Get Updates
Get notified of breaking news, exclusive insights, and must-see stories!

ಹೋಟೆಲಿಗೆ ಹಾಜರ್, ಸದನಕ್ಕೆ ಚಕ್ಕರ್, ಇದು ವಿಶ್ವಾಸಮತ ಹಾಜರಿ ಪುಸ್ತಕ!

ಬೆಂಗಳೂರು, ಜುಲೈ 17: ಶಾಸಕರ ರಾಜೀನಾಮೆ, ಅನರ್ಹತೆ, ವಿಪ್, ವಿಶ್ವಾಸಮತ ಯಾಚನೆ, ಕೈ ತೆನೆ ಸರ್ಕಾರದ ಅಳಿವು ಉಳಿವು ಎಲ್ಲಾ ಲೆಕ್ಕಾಚಾರಗಳ ಬಗ್ಗೆ ಏನಾಗಬಹುದು ಎಂಬ ಕುತೂಹಲದಿಂದ ಕರ್ನಾಟಕ ವಿಧಾನಸಭೆ ಮುಂಗಾರು ಅಧಿವೇಶನ ಇಂದು ಆರಂಭವಾಗಿದೆ.

ಈ ಕಾಪಿ ಬರೆಯುವ ಸಂದರ್ಭಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತಯಾಚನೆ ಯಾಕೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಕ್ಲುಪ್ತವಾಗಿ ವಿವರಸಿ, ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು 'ಯಾಕೆ ನಿಮಗೆ ಆತುರ?' ಎಂದು ಪ್ರಶ್ನಿಸಿ ಕಾಲೆಳೆದು ಕುಳಿತುಕೊಂಡಿದ್ದಾರೆ.

'ಪಾಯಿಂಟ್ ಆಫ್ ಆರ್ಡರ್' ಎಂದು ಮಾತಿಗಿಳಿದ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಕ್ಷಾಂತರ ನಿಷೇಧ ಕಾಯ್ದೆ ಇತಿಹಾಸ, ಕುತೂಹಲಕಾರಿ ಪಕ್ಷಾಂತರಗಳ ಬಗ್ಗೆ ಸುದೀರ್ಘವಾಗಿ ವಿವರಿಸಿ, ಸುಪ್ರೀಂಕೋರ್ಟಿನ ವಿಪ್ ಬಗ್ಗೆ ಕೂಡಾ ಪ್ರಸ್ತಾಪಿಸಿದ್ದಾರೆ. ಮಾತಿನ ಮಧ್ಯೆ "ವಿರೋಧ ಪಕ್ಷ ನಾಯಕನಾದ ನಾನು" ಎಂದು ಬಾಯ್ತಪ್ಪಿ ಹೇಳಿ, ಸದನದಲ್ಲಿ ಗದ್ದಲ, ನಗೆ ಅಲೆ ಏಳುವಂತೆ ಮಾಡಿದ್ದು ಆಗಿದೆ.

ಸದನಕ್ಕೆ ಹಾಜರಾಗುವಂತೆ ಪಕ್ಷಗಳು ನೀಡುವ ವಿಪ್ ಉಲ್ಲಂಘಿಸುವ ಶಾಸಕರ ಮೇಲೆ ಆಯಾ ಪಕ್ಷಗಳೇ ಕ್ರಮ ಜರುಗಿಸಬೇಕೆ? ಶಾಸಕರ ಅನರ್ಹತೆಗೆ ವಿಪ್ ಉಲ್ಲಂಘನೆಯನ್ನು ಪರಿಗಣಿಸಲು ಬರುವುದಿಲ್ಲವೇ? ಎಂಬೆಲ್ಲ ಪ್ರಶ್ನೆಗಳು ಇನ್ನೂ ಹಾಗೆ ಉಳಿದಿವೆ.

ವಿಶ್ವಾಸಮತಯಾಚನೆಯ ಕಲಾಪದಲ್ಲಿ ಸರಣಿ ಭಾಷಣ

ವಿಶ್ವಾಸಮತಯಾಚನೆಯ ಕಲಾಪದಲ್ಲಿ ಸರಣಿ ಭಾಷಣ

ಇದೆಲ್ಲದರ ನಡುವೆ ವಿಶ್ವಾಸಮತಯಾಚನೆಯ ಕಲಾಪದಲ್ಲಿ ಸರಿ ಸುಮಾರು 26 ಮಂದಿ ಶಾಸಕರಿಗೆ ಭಾಷಣಕ್ಕೆ ಅನುಮತಿ ಪಡೆದುಕೊಂಡಿದ್ದಾರೆ. ಸದನಕ್ಕೆ ಯಾರು ಹಾಜರಾಗಿದ್ದಾರೆ, ಯಾರು ಗೈರಾಗಿದ್ದಾರೆ, ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸುವುದು ಹೇಗೆ? ಶಾಸಕರಿಗೆ ಆದ್ಯತೆ ಮೇರೆಗೆ ಚುಕ್ಕಿ ಪ್ರಶ್ನೆಗಳು, ವಾಕ್ಸಮರಗಳನ್ನು ನಿಭಾಯಿಸುವುದು ಎಲ್ಲವೂ ವಿಧಾನಸಭೆಯ 'ಅಂಪೈರ್' ಎಂದು ತಮಗೆ ತಾವೇ ಕರೆದುಕೊಂಡಿರುವ ಸಭಾಪತಿ ಕೆ. ಆರ್ ರಮೇಶ್ ಕುಮಾರ್ ಅವರು ನಿರ್ವಹಿಸುತ್ತಿದ್ದಾರೆ.

ಗೈರು ಹಾಜರಾದ ಶಾಸಕರು

ಗೈರು ಹಾಜರಾದ ಶಾಸಕರು

ಬೆಳಗ್ಗೆ 11.30ರ ವೇಳೆಗೆ ಗೈರುಹಾಜರಾದವರು: 15 ಮಂದಿ ರೆಬೆಲ್ ಶಾಸಕರು ಸೇರಿ 18 ಮಂದಿ. ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ್, ರಮೇಶ್ ಜಾರಕಿಹೊಳಿ, ಮುನಿರತ್ನ, ಎಚ್ ವಿಶ್ವನಾಥ್(ಜೆಡಿಎಸ್), ಸುಧಾಕರ್, ಶಿವರಾಜ್ ಹೆಬ್ಬಾರ್, ಶ್ರೀಮಂತ್ ಪಾಟೀಲ್(ಅನಾರೋಗ್ಯ), ಎಂಟಿಬಿ ನಾಗರಾಜ್, ನಾರಾಯಣ ಗೌಡ, ಗೋಪಾಲಯ್ಯ(ಜೆಡಿಎಸ್), ಬಿಸಿ ಪಾಟೀಲ್, ಆನಂದ್ ಸಿಂಗ್, ಬಿ ನಾಗೇಂದ್ರ, ಆರ್ ಶಂಕರ್(ಕೆಪಿಜೆಪಿ), ಎಚ್ ನಾಗೇಶ್, ಎನ್ ಮಹೇಶ್ ಹಾಗೂ ರೋಷನ್ ಬೇಗ್.

16 ಮಂದಿ ರಾಜೀನಾಮೆ ನೀಡಿದ ಬಳಿಕ

16 ಮಂದಿ ರಾಜೀನಾಮೆ ನೀಡಿದ ಬಳಿಕ

ಸದನಕ್ಕೆ ಹಾಜರಾಗುವಂತೆ ಪಕ್ಷಗಳು ನೀಡುವ ವಿಪ್ ಉಲ್ಲಂಘಿಸುವ ಶಾಸಕರ ಮೇಲೆ ಆಯಾ ಪಕ್ಷಗಳೇ ಕ್ರಮ ಜರುಗಿಸಬೇಕೆ? ಶಾಸಕರ ಅನರ್ಹತೆಗೆ ವಿಪ್ ಉಲ್ಲಂಘನೆಯನ್ನು ಪರಿಗಣಿಸಲು ಬರುವುದಿಲ್ಲವೇ? ಎಂಬೆಲ್ಲ ಪ್ರಶ್ನೆಗಳು ಇನ್ನೂ ಹಾಗೆ ಉಳಿದಿವೆ.

ವಿಧಾನಸಭಾ ಸದನದ ಹಾಜರಾತಿ(ಜುಲೈ 18, ಸಮಯ 12.30) ಹೀಗಿದೆ: ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ: 16 ಮಂದಿ ರಾಜೀನಾಮೆ ನೀಡಿದ ಬಳಿಕ ಒಟ್ಟು ಸದಸ್ಯ ಬಲ : 224
ಕಾಂಗ್ರೆಸ್ + ಜೆಡಿಎಸ್ : 101
ಮ್ಯಾಜಿಕ್ ನಂಬರ್ : 105
ಬಿಜೆಪಿ : 107

ಬಿಎಸ್ ಪಿ: 1 (ಎನ್ ಮಹೇಶ್)

ಗೈರಾಗಿರುವ ಶಾಸಕರ ಸಂಖ್ಯೆ 20ಕ್ಕೇರಿಕೆ

ಗೈರಾಗಿರುವ ಶಾಸಕರ ಸಂಖ್ಯೆ 20ಕ್ಕೇರಿಕೆ

ವಿಧಾನಸಭೆಯಲ್ಲಿನ ಸಂಖ್ಯಾಬಲ: ವಿಶ್ವಾಸಮತಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಗೈರಾಗಿರುವ ಶಾಸಕರ ಸಂಖ್ಯೆ 20ಕ್ಕೇರಿಕೆ. 15 ರೆಬೆಲ್ ಶಾಸಕರು, 2 ಪಕ್ಷೇತರರು, 2 ಕಾಂಗ್ರೆಸ್ ಶಾಸಕರು ಹಾಗೂ 1 ಬಿಎಸ್ಪಿ ಶಾಸಕರು.20 ಶಾಸಕರ ಗೈರು ಹಾಜರಿ ನಂತರ ಸದನದ ಸಂಖ್ಯಾಬಲ 224ರಿಂದ 204ಕ್ಕೆ ಕುಸಿದಿದೆ. ಬಹುಮತ ಸಾಬೀತುಪಡಿಸಲು ಹೊಸ ಮ್ಯಾಜಿಕ್ ನಂಬರ್ 103. ಬಿಜೆಪಿ 105 ಸಂಖ್ಯಾಬಲ ಹೊಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+