SWR: ಜನವರಿ 08ರವರೆಗೆ ವಿವಿಧ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ
ಬೆಂಗಳೂರು, ನವೆಂಬರ್ 25: ವೀರಾಂಗನಾ ಲಕ್ಷ್ಮೀಬಾಯಿ ರೈಲು ನಿಲ್ದಾಣದ 03ನೇ ಪ್ಲಾಟ್ಫಾರ್ಮ್ನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹಲವಾರು ರೈಲುಗಳ ರದ್ದುಗೊಳಿಸಲಾಗಿದೆ. ಜೊತೆಗೆ ರೈಲುಗಳ ಮಾರ್ಗ ಬದಲಾವಣೆಗಳನ್ನು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಅಪ್ಡೇಟ್ ನೀಡಿದೆ. ಪ್ರಯಾಣಿಕರು ಗಮನಿಸಿ ತಮ್ಮ ಸಾರಿಗೆ ಸಂಚಾರಕ್ಕೆ ಪ್ಲಾನ್ ಮಾಡಿಕೊಳ್ಳುವಂತೆ ಕೋರಲಾಗಿದೆ.
ಈ ಕಾಮಗಾರಿಗಳು ನವೆಂಬರ್ 25ರಿಂದ ಜನವರಿ 8, 2026ರವರೆಗೆ ನಡೆಯಲಿ. ಈ ಕಾರಣದಿಂದ ಕಾಮಗಾರಿ ಪ್ರಭಾವವು ದಕ್ಷಿಣ ಪಶ್ಚಿಮ ರೈಲು ವಲಯದ ಹಲವು ರೈಲು ಸೇವೆಗಳ ಮೇಲಾಗಲಿದೆ. ಮೊದಲನೆಯದಾಗಿ, ಲಾಲ್ಕುವಾ-ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್ ವಿಶೇಷ (05074) ನವೆಂಬರ್ 29ರಿಂದ 2026 ಜನವರಿ 3ರವರೆಗೆ ರದ್ದುಗೊಳ್ಳಲಿದೆ.

ಕೆಎಸ್ಆರ್ ಬೆಂಗಳೂರು-ಲಾಲ್ಕುವಾ ಸಾಪ್ತಾಹಿಕ ವಿಶೇಷ (05073), ಡಿಸೆಂಬರ್ 2ರಿಂದ 2026 ಜನವರಿ 6ರವರೆಗೆ ಸಂಚರಿಸುವುದಿಲ್ಲ, ರದ್ದುಗೊಳಿಸಲಾಗಿದೆ. ಅದೇ ರೀತಿ ಹುಬ್ಬಳ್ಳಿ-ಯೋಗನಗರಿ ಋಷಿಕೇಶ ಸಾಪ್ತಾಹಿಕ ವಿಶೇಷ (07363) ನವೆಂಬರ್ 24 ರಿಂದ 2026 ಜನವರಿ 5ರವರೆಗೆ, ಯೋಗನಗರಿ ಋಷಿಕೇಶ-ಹುಬ್ಬಳ್ಳಿ ವಿಶೇಷ (07364) ನವೆಂಬರ್ 27 2025 ರಿಂದ 2026 ಜನವರಿ 8ರವರೆಗೆ ರದ್ದುಗೊಂಡಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಯಶವಂತಪುರ-ಯೋಗನಗರಿ ಋಷಿಕೇಶ ವಿಶೇಷ (06597) ನವೆಂಬರ್ 27 ಮತ್ತು ಯೋಗನಗರಿ ಋಷಿಕೇಶ-ಯಶವಂತಪುರ ವಿಶೇಷ (06598) ನವೆಂಬರ್ 29 ಸೇವೆಗಳನ್ನು ಕೂಡ ರದ್ದುಗೊಳಿಸಲಾಗಿದೆ. ಈ ರದ್ದತಿಗಳು ಹೆಚ್ಚಿನ ಸಂಖ್ಯೆಯ ಉತ್ತರ ದಿಕ್ಕಿನ ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಾರ್ಗ ಬದಲಾವಣೆಯಾದ ರೈಲುಗಳು
ಮಾರ್ಗ ಬದಲಾವಣೆ ವಿಭಾಗದಲ್ಲಿ, ದೆಹಲಿ ಸರಾಯಿ ರೋಹಿಲ್ಲಾ-ಯಶವಂತಪುರ ಸಾಪ್ತಾಹಿಕ ದುರಂತೋ ಎಕ್ಸ್ಪ್ರೆಸ್ (12214) ಡಿಸೆಂಬರ್ 1ರಿಂದ 2026 ಜನವರಿ 5ರವರೆಗೆ ಪ್ರತೀ ಸೋಮವಾರ ಸಂಚರಿಸುವಾಗ ಮಥುರಾ, ಬಯಾನಾ, ಸೋಗಾರಿಯಾ, ರುಶಿಯಾಯಿ ಮತ್ತು ಬಿನಾ ಮಾರ್ಗವಾಗಿ ಚಲಿಸುತ್ತದೆ.
ಎಸ್ಎಂವಿಟಿ ಬೆಂಗಳೂರು-ಗೋಮತಿ ನಗರ ಸಾಪ್ತಾಹಿಕ ಎಕ್ಸ್ಪ್ರೆಸ್ (06529) ನವೆಂಬರ್ 24 ರಿಂದ ಡಿಸೆಂಬರ್ 22 ರವರೆಗೆ ಮತ್ತು ಗೋಮತಿ ನಗರ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್ (06530) ನವೆಂಬರ್ 28ರಿಂದ ಡಿಸೆಂಬರ್ 26ರವರೆಗೆ ಪ್ರಯಾಣಿಸಲಿದೆ. ಈ ರೈಲು ಗೋವಿಂದಪುರಿ, ಭಿಂಸೆನ್, ಓಹನ್ ಕೇಬಿನ್, ಸತ್ರಾ ಮತ್ತು ಇಟರ್ಸಿ ಮಾರ್ಗವಾಗಿ ಸಂಚಾರ ಮಾಡಲಿದೆ ಎಂದು SWR ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.
-
Bengaluru Metro: ORR ರಸ್ತೆಯ ನೀಲಿ ಮಾರ್ಗದಲ್ಲಿ ಸಂಯೋಜಿತ ಗರ್ಡರ್ ಸ್ಥಾಪನೆ -
2000 ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಕಲೆಯ ಸೊಬಗು: 1.32 ಲಕ್ಷ ಕುಶಲಕರ್ಮಿಗಳಿಗೆ ಮಾರುಕಟ್ಟೆ ಭಾಗ್ಯ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್












Click it and Unblock the Notifications