದೇಶದ
ಪ್ರಕಾರ
ಸಮವಸ್ತ್ರ
ಹಾಕಿಕೊಂಡು
ಬರುವಂತೆ
ಸೂಚಿಸಲಾಗಿದೆ.
ಕೇಸರು
ಶಾಲು
ಧರಿಸಿ
ಬಂದ
ವಿದ್ಯಾರ್ಥಿಗಳಿಗೆ
ತಡೆ
ಇನ್ನು
ಉಡುಪಿ
ಜಿಲ್ಲೆಯ
ಕುಂದಾಪುರದಲ್ಲಿನ
ವೆಂಕಟರಮಣ
ಕಾಲೇಜಿಗೆ
ಕೇಸರಿ
ಶಾಲು
ಹಾಕಿಕೊಂಡು
ಬಂದ
ವಿದ್ಯಾರ್ಥಿಗಳನ್ನು
ಕುಂದಾಪುರ
ಎಸ್ಐ
ಸದಾಶಿವ
ಗವರೋಜಿ
ಕಾಲೇಜಿನ
ಮೈದಾನದಲ್ಲಿ
ತಡೆದಿದ್ದಾರೆ.
ಕೇಸರಿ
ಶಾಲು
ಹಾಕಿಕೊಂಡು
ಬಂದರೆ
ಪ್ರವೇಶ
ನೀಡುವುದಿಲ್ಲ.
ಸ್ಕಾರ್ಫ್,
ಬುರ್ಖಾ
ಧರಿಸಿ
ಕಾಲೇಜಿಗೆ
ಬರುವಂತಿಲ್ಲ
ಎಂದು
ವೆಂಕಟರಮಣ
ಕಾಲೇಜಿನ
ಪ್ರಾಂಶುಪಾಲರು
ವಿದ್ಯಾರ್ಥಿಗಳಿಗೆ
ಖಡಕ್
ಆಗಿ
ಹೇಳಿ
ಕಳಿಸಿದ್ದಾರೆ.
ಮುಸ್ಲಿಂ
ಮಹಿಳೆಯರು
ಸಮಾಜದ
ಮುಖ್ಯವಾಹಿನಿಗೆ
ಬನ್ನಿ
ಮುಸ್ಲಿಂ
ಮಹಿಳೆಯರು
ಸಮಾಜದ
ಮುಖ್ಯವಾಹಿನಿಗೆ
ಬರುವಂತೆ
ನಾನು
ಕರೆ
ಕೊಡುತ್ತೇನೆ.
ಅಲ್ಲಿರುವ
ವ್ಯವಸ್ಥೆ
ನಿಮ್ಮನ್ನು
ಬಗ್ಗುಬಡಿಯುವ
ಹಾಗೂ
ಮುಸುಕಿನಲ್ಲಿ
ಇರಿಸುವ
ಪ್ರಯತ್ನ
ಮಾಡಿತ್ತು.
ತ್ರಿವಳಿ
ತಲಾಕ್
ರದ್ದುಪಡಿಸುವ
ಮೂಲಕ
ಮುಸ್ಲಿಂ
ಮಹಿಳೆಯರಿಗೆ
ನಮ್ಮ
ಸರ್ಕಾರ
ಭದ್ರತೆ
ನೀಡಿದೆ
ಎಂದು
ಇಂಧನ,
ಕನ್ನಡ
ಸಂಸ್ಕೃತಿ
ಸಚಿವ
ಸುನಿಲ್
ಕುಮಾರ್
ಹೇಳಿದರು.
ತರಗತಿಗಳಲ್ಲಿ ಹಿಜಾಬ್ಗಾಗಿ ಹೋರಾಟದ ವಿಚಾರ ಕುರಿತು ಮಾತನಾಡಿದ ಸಚಿವರು, ಮುಸ್ಲಿಂ ಮಹಿಳೆಯರು ಮುಖ್ಯವಾಹಿನಿಗೆ ಬನ್ನಿ ಎಂದು ಕರೆ ಕೊಡುತ್ತೇವೆ. ಜಗತ್ತಿನ ಯಾವುದೇ ದೇಶದಲ್ಲಿ ಇರದ ಅನಿಷ್ಠ ಪದ್ಧತಿ ಈ ದೇಶದಲ್ಲಿ ಇಂದಿಗೂ ಮುಂದುವರೆಯುತ್ತಿದೆ. ಅದನ್ನು ಬಿಟ್ಟು ಹೊರಗೆ ಬರುವ ಪ್ರಯತ್ನ ಮಾಡಿದರೆ ಈ ಸಮಾಜದಲ್ಲಿ ಗೌರವ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆ ರೀತಿಯ ಜಾಗೃತಿ ಅವರ ಮನೆಯಲ್ಲಿಯೇ ಆಗಬೇಕು ಎಂದು ತಿಳಿಸಿದರು.
ಕಾನೂನು
ಗೌರವಿಸದಿದ್ದರೆ
ಇಲ್ಲಿರಲು
ಅರ್ಹರಲ್ಲ
ಕಾಲೇಜುಗಳಲ್ಲಿ
ವಸ್ತ್ರ
ಸಂಹಿತೆ
ಸಂಬಂಧ
ರಾಜ್ಯ
ಸರ್ಕಾರ
ಕಾನೂನು
ಮಾಡಿದೆ.
ಈ
ಕಾನೂನನ್ನು
ಎಲ್ಲರು
ಗೌರವಿಸಬೇಕು.
ಇಲ್ಲದಿದ್ದರೆ
ಇದರ
ಹಿಂದೆ
ಯಾವುದೋ
ದೊಡ್ಡ
ಪ್ರಮಾಣದ
ಹಿಡನ್
ಅಜೆಂಡಾ
ಇದೆ
ಎಂಬುದು
ಅರ್ಥ.
ಆ
ಹಿಡನ್
ಅಜೆಂಡಾವನ್ನು
ಸರ್ಕಾರ
ಬಗ್ಗು
ಬಡಿಯುತ್ತದೆ
ಎಂದು
ಎಚ್ಚರಿಸಿದರು.
ಈ ನೆಲದ ಕಾನೂನನ್ನು ಗೌರವಿಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ. ಅದನ್ನು ಯಾರು ಗೌರವಿಸುವುದಿಲ್ಲವೋ ಅವರು ಈ ನೆಲದಲ್ಲಿ ಇರಲು ಅನರ್ಹರು. ಸುತ್ತೋಲೆ, ಕಾನೂನುಗಳಿಗಿಂತ ಹೆಚ್ಚಾಗಿ, ಶಾಲಾ-ಕಾಲೇಜುಗಳಲ್ಲಿ ಎಲ್ಲರೂ ಒಟ್ಟಾಗಿ ಸಮಾನತೆಯಿಂದ ಶಿಕ್ಷಣ ಕಲಿಯಬೇಕು ಎಂಬುದು ನಮ್ಮ ಪರಂಪರೆಯಲ್ಲಿಯೇ ಇದೆ. ಇದರಲ್ಲಿ ಮತೀಯ ಸಂಗತಿಗಳು ವಿಜೃಂಭಿಸುವುದು ಒಳ್ಳೆಯದಲ್ಲ ಎಂದು ಸಚಿವ ಸುನಿಲ್ ಕುಮಾರ್ ಮನವಿ ಮಾಡಿದರು.
Recommended Video