Get Updates
Get notified of breaking news, exclusive insights, and must-see stories!

ಧರ್ಮಸ್ಥಳದ ಸುತ್ತಮುತ್ತ ಏನಿದು ಅಸಹಜ ಸಾವು?

ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಜೊತೆ ಸಂದರ್ಶನದ ಆಯ್ದ ಭಾಗ.

ಪ್ರ: ಧರ್ಮಸ್ಥಳದ ಸುತ್ತಮುತ್ತಲಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಸಹಜ ಸಾವು ಪ್ರಕರಣ, ಏನಿದು ಈ ಅಸಹಜ ಪ್ರಕರಣ?
ಶೆಟ್ಟಿ: ಇದು ಇಂದು ನಿನ್ನೆಯ ಕಥೆಯಲ್ಲ ಸ್ವಾಮಿ. ಹತ್ತಾರು ವರ್ಷಗಳಿಂದ ನಡೆಯುತ್ತಿರುವ ಘಟನೆಗಳು. ವಾರಸುದಾರ ಇಲ್ಲದ ಸಾವುಗಳು. ಅದೆಷ್ಟೋ ನಿಗೂಢ ಸಾವನ್ನು ಧರ್ಮಸ್ಥಳ ಸುತ್ತಮುತ್ತಲಿನ ಜನರು ಕಂಡಿದ್ದಾರೆ. RTI ಮೂಲಕ ಸಾಧ್ಯವಾದಷ್ಟು ದಾಖಲೆಗಳನ್ನು ಪಡೆದಿದ್ದೇವೆ. ಹತ್ತು ವರ್ಷಗಳಲ್ಲಿ ಸುಮಾರು 452 ಈ ರೀತಿಯ ಅಸಹಜ ಸಾವಿನ ಪ್ರಕರಣ ನಡೆದಿದೆ. ಒಂದೇ ಒಂದು ಕೇಸು ಪೊಲೀಸ್ ಠಾಣೆಯ ಮೆಟ್ಟಲೇರಲಿಲ್ಲ, ತನಿಖೆ ಕೂಡಾ ನಡೆಯಲಿಲ್ಲ ಎಂದು ಬೇರೆ ಹೇಳ ಬೇಕಾಗಿಲ್ಲ.

ಪ್ರ: ಆಟೋ ಚಾಲಕರಿಗೆ ಧರ್ಮಸ್ಥಳದಲ್ಲಿ 'D Number' ಎಂದು ಕೊಡಲಾಗುತ್ತಿದೆ. ಇದಕ್ಕೆ ವಿರುದ್ದವಾಗಿ ಮಹೇಶ್ ಶೆಟ್ಟಿಯವರು ಜನರನ್ನು ಒಗ್ಗೂಡಿಸಿ ಹೋರಾಟಕ್ಕೆ ಇಳಿದಿದ್ದಾರೆ. ಸೌಜನ್ಯ ಕುಟುಂಬದ ಬಗ್ಗೆ ಅವರಿಗೆ ಯಾವುದೇ ಕನಿಕರವಿಲ್ಲ ಎನ್ನುವ ಮಾತನ್ನು ನೇರವಾಗಿ ಧರ್ಮಾಧಿಕಾರಿಗಳು ಹೇಳಿದ್ದಾರೆ. ಈ ಆರೋಪದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಶೆಟ್ಟಿ: ಇಡೀ ಭಾರತದಲ್ಲಿ ಒಂದು ಕಾನೂನಾದರೆ, ಧರ್ಮಸ್ಥಳದಲ್ಲಿ ಮತ್ತೊಂದು ಕಾನೂನು. ಮತ್ತು ಮೇಲಿನ ಮಾತು ಧರ್ಮಾಧಿಕಾರಿಗಳಿಗೆ ಶೋಭೆ ತರುವಂತದಲ್ಲ. ಅಲ್ಲಿ ಅವರು ಹೇಳಿದ್ದೇ ದರ್ಬಾರು. ಈ ಹಿಂದೆ ನಾನು ರಿಕ್ಷಾ ಯೂನಿಯನ್ ಅಧ್ಯಕ್ಷನಾಗಿದ್ದೆ. ಅಲ್ಲಿ ಸುಮಾರು 200-250 ಆಟೋಗಳಿವೆ ಮತ್ತು ನಾಲ್ಕು ಆಟೋ ಯೂನಿಯನ್ ಗಳಿವೆ. ಈಗ ನಾನು ಯಾವ ಯೂನಿಯನ್ನಿಗೂ ಅಧ್ಯಕ್ಷನಾಗಿಲ್ಲ. ಹಾಲಿ ನಾಲ್ಕೂ ಯೂನಿಯನ್ ಅಧ್ಯಕ್ಷರು ಮಹೇಶ್ ಶೆಟ್ಟಿ ಸದ್ಯ ಅಧ್ಯಕ್ಷನಾಗಿಲ್ಲ ಎಂದು ಬರೆದುಕೊಟ್ಟ ಪತ್ರ ದಾಖಲೆ ನನ್ನಲ್ಲಿದೆ.

Sowjanya Murder an exclusive interview with Kemaru Shree and Mahesh Shetty Thimarodu

ಪ್ರ:ಒಂದು ವರ್ಷ ಸುಮ್ಮನಿದ್ದ ಈ ಸೌಜನ್ಯ ಪ್ರಕರಣಕ್ಕೆ ಮತ್ತೆ ಹೋರಾಟದ ಪ್ರಚೋದನೆ ಸಿಕ್ಕಿದ್ದು ಹೇಗೆ?
ಶೆಟ್ಟಿ: ಪ್ರಚೋದನೆ ಅನ್ನುವುದಕ್ಕಿಂತ ಪ್ರೇರಣೆ ಸರಿಯಾದ ಪದ ಎನ್ನುವುದು ನನ್ನ ನಂಬಿಕೆ. ಮೃತ ಸೌಜನ್ಯ ಮಾಮೂಲಿ ಹುಡುಗಿಯಾಗಿರಲಿಲ್ಲ. ಮನೆಗೆ ಬೇಕಾದ ಮಗಳಾಗಿದ್ದಳು. ತಂದೆ ತಾಯಿಯ ಪ್ರೀತಿಯ ಕೂಸಾಗಿದ್ದಳು. ಸೌಜನ್ಯ ಎನ್ನುವುದು ದೈವೀಶಕ್ತಿ. ಮಂಜುನಾಥ ಮತ್ತು ಅಣ್ಣಪ್ಪಸ್ವಾಮಿಯ ಆರಾಧಕಳು ಅವಳು. ಈ ಹೋರಾಟಕ್ಕೆ ಧುಮಕಲು ಅವಳೇ ನನಗೆ ಪ್ರೇರಣೆ.

ಪ್ರ: ಧರ್ಮಸ್ಥಳದ ಗ್ರಾಮೀಣಾಭಿವೃದ್ದಿ ಯೋಜನೆಗೆ ಸ್ಥಳೀಯರ ವಿರೋಧವಿದೆಯೇ?
ಶೆಟ್ಟಿ: ಖಂಡಿತ ಬೇಸರವಿದೆ. ಬಡ್ಡಿಗೆ ದುಡ್ಡು ಕೊಟ್ಟು ಸೂಕ್ತ ಸಮಯದಲ್ಲಿ ಮರುಪಾವತಿ ಮಾಡದಿದ್ದಲ್ಲಿ ಗೂಂಡಾಗಿರಿ ಮಾಡುತ್ತಾರೆ. ಕಾರ್ಕಳದಲ್ಲಿ ಒಂದು ಮನೆಯವರು ಈ ಯೋಜನೆಯ ಫಲಾನುಭವಿಗಳಾಗಿದ್ದರು. ದುಡ್ಡು ಪಾವತಿಸದಿದ್ದಕ್ಕೆ ಮನೆಯ ಸುತ್ತಮುತ್ತವಿದ್ದ ಮರಗಳನ್ನು ಕಡಿದುಕೊಂಡು ಹೋಗಿದ್ದಾರೆ. ಬಡ್ಡಿ ಕೊಡದಿದ್ದರೆ ಹಂಚು ತೆಗೆದು ಕೊಂಡು ಹೋಗುವುದು ಈ ರೀತಿಯ ಘಟನೆಗಳು ನಡೆಯುತ್ತಲೇ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+