ರಾಜ್ಯದ ರೈತರಿಗೆ ₹246ಗೆ ಸಿಗಬೇಕಿದ್ದ ಯೂರಿಯಾ ₹2000ಕ್ಕೆ ಮಾರಾಟ: ಯತ್ನಾಳ್
ಬೆಂಗಳೂರು, ಡಿಸೆಂಬರ್ 16: ಕರ್ನಾಟಕ ರಾಜ್ಯ ಸರ್ಕಾರವು ರೈತರ ವಿಚಾರದಲ್ಲಿ, ನೆರೆ-ಪ್ರವಾಹ ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡಿದೆ, ಬರೀ ಕೇಂದ್ರದತ್ತ ಬೊಟ್ಟು ಮಾಡುತ್ತಿಲ್ಲ ಎಂಬೆಲ್ಲ ಆರೋಪಗಳನ್ನು ಈಗಾಗಲೇ ಎದುರಿಸಿದೆ. ಇದೀಗ ಕರ್ನಾಟಕದ ರೈತರಿಗೆ ಸಬ್ಸಿಡಿ ದರದಲ್ಲಿ ದೊರೆಯಬೇಕಿದ್ದ ಯೂರಿಯಾ ಗೊಬ್ಬರನವನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ವೈಫಲ್ಯ ಕಾರಣವೆಂದು ದೂರಲಾಗಿದೆ.
ಇದೇ ವಿಚಾರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಕ್ಸ್ ಪೋಸ್ಟ್ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯೂರಿಯಾ ಗೊಬ್ಬರ ಅಕ್ರಮ ಮಾರಾಟವನ್ನು ವಿವರಿಸಿದ್ದಾರೆ. ರೈತರಿಗೆ ನೆರವಾಗಲಿ ಎಂದು ಸಬ್ಸಿಡಿಯಲ್ಲಿ 246 ರೂಪಾಯಿಗೆ ಸಿಗುತ್ತಿದ್ದ ಪ್ರಧಾನ ಮಂತ್ರಿ ಯೂರಿಯ (PM Urea) ಗೊಬ್ಬರವು 2,000 ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾರಾಟವಾಗುತ್ತಿದೆ.

ಈ ಅಕ್ರಮ ಜಾಲವನ್ನು ಕೇಂದ್ರದ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಪತ್ತೆ ಮಾಡಿದೆ. ಬೆಂಗಳೂರಿನ ಅಡಕಮಾರನಹಳ್ಳಿಯಲ್ಲಿರುವ ಗೋಡೌನ್ ನಲ್ಲಿದ್ದ ಅಪಾರ ಪ್ರಮಾಣದ ಯೂರಿಯ ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಕೃಷಿ ಇಲಾಖೆ ಗಮನಕ್ಕೆ ಬಂದಿಲ್ಲವೇ?
ಕೃಷಿ ಇಲಾಖೆಯ ಜಾಗೃತ ಕೋಶ (Vigilance Cell) ಪತ್ತೆ ಮಾಡಲಾಗದ ಅತೀ ದೊಡ್ಡ ಯೂರಿಯ ಹಗರಣವನ್ನು ಕೇಂದ್ರದ ಕಂದಾಯ ಗುಪ್ತಚರ ನಿರ್ದೇಶನಾಲಯ ಪತ್ತೆ ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರದ ವೈಫಲ್ಯದಿಂದ, ಕೃಷಿ ಇಲಾಖೆಯ ನಿರ್ಲಜ್ಜ ಧೋರಣೆ, ಅದಕ್ಷತೆ, ನಿಷ್ಕ್ರಿಯತೆಯಿಂದ ಬ್ಲಾಕ್ ಮಾರ್ಕೆಟ್ ಮಾಫಿಯಾ ಸದ್ದಿಲ್ಲದೇ ತನ್ನ ಜಾಲವನ್ನು ವಿಸ್ತರಿಸಿದೆ ಎಂದು ಅವರು ಆರೋಪಿಸಿದರು.
ಕಾಳಸಂತೆಯ ಮಾಫಿಯಾ ಯೂರಿಯಾದ 'ಕೃತಕ ಬೇಡಿಕೆ' ಸೃಷ್ಟಿಸುತ್ತಿದ್ದರೆ ಕೃಷಿ ಸಚಿವರು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ತೋರಿಸುತ್ತಿದ್ದಾರೆ. ಈಗ, ಬೃಹತ್ ಪ್ರಮಾಣದ ಯೂರಿಯ ವಶವಾಗಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವರು ಇದು ತಮ್ಮ ಇಲಾಖೆಯ ಅಸಮರ್ಥತೆಯೇ ಕಾರಣ ಎಂದು ಒಪ್ಪಿಕೊಳ್ಳಲೇಬೇಕು ಎಂದರು.
ಕೃಷಿ ಸಚಿವರು ಅಧಿಕಾರಿಗಳನ್ನು ಅಮಾನತು ಮಾಡಿ
ಯೂರಿಯ ಇಲ್ಲದೆ ಹೊಲ ಗದ್ದೆಯ ಕೆಲಸವನ್ನು ಬಿಟ್ಟು ರೈತರು ರಾತ್ರಿಯೆಲ್ಲ ಸರದಿ ಸಾಲಿನಲ್ಲಿ ಯೂರಿಯ ಪಡೆಯಬೇಕಾದ ಸ್ಥಿತಿಗೆ ಕಾರಣ ಕೃಷಿ ಇಲಾಖೆಯ ವೈಫಲ್ಯ. ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲೇ ಸ್ಪಷ್ಟೀಕರಣ ಕೊಡಬೇಕು. ಮಾತ್ರವಲ್ಲದೇ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸದಾ ತಾನು ರೈತಪರ ಎಂದು ಹೇಳಿಕೊಳ್ಳುವ ಹಾಗೂ ಪರಿಹಾರ, ಅನುದಾನ ವಿಚಾರ ಬಂದಾಗ ಕೇಂದ್ರದತ್ತ ಬೊಟ್ಟು ಮಾಡುವ ನಾಯಕರ ಈ ಗೊಬ್ಬರ ಪ್ರಕರಣವನ್ನು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತದೆ? ಇದರಲ್ಲಿ ಸರ್ಕಾರ ವೈಫಲತ್ಯೆ ಇದೆಯೋ? ಇಲ್ಲವೋ? ಎಂದು ಬುಧವಾರ ಸದನದಲ್ಲಿ ತಿಳಿಸುವ ನಿರೀಕ್ಷೆಗಳು ಇವೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications