ಫೋನಿ ಚಂಡಮಾರುತ ರಾಜ್ಯದ ಮೇಲೆ ಪರಿಣಾಮ ಬೀರುವುದೇ?
Recommended Video
ಬೆಂಗಳೂರು, ಮೇ 3: ಫೋನಿ ಚಂಡಮಾರುತ ಇದೀಗ ಒಡಿಶಾಕ್ಕೆ ಲಗ್ಗೆ ಇಟ್ಟಿದ್ದು 185 ಕೆಎಂಪಿಎಚ್ ವೇಗದಲ್ಲಿ ಮಾರುತ ಗಾಳಿ ಬೀಸುತ್ತಿದೆ.
ಫೋನಿ ಚಂಡಮಾರುತದಿಂದಾಗಿ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿತ್ತು. ಈಗ ಚಂಡಮಾರುತ ಒಡಿಶಾ ಕಡೆ ಹೋಗಿರುವುದರಿಂದ ರಾಜ್ಯದಲ್ಲಿ ತೀವ್ರತೆ ಕಡಿಮೆಯಾಗಿದೆ. ಗುರುವಾರ ಸುಬ್ರಹ್ಮಣ್ಯ ದಲ್ಲಿ 20 ಮಿ.ಮೀ, ತಿಪಟೂರಿನಲ್ಲಿ 12 ಮಿ.ಮೀ, ಮಂಡ್ಯದ ಹೆಮ್ಮನಹಳ್ಳಿಯಲ್ಲಿ 8 ಮಿ.ಮೀ ಮಳೆಯಾಗಿದೆ.
ರಾಮನಗರ, ಕೋಲಾರ ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಇನ್ನು ರಾಜ್ಯದಲ್ಲಿ ಒಣಹವೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆ ಕಡಿಮೆಯಾಗಿರುವುದರಿಂದ ಉತ್ತರ ಒಳನಾಡಿನಲ್ಲಿ ತಾಪಮಾನ ಹಿಂದಿನ ದಿನಕ್ಕಿಂತ ಹೆಚ್ಚಾಗಿದೆ. ಬೆಂಗಳೂರಲ್ಲಿ 33 ಡಿಗ್ರಿ ಸೆಲ್ಸಿಯಸ್, ಕಲಬುರ್ಗಿಯಲ್ಲಿ 43.2 ಡಿಗ್ರಿ, ರಾಯಚೂರಿನಲ್ಲಿ 41.5 ಡಿಗ್ರಿ, ವಿಜಯಪುರದಲ್ಲಿ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಬಳ್ಳಾರಿಯಲ್ಲಿ 38 ಡಿಗ್ರಿ, ದಾವಣಗೆರೆಯಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಮಳೆಯಾಗುವ ಸಾದ್ಯತೆ ಕಡಿಮೆ ಇದೆ ಒಣಹವೆ ಮುಮದುವರೆಯಲಿದೆ. ಮೋಡಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನಿಡಿದೆ.












Click it and Unblock the Notifications