ಮಾವಿಗೂ ತಟ್ಟಿದ ಬರದ ಬಿಸಿ, ಮಾರುಕಟ್ಟೆಯಿಂದ ಕಣ್ಮರೆ
ಉಡುಪಿ, ಮೇ 04 : ಬರಗಾಲ ಮತ್ತು ರಣ ಬಿಸಿಲಿನ ಬಿಸಿ ಮಾವಿನ ಬೆಳೆಗೂ ತಟ್ಟಿದೆ. ಉಡುಪಿಯ ಮಾರುಕಟ್ಟೆಯಲ್ಲಿರುತ್ತಿದ್ದ ಸ್ಥಳೀಯ ತಳಿಗಳ ಮಾವು ಈ ಬಾರಿ ಸಿಗುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ 60ರಷ್ಟು ಮಾವಿನ ರಫ್ತು ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಜಿಲ್ಲೆಯಲ್ಲಿ ಈ ಬಾರಿ ಚಳಿ ಇರಲಿಲ್ಲ. ಬಿಸಿಲಿನ ಧಗೆಯೇ ಹೆಚ್ಚಾಗಿತ್ತು. ಆದ್ದರಿಂದ, ನೈಸರ್ಗಿಕವಾಗಿ ಬೆಳೆದು ಸಿಹಿ ಹಂಚುತ್ತಿದ್ದ ಸ್ಥಳೀಯ ತಳಿಯ ಮಾವುಗಳೆಲ್ಲ ಹೂವಿನ ಹಂತದಲ್ಲಿಯೇ ಕರಟಿ ಹೋಗಿವೆ. ಇದರಿಂದಾಗಿ ಬೇಡಿಕೆ ಇದ್ದರೂ ಮಾವು ಪೂರೈಕೆಯಾಗುತ್ತಿಲ್ಲ. [ಕರ್ನಾಟಕದ ಮಾವು ನೇರ ರಫ್ತಿಗಾಗಿ ಕೇಂದ್ರಕ್ಕೆ ಮನವಿ]

ಮಾರುಕಟ್ಟೆಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಸ್ಥಳೀಯ ತಳಿಗಳಾದ ಮುಂಡಪ್ಪ, ಮಲಬಾರ್, ತೋತಾಪುರಿ ಈ ಬಾರಿ ಮಾರುಕಟ್ಟೆ ಪ್ರವೇಶಕ್ಕೆ ಮುನ್ನವೇ ಕಣ್ಮರೆಯಾಗಿವೆ. ರಸ್ತೆ ಬದಿಯಲ್ಲಿ ರಾಶಿ ಹಾಕಿಕೊಂಡು ಗಿರಾಕಿಗಳನ್ನು ಕೂಗಿ ಕರೆಯುತ್ತಿದ್ದ ಮಾವಿನ ಯುಗ ಕಳೆದು ಹೋಗಿದೆ. [ಮೈಸೂರಿನ ರಸ್ತೆ ಬದಿಯಲ್ಲೇ ಮಾವಿನಸಂತೆ...]
ಹಿಂದೆ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಸ್ಥಳೀಯ ಮಾವಿನ ತಳಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದವು. ಸಂತೆಯಲ್ಲಿ ಲೋಡ್ ಗಟ್ಟಲೆ ಮಾರಾಟವಾಗುತ್ತಿತ್ತು. ಆದರೆ, ಈಗ ಸಂತೆ ಮಾರುಕಟ್ಟೆಯಲ್ಲಿ ಈ ತಳಿಗಳು ಸಿಗುತ್ತಿಲ್ಲ. ವ್ಯಾಪಾರಿಗಳನ್ನು ವಿಚಾರಿಸಿದರೆ ಈ ಬಾರಿ ಚಳಿ ಇಲ್ಲ, ಮಳೆ ಇಲ್ಲ ಸುಡು ಬಿಸಿಲು ಮಾವು ಎಲ್ಲಿಂದ ಬರಬೇಕು ಬಿಡಿ ಎನ್ನುತ್ತಿದ್ದಾರೆ. [ಹಣ್ಣುಗಳ ರಾಜನಿಗೆ ಸಿಕ್ತು ಪ್ರಧಾನಿ ಮೋದಿ ಹೆಸರು]
ಡಜನ್ಗೆ 1000 ರೂ. : ಅಚ್ಚರಿಯಾದರೂ ಇದು ಸತ್ಯ. ಜ್ಯೂಸ್ ಪ್ರಿಯರ ಬೇಡಿಕೆಗಳಿಸಿರುವ ಬಂಗನಪಲ್ಲಿ ತಳಿಯ ಮಾವು ಮಾರುಕಟ್ಟೆಯಲ್ಲಿ ಬರುತ್ತಲೇ ಇಲ್ಲ. ಅದೆಲ್ಲಾ ಮುಂಬೈ, ಕೋಲ್ಕತ್ತಾ, ಪುಣೆ, ಮೊದಲಾದ ನಗರಗಳಿಗೆ ರಫ್ತಾಗುತ್ತಿವೆ.
ಅಲ್ಲಿ ಡಜನ್ ಮಾವಿನ ಬೆಲೆ 1 ರಿಂದ 2 ಸಾವಿರದ ತನಕ ಇದೆ. ಇಲ್ಲಿ ಈ ಮಾವಿನಹಣ್ಣು ಸಿಕ್ಕಿದರು ಅಷ್ಟೊಂದು ಗುಣಮಟ್ಟದ ಹಣ್ಣು ಸಿಗುವುದಿಲ್ಲ ಎನ್ನತ್ತಾರೆ ವ್ಯಾಪಾರಿಗಳು. ಸ್ಥಳೀಯವಾಗಿ ಹಣ್ಣು ಸಿಗದಿದ್ದರೂ, ಮಾರುಕಟ್ಟೆಗೆ ಬರವು ಮೊದಲೇ ಹಣ್ಣುಗಳು ಬೇರೆ ನಗರಗಳಿಗೆ ಹೋಗುತ್ತಿವೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications