ಮಂಡ್ಯ : ಚಿಕ್ಕರಸಿನಕೆರೆಯಲ್ಲಿ ಮೀನುಗಳ ಮಾರಣ ಹೋಮ
ಮಂಡ್ಯ, ಮೇ 12 : ಕಲುಷಿತ ನೀರಿನಿಂದಾಗಿ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಕೆರೆಯಲ್ಲಿದ್ದ ಮೀನುಗಳು ಸಾವನ್ನಪ್ಪುತ್ತಿವೆ. ಈಗಾಗಲೇ ಸಾವಿರಾರು ಮೀನುಗಳು ಮೃತಪಟ್ಟು ತೇಲುತ್ತಿವೆ. ಇದರಿಂದ ಸುತ್ತ-ಮುತ್ತಲಿನ ವಾತಾವರಣ ಕಲುಷಿತವಾಗಿದೆ.
ಸುಮಾರು
50
ಎಕರೆ
ವಿಸ್ತೀರ್ಣವುಳ್ಳ
ಕೆರೆಯಲ್ಲಿ
ಮೀನು
ಸಾಕಲಾಗುತ್ತದೆ.
ಮೀನುಗಾರಿಕಾ
ಇಲಾಖೆಯು
ರವೀಂದ್ರ
ಎಂಬುವವರಿಗೆ
ಮೀನು
ಸಾಕಣೆಯ
ಟೆಂಡರ್
ಕೊಟ್ಟಿದೆ.
ಸುಮಾರು
50
ಸಾವಿರಕ್ಕೂ
ಹೆಚ್ಚು
ಮೀನು
ಮರಿಗಳನ್ನು
ಕೆರೆಗೆ
ಬಿಡಲಾಗಿತ್ತು.
[ಮೀನಿನ
ತಲೆ
ಮಾಂಸ
ತಿಂದ
14
ಮಂದಿ
ಅಸ್ವಸ್ಥ]
ಮೀನುಗಳು ಚೆನ್ನಾಗಿ ಬೆಳೆದು 2 ರಿಂದ 3 ಕೆಜಿಯಷ್ಟು ಗಾತ್ರದ್ದಾಗಿದ್ದವು. ಆದರೆ, ಈ ಬಾರಿ ಮಳೆ ಬಾರದೆ ವಾತಾವರಣದಲ್ಲಿ ಉಷ್ಣತೆ ಹೆಚ್ಚಾದ ಪರಿಣಾಮ ಮತ್ತು ಕೆರೆ ನೀರು ಕಲುಷಿತಗೊಂಡಿದ್ದರಿಂದ ಮೀನುಗಳು ಮೃತಪಟ್ಟಿವೆ. [ಹಲಸೂರು ಕೆರೆ ಮಾಲಿನ್ಯಕ್ಕೆ ಬಲಿಯಾದ ಸಾವಿರಾರು ಮೀನುಗಳು]
ಕೆರೆಯಲ್ಲಿ ಮೀನುಗಳು ಇರುವುದರಿಂದ ದುಷ್ಕರ್ಮಿಗಳು ವಿಷ ಹಾಕಿರಬಹುದೇ ಎಂಬ ಸಂಶಯವೂ ಕಾಡುತ್ತಿದೆ. ಎರಡು ವಾರಗಳ ಹಿಂದೆ ಕೆರೆಗೆ ದುಷ್ಕರ್ಮಿಗಳು ವಿದ್ಯುತ್ ಪ್ರವಹಿಸಿದ್ದುದರಿಂದ ಹಲವಾರು ಮೀನುಗಳು ಮೃತಪಟ್ಟಿದ್ದವು. ಹೀಗಿರುವಾಗ ಈ ಮೀನುಗಳ ಮಾರಣ ಹೋಮದ ಹಿಂದೆ ದುಷ್ಕರ್ಮಿಗಳ ಕೈವಾಡವೂ ಇದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. [ಹಲಸೂರು ಕೆರೆ ಸಂರಕ್ಷಣೆ ಹೊಣೆ ಯಾರದ್ದು?]
ಸತ್ತ ಮೀನುಗಳು ಕೊಳೆಯುವ ಹಂತ ತಲುಪಿದ್ದು, ಅವುಗಳನ್ನು ಶುಚಿಗೊಳಿಸುವಂತೆಯೂ ಟೆಂಡರ್ ಪಡೆದವರಿಗೆ ಸೂಚನೆ ನೀಡಲಾಗಿದೆ. ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಸಾವನ್ನಪ್ಪಿದ್ದರಿಂದ ಕಂಗಾಲಾಗಿರುವ ಟೆಂಡರ್ ಪಡೆದ ರವೀಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.