ಧರ್ಮಸ್ಥಳದ ಸುತ್ತಮುತ್ತ ಏನಿದು ಅಸಹಜ ಸಾವು?
ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಜೊತೆ ಸಂದರ್ಶನದ ಆಯ್ದ ಭಾಗ.
ಪ್ರ: ಧರ್ಮಸ್ಥಳದ ಸುತ್ತಮುತ್ತಲಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಸಹಜ ಸಾವು ಪ್ರಕರಣ, ಏನಿದು ಈ ಅಸಹಜ ಪ್ರಕರಣ?
ಶೆಟ್ಟಿ: ಇದು ಇಂದು ನಿನ್ನೆಯ ಕಥೆಯಲ್ಲ ಸ್ವಾಮಿ. ಹತ್ತಾರು ವರ್ಷಗಳಿಂದ ನಡೆಯುತ್ತಿರುವ ಘಟನೆಗಳು. ವಾರಸುದಾರ ಇಲ್ಲದ ಸಾವುಗಳು. ಅದೆಷ್ಟೋ ನಿಗೂಢ ಸಾವನ್ನು ಧರ್ಮಸ್ಥಳ ಸುತ್ತಮುತ್ತಲಿನ ಜನರು ಕಂಡಿದ್ದಾರೆ. RTI ಮೂಲಕ ಸಾಧ್ಯವಾದಷ್ಟು ದಾಖಲೆಗಳನ್ನು ಪಡೆದಿದ್ದೇವೆ. ಹತ್ತು ವರ್ಷಗಳಲ್ಲಿ ಸುಮಾರು 452 ಈ ರೀತಿಯ ಅಸಹಜ ಸಾವಿನ ಪ್ರಕರಣ ನಡೆದಿದೆ. ಒಂದೇ ಒಂದು ಕೇಸು ಪೊಲೀಸ್ ಠಾಣೆಯ ಮೆಟ್ಟಲೇರಲಿಲ್ಲ, ತನಿಖೆ ಕೂಡಾ ನಡೆಯಲಿಲ್ಲ ಎಂದು ಬೇರೆ ಹೇಳ ಬೇಕಾಗಿಲ್ಲ.
ಪ್ರ: ಆಟೋ ಚಾಲಕರಿಗೆ ಧರ್ಮಸ್ಥಳದಲ್ಲಿ 'D Number' ಎಂದು ಕೊಡಲಾಗುತ್ತಿದೆ. ಇದಕ್ಕೆ ವಿರುದ್ದವಾಗಿ ಮಹೇಶ್ ಶೆಟ್ಟಿಯವರು ಜನರನ್ನು ಒಗ್ಗೂಡಿಸಿ ಹೋರಾಟಕ್ಕೆ ಇಳಿದಿದ್ದಾರೆ. ಸೌಜನ್ಯ ಕುಟುಂಬದ ಬಗ್ಗೆ ಅವರಿಗೆ ಯಾವುದೇ ಕನಿಕರವಿಲ್ಲ ಎನ್ನುವ ಮಾತನ್ನು ನೇರವಾಗಿ ಧರ್ಮಾಧಿಕಾರಿಗಳು ಹೇಳಿದ್ದಾರೆ. ಈ ಆರೋಪದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಶೆಟ್ಟಿ: ಇಡೀ ಭಾರತದಲ್ಲಿ ಒಂದು ಕಾನೂನಾದರೆ, ಧರ್ಮಸ್ಥಳದಲ್ಲಿ ಮತ್ತೊಂದು ಕಾನೂನು. ಮತ್ತು ಮೇಲಿನ ಮಾತು ಧರ್ಮಾಧಿಕಾರಿಗಳಿಗೆ ಶೋಭೆ ತರುವಂತದಲ್ಲ. ಅಲ್ಲಿ ಅವರು ಹೇಳಿದ್ದೇ ದರ್ಬಾರು. ಈ ಹಿಂದೆ ನಾನು ರಿಕ್ಷಾ ಯೂನಿಯನ್ ಅಧ್ಯಕ್ಷನಾಗಿದ್ದೆ. ಅಲ್ಲಿ ಸುಮಾರು 200-250 ಆಟೋಗಳಿವೆ ಮತ್ತು ನಾಲ್ಕು ಆಟೋ ಯೂನಿಯನ್ ಗಳಿವೆ. ಈಗ ನಾನು ಯಾವ ಯೂನಿಯನ್ನಿಗೂ ಅಧ್ಯಕ್ಷನಾಗಿಲ್ಲ. ಹಾಲಿ ನಾಲ್ಕೂ ಯೂನಿಯನ್ ಅಧ್ಯಕ್ಷರು ಮಹೇಶ್ ಶೆಟ್ಟಿ ಸದ್ಯ ಅಧ್ಯಕ್ಷನಾಗಿಲ್ಲ ಎಂದು ಬರೆದುಕೊಟ್ಟ ಪತ್ರ ದಾಖಲೆ ನನ್ನಲ್ಲಿದೆ.

ಪ್ರ:ಒಂದು ವರ್ಷ ಸುಮ್ಮನಿದ್ದ ಈ ಸೌಜನ್ಯ ಪ್ರಕರಣಕ್ಕೆ ಮತ್ತೆ ಹೋರಾಟದ ಪ್ರಚೋದನೆ ಸಿಕ್ಕಿದ್ದು ಹೇಗೆ?
ಶೆಟ್ಟಿ: ಪ್ರಚೋದನೆ ಅನ್ನುವುದಕ್ಕಿಂತ ಪ್ರೇರಣೆ ಸರಿಯಾದ ಪದ ಎನ್ನುವುದು ನನ್ನ ನಂಬಿಕೆ. ಮೃತ ಸೌಜನ್ಯ ಮಾಮೂಲಿ ಹುಡುಗಿಯಾಗಿರಲಿಲ್ಲ. ಮನೆಗೆ ಬೇಕಾದ ಮಗಳಾಗಿದ್ದಳು. ತಂದೆ ತಾಯಿಯ ಪ್ರೀತಿಯ ಕೂಸಾಗಿದ್ದಳು. ಸೌಜನ್ಯ ಎನ್ನುವುದು ದೈವೀಶಕ್ತಿ. ಮಂಜುನಾಥ ಮತ್ತು ಅಣ್ಣಪ್ಪಸ್ವಾಮಿಯ ಆರಾಧಕಳು ಅವಳು. ಈ ಹೋರಾಟಕ್ಕೆ ಧುಮಕಲು ಅವಳೇ ನನಗೆ ಪ್ರೇರಣೆ.
ಪ್ರ: ಧರ್ಮಸ್ಥಳದ ಗ್ರಾಮೀಣಾಭಿವೃದ್ದಿ ಯೋಜನೆಗೆ ಸ್ಥಳೀಯರ ವಿರೋಧವಿದೆಯೇ?
ಶೆಟ್ಟಿ: ಖಂಡಿತ ಬೇಸರವಿದೆ. ಬಡ್ಡಿಗೆ ದುಡ್ಡು ಕೊಟ್ಟು ಸೂಕ್ತ ಸಮಯದಲ್ಲಿ ಮರುಪಾವತಿ ಮಾಡದಿದ್ದಲ್ಲಿ ಗೂಂಡಾಗಿರಿ ಮಾಡುತ್ತಾರೆ. ಕಾರ್ಕಳದಲ್ಲಿ ಒಂದು ಮನೆಯವರು ಈ ಯೋಜನೆಯ ಫಲಾನುಭವಿಗಳಾಗಿದ್ದರು. ದುಡ್ಡು ಪಾವತಿಸದಿದ್ದಕ್ಕೆ ಮನೆಯ ಸುತ್ತಮುತ್ತವಿದ್ದ ಮರಗಳನ್ನು ಕಡಿದುಕೊಂಡು ಹೋಗಿದ್ದಾರೆ. ಬಡ್ಡಿ ಕೊಡದಿದ್ದರೆ ಹಂಚು ತೆಗೆದು ಕೊಂಡು ಹೋಗುವುದು ಈ ರೀತಿಯ ಘಟನೆಗಳು ನಡೆಯುತ್ತಲೇ ಇದೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications