ರಾಜೀನಾಮೆಗೆ ಮುನ್ನ ಕೃಷ್ಣ, ಶಾರನ್ನು ಭೇಟಿ ಮಾಡಿದ್ದೇಕೆ?
ರಾಜೀನಾಮೆಗೆ ಮುನ್ನ ಎಸ್ಸೆಂ ಕೃಷ್ಣ ಅಮಿತ್ ಶಾರನ್ನು ಭೇಟಿಯಾಗಿದ್ದೇಕೆ? ಕಾಂಗ್ರೆಸ್ ತೊರೆದಿರುವ ಅವರು ಬಿಜೆಪಿ ಸೇರುತ್ತಾರಾ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಕಾಲವೇ ಉತ್ತರಿಸಲಿದೆ.
ಬೆಂಗಳೂರು, ಜನವರಿ 30 : ಶ್ರೀನಿವಾಸ ಪ್ರಸಾದ ರಾಜೀನಾಮೆ, ಮಹದೇವ ಪ್ರಸಾದ್ ಸಾವು, ಮೇಟಿ ಲೈಂಗಿಕ ಹಗರಣ, ಜಾರಕಿಹೊಳಿ ಐಟಿ ರೇಡು ಮುಂತಾದ ಘಟನೆಗಳಿಂದ ಜರ್ಝರಿತವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮುಟ್ಟಿನೋಡಿಕೊಳ್ಳುವಂಥ ಹೊಡೆತ ಕೊಟ್ಟಿರುವ ಎಸ್ಎಂ ಕೃಷ್ಣ ಅವರ ಬಳಿಯಿಂದ ಮತ್ತೊಂದು ಅಚ್ಚರಿಯ ಸುದ್ದಿಯೊಂದು ಬಂದಿದೆ.
ಅದೇನೆಂದರೆ, ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಜನವರಿ 28ರ ಐದು ದಿನ ಮೊದಲು ಜನವರಿ 23ರಂದು, 84 ವರ್ಷದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು, ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಬಿಜೆಪಿಯ ಮೂಲಗಳು ಈ ಸುದ್ದಿಯನ್ನು ಖಚಿತಪಡಿಸಿವೆ. [ಸೋತು ಸೊರಗಿದ್ದ ಅತೃಪ್ತರನ್ನು ಬಡಿದೆಬ್ಬಿಸಿದ ಕೃಷ್ಣರ ಪಾಂಚಜನ್ಯ]
ಕೃಷ್ಣ ಅವರು ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಅವರಿಗೆ ರವಾನಿಸುತ್ತಿದ್ದಂತೆ, ಕಾಂಗ್ರೆಸ್ ಪಕ್ಷದಲ್ಲಿ ಕಾರ್ಮೋಡ ಕವಿದಂಥ ವಾತಾವರಣ ಸೃಷ್ಟಿಯಾಗಿದ್ದರೆ, ಬಿಜೆಪಿ ಪಾಳಯದಲ್ಲಿ ಕಾರ್ಮೋಡಗಳೆಲ್ಲ ಮರೆಯಾಗಿ ಹೊಂಬಿಸಿಲು ಮೂಡಿದಂಥ ವಾತಾವರಣ ಸೃಷ್ಟಿಯಾಗಿತ್ತು. ಬಿಜೆಪಿಯ ನಾಯಕರು, ಕೃಷ್ಣ ಬಿಜೆಪಿ ಸೇರುವುದಾದರೆ ಸ್ವಾಗತ ಎಂದು ಹೇಳಿಕೆ ನೀಡಿದರು. [ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಶನಿ ಇದ್ದಂತೆ-ಜನಾರ್ದನ ಪೂಜಾರಿ]

ಸ್ವಾಗತ ಕೋರಿದ ಸದಾನಂದ ಗೌಡ
ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು, "ಎಸ್ಎಂ ಕೃಷ್ಣ ಅವರು ಸನ್ನಡತೆಯ ರಾಜಕಾರಣಿ. ಅವರು ಬಿಜೆಪಿ ಸೇರುವುದಾದರೆ ಮುಕ್ತಹಸ್ತದಿಂದ ಅವರನ್ನು ಬರಮಾಡಿಕೊಳ್ಳುತ್ತೇವೆ. ಅವರು ಪಕ್ಷಕ್ಕೆ ಖಂಡಿತ ಬಲ ನೀಡುತ್ತಾರೆ. ಇನ್ನಷ್ಟು ನಾಯಕರು ಕಾಂಗ್ರೆಸ್ ತೊರೆಯುವ ನಿರೀಕ್ಷೆಯಿದೆ. ನಾಯಕರ ಗಣನೆ ತೆಗೆದುಕೊಂಡರೆ ಕಾಂಗ್ರೆಸ್ ಬಲ ಭಾರೀ ಕುಸಿಯಲಿದೆ" ಎಂದಿದ್ದರು.[ರಾಜಕೀಯ ನಿವೃತ್ತಿ ಡಿಕ್ಷನರಿಯಲ್ಲೇ ಇಲ್ಲ: ಎಸ್ಸೆಂ ಕೃಷ್ಣ]

ಮಂಕಾಗಿದ್ದ ಬಿಜೆಪಿಗೆ ಹೊಸ ಕಳೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೂಡ ಕೃಷ್ಣ ಅವರು ಬಿಜೆಪಿ ಸೇರಿಕೊಂಡರೆ ಸುಸ್ವಾಗತ ಕೋರುವುದಾಗಿ ಹೇಳಿದ್ದಾರೆ. ಕೃಷ್ಣ ನಿರ್ಗಮನದಿಂದ ಕಾಂಗ್ರೆಸ್ ದುರ್ಬಲವಾಗಿ ಕಾಣುತ್ತಿದ್ದರೆ, ಯಡಿಯೂರಪ್ಪ ಮತ್ತು ಈಶ್ವರಪ್ಪ ಗುದ್ದಾಟದಿಂದ ಮಂಕಾಗಿದ್ದ ಬಿಜೆಪಿಗೆ ಹೊಸ ಕಳೆ ಬಂದಂತಾಗಿದೆ.[ಎಸ್.ಎಂ. ಕೃಷ್ಣರ ನಿವಾಸದಲ್ಲಿ ಕಾಂಗ್ರೆಸ್ ನಾಯಕರ ಚರ್ಚೆ]

ಚುನಾವಣೆಯಲ್ಲಿ ಬಿಜೆಪಿಗೆ ಬಲ ತರಲಿದ್ದಾರೆ ಕೃಷ್ಣ
ಇದೀಗ ಕೇಳಿಬರುತ್ತಿರುವ ಸುದ್ದಿಯೇನೆಂದರೆ, ಅಮಿತ್ ಶಾ ಅವರನ್ನು ಭೇಟಿಯಾದ ನಂತರ ಕಾಂಗ್ರೆಸ್ಗೆ ಗುಡ್ ಬೈ ಹೇಳಿರುವ ಎಸ್ಸೆಂ ಕೃಷ್ಣ ಸದ್ಯದಲ್ಲಿಯೇ ಭಾರತೀಯ ಜನತಾ ಪಕ್ಷ ಸೇರಲಿದ್ದಾರೆ ಅಥವಾ 2018ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯಹಸ್ತ ಚಾಚಲಿದ್ದಾರೆ. ಯಾವುದಾದರೂ ಬಿಜೆಪಿಗೆ ಲಾಭವೇ.[ಎಸ್ ಎಂ ಕೃಷ್ಣ ಅಂದ್ರೆ ನೆನಪಾಗುವ ಈ ಐದು ವಿಚಾರ]

ಕಾಂಗ್ರೆಸ್ ವರ್ಚಸ್ಸಿಗೆ ಭಾರೀ ಹೊಡೆತ
ಕೃಷ್ಣ ಅವರ ನಡೆಯಿಂದ ಕಾಂಗ್ರೆಸ್ ವರ್ಚಸ್ಸಿಗೆ ಭಾರೀ ಹೊಡೆತ ನೀಡಿರುವುದಂತೂ ಗ್ಯಾರಂಟಿ. ಸಿದ್ದರಾಮಯ್ಯ ಅವರ ನಿರ್ಲಕ್ಷ್ಯದಿಂದ ಘಾಸಿಗೀಡಾಗಿದ್ದ ಕೃಷ್ಣ ಅವರು, ಆತ್ಮಾಭಿಮಾನಕ್ಕೆ ಧಕ್ಕೆ ನೀಡುತ್ತಿರುವ ಪಕ್ಷದಲ್ಲಿ ನಾನಿರುವುದಿಲ್ಲ ಎಂದು ಹೇಳಿ ಹೊರಬಂದಿದ್ದಾರೆ. ರಾಹುಲ್ ಗಾಂಧಿ ಕೂಡ ಹಿಂದೆ ಕೃಷ್ಣ ಅವರನ್ನು ಕಡೆಗಣಿಸಿದ್ದಾರೆ.

ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಗ್ಯಾರಂಟಿ
"ಹಳೇ ಮೈಸೂರು ಪ್ರಾಂತ್ಯದಲ್ಲಿ ಎಸ್ಸೆಂ ಕೃಷ್ಣ ಅವರು ಮೊದಲಿನ ಹಿಡಿತ ಹೊಂದಿರದಿರಬಹುದು. ಕಾಂಗ್ರೆಸ್ಸನ್ನು ಗೆಲ್ಲಿಸಲು ಸಾಧ್ಯವಾಗದಿರಬಹುದು. ಆದರೆ, ಅವರ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವುದಂತೂ ಖಚಿತ. ಅದು ಕಾಂಗ್ರೆಸ್ ಪಕ್ಷದ ಕಳವಳಕ್ಕೆ ಕಾರಣವಾಗಿದೆ." ಎಂದು ಕಾಂಗ್ರೆಸ್ ಪದಾಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಪರಂ ಮತ್ತು ಡಿಕೆಶಿ ಪ್ರಯತ್ನ ವಿಫಲ
ಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಅವರನ್ನು ಮನವೊಲಿಸಿ, ರಾಜೀನಾಮೆ ಹಿಂತೆಗೆದುಕೊಳ್ಳಲು ದೌಡಾಯಿಸಿದ್ದು ಗೃಹ ಸಚಿವ ಡಾ. ಎಂ. ಪರಮೇಶ್ವರ ಮತ್ತು ಕೃಷ್ಣ ಅವರ ಪಟ್ಟಶಿಷ್ಯ ಡಿಕೆ ಶಿವಕುಮಾರ್ ಅವರು. ಆದರೆ, ಅವರ ಪ್ರಯತ್ನ ಫಲ ನೀಡಿಲ್ಲ.

ಸಾಂತ್ವನಗೊಳಿಸುವ ಕೆಲಸ ಸಿದ್ದು ಮಾಡಲಿಲ್ಲ
ಪರಮೇಶ್ವರ ಮತ್ತು ಡಿಕೆಶಿ ಅವರನ್ನು ಹೊರತುಪಡಿಸಿದರೆ, ಕೃಷ್ಣ ಅವರನ್ನು ಕಡೆಗಣಿಸಿರುವ ಸಿದ್ದರಾಮಯ್ಯ ಅವರಾಗಲಿ, ಕರ್ನಾಟಕದ ಕಾಂಗ್ರೆಸ್ ಸಂಸದರಾಗಲಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವ, ಮನವೊಲಿಸುವ ಪ್ರಯತ್ನವನ್ನೇ ಮಾಡಿಲ್ಲ. ಇದು ಕೃಷ್ಣ ಅವರಿಗೆ ಭಾರೀ ಹೊಡೆತ ನೀಡಿದೆ.

ರಾಜಕೀಯ ನಿವೃತ್ತಿ ಇಲ್ಲವೇ ಇಲ್ಲ
ವಯಸ್ಸು 84 ಆಗಿದ್ದರೂ ಎಸ್ಸೆಂ ಕೃಷ್ಣ ಅವರಲ್ಲಿ ರಾಜಕೀಯ ಇನ್ನೂ ಯೌವನಾವಸ್ಥೆಯಲ್ಲಿದೆ. ರಾಜಕಾರಣದಲ್ಲಿ ಸಾಕಷ್ಟು ಮಾಗಿರುವ ಅವರ ಮನದಲ್ಲಿ ರಾಜಕೀಯ ಇನ್ನೂ ಹಚ್ಚಹಸಿರಾಗಿದೆ, ಇನ್ನೂ ಮಾಡಬೇಕೆಂಬ ಹುಮ್ಮಸ್ಸು ತುಂಬಿಕೊಂಡಿದೆ.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications