Get Updates
Get notified of breaking news, exclusive insights, and must-see stories!

ವಿಶ್ಲೇಷಣೆ: ಕರ್ನಾಟಕದಲ್ಲಿ ಬಿಜೆಪಿ ಹೆಣೆಯುತ್ತಿರುವ ಬಲೆಗೆ ಕಾಂಗ್ರೆಸ್ ಬಿದ್ದಿರಬಹುದೇ?

ಬೆಂಗಳೂರು, ಏಪ್ರಿಲ್. 30: 'ಭಾರತದ ಸಿಲಿಕಾನ್ ವ್ಯಾಲಿ'ಗೆ ನೆಲೆಯಾಗಿರುವ ಕರ್ನಾಟಕವು ಜಾತಿ ಮತ್ತು ಧರ್ಮಗಳ ಆಧಾರದ ಮೇಲೆ ಅದೇ ಹಳೆಯ ಶೈಲಿಯ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಈ ಬಾರಿಯ ಚುನಾವಣೆಯಲ್ಲಿಯೂ ಕಾಂಗ್ರೆಸ್ , ಬಿಜೆಪಿ ಹೆಣೆದ ಬಲೆಗೆ ಬೀಳುತ್ತಿರುವಂತೆ ಕಾಣಿಸುತ್ತಿದೆ. ಬಿಜೆಪಿಯ ಘೋಷಣೆಗಳಿಗೆ ಟಕ್ಕರ್ ಕೊಡುತ್ತಾ ಅದರ ಸುತ್ತಲೇ ಸುತ್ತುತ್ತಿರುವಂತೆ ಕಾಣಿಸುತ್ತಿದೆ.

ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಮುನ್ನವೇ, ಆಡಳಿತಾರೂಢ ಬಿಜೆಪಿಯು ಮುಸ್ಲಿಮರಿಗೆ ನೀಡಲಾಗಿದ್ದ 4% ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸಿತು.

This is How Congress May Have Fallen Into BJPs Polarisation Trap

ಮುಸ್ಲಿಮರನ್ನು 10% ಆರ್ಥಿಕವಾಗಿ ದುರ್ಬಲ ವರ್ಗದ (EWS) ವರ್ಗದೊಳಗೆ ವರ್ಗಾಯಿಸುವುದಾಗಿ ಘೋಷಿಸಿತು. ತಕ್ಷಣ ಕಾಂಗ್ರೆಸ್ ಕೇಸರಿ ಪಕ್ಷದ ಬಲಗೆ ಸಿಲುಕಿತು. ಈ ಕೋಟಾವನ್ನು ಮರುಸ್ಥಾಪಿಸುವುದು ಮಾತ್ರವಲ್ಲದೆ ಅಧಿಕಾರಕ್ಕೆ ಬಂದರೆ ಆಡಳಿತಾರೂಢ ಬಿಜೆಪಿ ಘೋಷಿಸಿದ ವಿವಿಧ ಮೀಸಲಾತಿ ಕೋಟಾಗಳನ್ನು ರದ್ದುಗೊಳಿಸುವುದಾಗಿ ವಾಗ್ದಾನ ಮಾಡಿದರು.

*4% ಮುಸ್ಲಿಂ ಮೀಸಲಾತಿ ವಿವಾದ*

ಬಿಜೆಪಿಯ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ತಡೆಯಾಜ್ಞೆ ನೀಡಲಾಗಿದೆ. ಆದರೆ ಸಂದರ್ಶನವೊಂದರಲ್ಲಿ ಕೇಳಿದಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಸ್ಲಿಮರಿಗೆ 4% OBC ಮೀಸಲಾತಿ ಅಸಂವಿಧಾನಿಕ ಎಂದು ಹೇಳಿದ್ದಾರೆ. "ಬಿಜೆಪಿ ಎಂದಿಗೂ ಓಲೈಕೆಯನ್ನು ನಂಬುವುದಿಲ್ಲ. ಆದ್ದರಿಂದ, ಮೀಸಲಾತಿಯನ್ನು ಬದಲಾಯಿಸಲು ಅದು ನಿರ್ಧರಿಸಿದೆ" ಎಂದು ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು.

ಇನ್ನೊಂದೆಡೆ ಬಿಜೆಪಿ ನೀಡಿರುವ ಹಲವು ಮೀಸಲಾತಿ ಕಾನೂನು, ಸಂವಿಧಾನ ಹಾಗೂ ಸಮುದಾಯಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಮೀಸಲಾತಿ ಶೇ.56ಕ್ಕೆ ಏರಿದ್ದು, ಬಿಜೆಪಿ ಸರಕಾರ ಮಿತಿ ವಿಸ್ತರಿಸಿ ಎರಡೂ ಸಮುದಾಯಗಳಿಗೆ ಮೀಸಲಾತಿ ನೀಡಲಿ. ಕಾಂಗ್ರೆಸ್ ಅಲ್ಪಸಂಖ್ಯಾತರೊಂದಿಗೆ ದೃಢವಾಗಿ ನಿಂತಿದೆ. ಮುಸ್ಲಿಂ ಮೀಸಲಾತಿ ಇರಬೇಕು ಎಂದು ತಿರುಗೇಟು ನೀಡಿದ್ದಾರೆ.

This is How Congress May Have Fallen Into BJPs Polarisation Trap

ಮುಖ್ಯಮಂತ್ರಿ ಬಿ.ಎಸ್.ಬೊಮ್ಮಾಯಿ ಅವರ ಮೀಸಲಾತಿ ಕ್ರಮವು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ. ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿಯನ್ನು ರದ್ದುಪಡಿಸುವ ಮೂಲಕ ಹಿಂದೂ ಮತಗಳನ್ನು ಒಟ್ಟುಗೊಳಿಸಲು ಬಿಜೆಪಿ ಆಶಿಸುತ್ತಿದ್ದರೆ, ಕಾಂಗ್ರೆಸ್ ಕೂಡ ಅದರ ಬಲೆಗೆ ಬಿದ್ದಂತೆ ತೋರುತ್ತಿದೆ. ಅಮಿತ್ ಶಾ ತಮ್ಮ ಸಾರ್ವಜನಿಕ ಸಭೆಗಳಲ್ಲಿ ಈ ಕ್ರಮವನ್ನು ಸಮರ್ಥಿಸಿಕೊಂಡ ಕಾರಣಗಳಲ್ಲಿ ಇದೂ ಒಂದು.

*ಒಕ್ಕಲಿಗ ಮತ್ತು ಲಿಂಗಾಯತ ಮತ ಬ್ಯಾಂಕ್*

ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಯಾವುದೇ ಪಕ್ಷದ ಗೆಲುವಿಗೆ ಪ್ರಮುಖರಾಗಿದ್ದಾರೆ. ಅನೇಕ ಅಂದಾಜಿನ ಪ್ರಕಾರ, ಲಿಂಗಾಯತ ಸಮುದಾಯವು ಜನಸಂಖ್ಯೆಯ ಶೇಕಡಾ 17 ರಷ್ಟಿದ್ದರೆ, ಒಕ್ಕಲಿಗರು ಸುಮಾರು 15 ಶೇಕಡಾ, ಮುಸ್ಲಿಮರು 13 ಶೇಕಡಾ, ಬ್ರಾಹ್ಮಣರು ಶೇಕಡಾ 3, ಇತರ ಹಿಂದುಳಿದ ವರ್ಗಗಳು (ಒಬಿಸಿ) 35 % ಮತ್ತು ಪರಿಶಿಷ್ಟ ಜಾತಿಗಳು ( ಎಸ್‌ಸಿಗಳು) ಮತ್ತು ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು) ಸುಮಾರು 18 % ಇದ್ದಾರೆ.

ಹೆಚ್ಚಿನ ಸಂದರ್ಭಗಳಲ್ಲಿ, ಲಿಂಗಾಯತರು ಮತ್ತು ಒಕ್ಕಲಿಗರು ಒಗ್ಗಟ್ಟಿನಿಂದ ಮತ ಚಲಾಯಿಸಿದ್ದಾರೆ ಇದು ಫಲಿತಾಂಶಗಳಲ್ಲಿಯೂ ಪರಿಣಾಮ ಬೀರಿದೆ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 100 ಕ್ಷೇತ್ರಗಳ ಫಲಿತಾಂಶದ ಮೇಲೆ ಲಿಂಗಾಯತರು ಪ್ರಭಾವ ಬೀರಿದರೆ, 80 ಕ್ಷೇತ್ರಗಳಲ್ಲಿ ಒಕ್ಕಲಿಗರು ಗಮನಾರ್ಹ ಅಸ್ತಿತ್ವವನ್ನು ಹೊಂದಿದ್ದಾರೆ. ಈ ಪೈಕಿ 44 ಕ್ಷೇತ್ರಗಳಲ್ಲಿ ಅವರು ಪ್ರಬಲರಾಗಿದ್ದಾರೆ.

*ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಪ್ರಮುಖರು*

ಲಿಂಗಾಯತ ನಾಯಕರಲ್ಲಿ ಒಬ್ಬರಾದ ಬಿಎಸ್ ಯಡಿಯೂರಪ್ಪ ಅವರ ಬೆಂಬಲವನ್ನು ಬಿಜೆಪಿ ಹೊಂದಿದ್ದರೆ, ಇಬ್ಬರು ಪ್ರಮುಖ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಟಿಕೆಟ್ ನಿರಾಕರಣೆಯ ನಂತರ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಪ್ರಬಲ ಒಕ್ಕಲಿಗ ನಾಯಕರನ್ನು ಕಣಕ್ಕಿಳಿಸಿದೆ. ವರುಣಾದಲ್ಲಿ ಸಿದ್ದರಾಮಯ್ಯ ಅವರು ವಿ ಸೋಮಣ್ಣ ಅವರನ್ನು ಎದುರಿಸಿದರೆ, ಕನಕಪುರದಲ್ಲಿ ಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್ ಕಣಕ್ಕಿಳಿದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+